Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒನ್ ಮಿನಿಟ್ ಉಮಾ ಜಯಕುಮಾರ್ ಗೆ ಮುಡಿಗೇರಿದ ಪರಿಮಳ ಪ್ರಶಸ್ತಿ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒನ್ ಮಿನಿಟ್ ಉಮಾಜಯಕುಮಾರ್ ರವರಿಗೆ ಮುಡಿಗೇರಿದ ಪರಿಮಳ ಪ್ರಶಸ್ತಿ ಕರ್ನಾಟಕಕ್ಕೆ ಮನೆಮಾತಾಗಿರುವ ಖ್ಯಾತ ಅಲಂಕಾರ ತಜ್ಞೆ ಒನ್ ಮಿನಿಟ್ ಉಮಾ ಜಯಕುಮಾರ್ ರವರು ತಮ್ಮ ಅನನ್ಯ ಸಾಧನೆಗಳ ಮೂಲಕ ಮತ್ತೊಂದು ಮಹತ್ವದ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ.

25ನೇ ಫೆಬ್ರವರಿ 2026ರಂದು ಮಂತ್ರಾಲಯದಲ್ಲಿ ಪ್ರದಾನಗೊಳ್ಳುವ ಅತಿಶ್ರೇಷ್ಠ ಪರಿಮಳ ಪ್ರಶಸ್ತಿ ಅವರಿಗೆ ಲಭಿಸಿದ್ದು, ಇದು ಅವರ ಸಾಧನಾ ಪಥಕ್ಕೆ ಮತ್ತೊಂದು ಗೌರವದ ಗರಿಯಾಗಿದೆ.

ಸೌಂದರ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗಳನ್ನು ಮಾಡಿದ ಉಮಾ ಜಯಕುಮಾರ್ ರವರು ಇದುವರೆಗೆ 14 ಬಾರಿ ವಿಶ್ವದಾಖಲೆ ನಿರ್ಮಿಸಿ, ನೂರಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಗೌರವ ಡಾಕ್ಟರೇಟ್, ಆರ್ಯಭಟ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಇವರ ಸಾಧನೆಗೆ ಸಾಕ್ಷಿಯಾಗಿವೆ.

ಕೇವಲ 30 ಸೆಕೆಂಡುಗಳಲ್ಲಿ ಮಹಿಳೆಗೆ ಅಲಂಕಾರ, ಕೇಶವಿನ್ಯಾಸ ಮತ್ತು ವಸ್ತ್ರವಿನ್ಯಾಸ ಮಾಡುವ ಅಪರೂಪದ ಕೌಶಲ್ಯ ಇವರದಾಗಿದ್ದು, ಇದು ರಾಷ್ಟ್ರಮಟ್ಟದಲ್ಲಿಯೇ ವಿಶೇಷ ಗಮನ ಸೆಳೆದಿದೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಕಾರ್ಯಾಗಾರಗಳನ್ನು ನಡೆಸಿ, ಸಾವಿರಾರು ಮಹಿಳೆಯರಿಗೆ ವೃತ್ತಿಪರ ಮಾರ್ಗದರ್ಶನ ನೀಡಿರುವ ಹೆಗ್ಗಳಿಕೆ ಇವರದು.

ಅನೇಕ ವರ್ಷಗಳಿಂದ ಮಾಧ್ಯಮಗಳ ಮೂಲಕ ಅಲಂಕಾರ ಹಾಗೂ ಕೇಶವಿನ್ಯಾಸ ಕ್ಷೇತ್ರದಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಉಪಯುಕ್ತ ಸಲಹೆಗಳು ಮತ್ತು ಟಿಪ್ಸ್ ನೀಡುವಲ್ಲಿ ಇವರದು ಎತ್ತಿದ ಕೈ. ವೃತ್ತಿಪರ ಸಾಧನೆಯ ಜೊತೆಗೆ ಸಮಾಜಸೇವೆಗೂ ಅವರು ಆದ್ಯತೆ ನೀಡಿದ್ದು, ತಮ್ಮ ಆದಾಯದ ಒಂದು ಭಾಗವನ್ನು ಬಡಬಗ್ಗರಿಗೆ, ದೇವಾಲಯಗಳಿಗೆ, ಮಂಗಳಮುಖಿಯರಿಗೆ ಹಾಗೂ ವಿಕಲಚೇತನರಿಗೆ ಸಹಾಯವಾಗಿ ನೀಡುತ್ತಾ ಬಂದಿದ್ದಾರೆ.

ಇಂತಹ ಬಹುಮುಖ ಸಾಧನೆ, ಸಮಾಜಪರ ಕಾಳಜಿ ಮತ್ತು ಸೇವಾ ಮನೋಭಾವದ ಫಲವಾಗಿ ಲಭಿಸಿದ ಪರಿಮಳ ಪ್ರಶಸ್ತಿ, ಒನ್ ಮಿನಿಟ್ ಉಮಾಜಯಕುಮಾರ್ ರವರ ಜೀವನ ಸಾಧನೆಗೆ ಲಭಿಸಿದ ಮತ್ತೊಂದು ಮಹತ್ವದ ಗೌರವವಾಗಿದೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ