ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭಾಶಯಗಳು. ದೇಶದ ಆಡಳಿತಾತ್ಮಕ ವಿಷಯಗಳಲ್ಲಿ ಪತ್ರಿಕೆ ಶಕ್ತಿಯುತ ಆಯುಧವಾಗಿ ಹೊರಹೊಮ್ಮಿದೆ.
ದಿನ ಪತ್ರಿಕೆಗಳ ಸುದ್ದಿ ಬೆಳಿಗ್ಗೆ ಜನರ ಮೊದಲ ಅಗತ್ಯ ಎಂದು ಹೇಳಬಹುದು. ಪತ್ರಿಕೆಗಳನ್ನು ಓದದೆ ಜನರು ಬೆಳಿಗ್ಗೆ ಕಾಪಿ ಕುಡಿಯಲು ಇಷ್ಟಪಡದವರು ಇದ್ದಾರೆ. ಭಾರತ ದೇಶದಲ್ಲಿ ಸುದ್ದಿ ವಾಹಿನಿಯ ಪತ್ರಿಕೆ ಇತಿಹಾಸವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರೆ, ಅದು ಬಹಳಷ್ಟು ಪ್ರಾಚೀನವಾದುದು, ಅದು ಕೋಲ್ಕತ್ತಾದಲ್ಲಿ ಪ್ರಾರಂಭವಾಯಿತು ಎಂದು ತಿಳಿದುಬಂದಿದೆ. ಈ ಮೊದಲು ಪತ್ರಿಕೆ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು.
ಕಾಲುಗಳು ಕಳೆದಂತೆ ದೇಶದಲ್ಲಿ ಆಧುನಿಕ ತಂತ್ರಜ್ಞಾನ ಬೆಳೆದಂತೆ ಹೊಸ ಆವಿಷ್ಕಾರಗಳ ಫಲದಿಂದ ಮಾಹಿತಿ ವಿನಿಮಯ ತಕ್ಷಣಕ್ಕೆ ಲಭ್ಯವಾಗುತ್ತಿದೆ. ತಾಂತ್ರಿಕವಾಗಿ ಮುದ್ರಣದಲ್ಲಿ ವೇಗ ಜಾಸ್ತಿ ಕಂಡಿದೆ. ಈ ಎಲ್ಲಾ ಕಾರಣದಿಂದ ಕೆಲವೇ ಗಂಟೆಗಳಲ್ಲಿ ಸಾವಿರಾರು ಪ್ರತಿಗಳನ್ನು ಮುದ್ರಣವಾಗುತ್ತಿದೆ ಇದರಿಂದಾಗಿ ಜನರಿಗೆ ಸುದ್ದಿಗಳನ್ನು ಮುಟ್ಟಿಸುವ ಕಾರ್ಯದಲ್ಲಿ ಯಶಸ್ಸು ಕಂಡಿದೆ.
ದೇಶದ ಸಂವಿಧಾನದ ಆಡಳಿತದಲ್ಲಿ ಶಾಸಕಾಂಗ. ಕಾರ್ಯಾಂಗ. ನ್ಯಾಯಾಂಗ ಇವುಗಳ ಅನುಸಾರವಾಗಿ ಪತ್ರಿಕೆ ವಲಯವು ಸಂವಿಧಾನದಲ್ಲಿ ಆಡಳಿತದಲ್ಲಿ ಒಂದು ಭಾಗವಾಗಿದೆ. ಆಡಳಿತಾತ್ಮಕ ದುರಾಡಳಿತವನ್ನು ಜನರಿಗೆ ಎಳೆಎಳೆಯಾಗಿ ಮುಟ್ಟಿಸಿ. ಆಡಳಿತಗಾರರಿಗೆ ಚಾಟಿ ಬೀಸಿ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಪತ್ರಿಕೆಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿದೆ. ಅದೇ ರೀತಿ ಆಡಳಿತದ ಉತ್ತಮ ಗುಣಮಟ್ಟದ ಕೆಲಸಗಳನ್ನು ಪ್ರಶಂಸೆ ಮಾಡಿರುವ ವಿಚಾರಗಳು ಸಾಕಷ್ಟು ಇವೇ.
ಪತ್ರಿಕೋದ್ಯಮದ ಪರಮಗುರಿ ಸತ್ಯ ಶೋಧನೆಯ ಜೊತೆಗೆ ನ್ಯಾಯ ಹಾಗೂ ಅನ್ಯಾಯಗಳನ್ನು ಜಗತ್ತಿಗೆ ಸಾರುವುದು ಈ ಕಾರ್ಯಕ್ಕೆ ಒಂದು ಅಗಾಧವಾದ ಬುದ್ಧಿಶಕ್ತಿ ಬೇಕು, ಪತ್ರಿಕೆ ನೀತಿಯನ್ನು ದುರುಪಯೋಗ ಮಾಡಿಕೊಂಡರೆ ಮಹಾ ಅಪರಾಧ ಎಂದು ಮಹಾತ್ಮ ಗಾಂಧಿ ಅವರ ಅಭಿಪ್ರಾಯವಾಗಿತ್ತು , ಪ್ರಸ್ತುತ ಈ ಸಂದರ್ಭದಲ್ಲಿ ಪತ್ರಿಕೆ ಸಂವಿಧಾನದ ಆಡಳಿತಕ್ಕೆ ಪ್ರೇರಣೆಯಾಗಿದೆ ಇದಕ್ಕೆ ಸಾಕ್ಷಿ=ಗುಡ್ಡೆಯಾಗಿ ದುರಾಡಳಿತ. ಕೋಲೆ ಸುಲಿಗೆ. ಭ್ರಷ್ಟಾಚಾರ. ಕಳಪೆ ಕಾಮಗಾರಿ ಈ ಎಲ್ಲಾ ವಿಚಾರಗಳನ್ನು ನಾಗರಿಕ ಸಮಾಜದ ಮುಂದಿಟ್ಟು ನ್ಯಾಯದ ಹೋರಾಟಕ್ಕೆ ಸುದ್ದಿಮಾದ್ಯಮ ತಲೆಎತ್ತಿ ನಿಂತಿದೆ.
ಲೇಖನ-ರಘು ಗೌಡ 9916101265.


