Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿವ ಸಿಂಚನ

Advertisement
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಶಿವ ಸಿಂಚನ
ಬಗೆದಷ್ಟು

ಕೌತುಕದ ಆವಿಷ್ಕಾರ
ಜಲ ಸಂಗಮದ
ಜಲಧಾರ
ಪುಳಕಿತಗೊಂಡವರ
ಜೀವನದ ಪ್ರವರ

ತ್ರಿವೇಣಿ ಸಂಗಮದ
ತಿರುಳರಿತ ನಾಗಾಘೋರಿಗಳ
ಸಂಗಮ
ಸಾಧು ಸಂತರ
ಸಮಾಗಮ
ಭಕ್ತ ಸಾಗರದ
ಸರಿಗಮ

ನಲಿದರು
ನರ್ತಿಸಿ ಮೆರೆದರು
ಕಳಚಿ ಕರ್ಮವ
ಧರಿಸಿದರು ಧರ್ಮದ
ಧೋತರವ
ಅಭಿವಂದಿಸಿದರು
ಗಂಗೆ ಯಮುನೆ ಸರಸ್ವತಿಯರಿಗೆ

ಕೊಂಡೊಯ್ದರು
ಮನುಕುಲದ
ಮನದ , ನೆಲದ
ಕಪ್ಪುಗಳನು
ಹರಿಸಿದರು
ಆದರ್ಶ ಜೀವನದ
ಆವಿಷ್ಕಾರವನು

ಕೋಟಿ ಕೋಟಿ
ಭಕುತರ ಬವಣೆ
ನೀಗಿಸಿ ಧನ್ಯಳಾಗಿಸಿದಳು
ಗಂಗೆ
ಮುಕ್ತವಾಗಿಸಿದಳು
ಮೃತುವಿನಿಂದ
ತಿಳಿ ನೀಲ
ಯಮುನೆ
ಸ್ಥಿತ ಪ್ರಜ್ಞಳಾ ಗಿಸಿದಳು
ಗುಪ್ತಗಾಮಿನಿ
ಸರಸ್ವತಿ

ಅದೇಕೆ ಈ ಕುಂಭ ಸ್ನಾನ
ನೀಗಿಸುವಳೇ ಜಗದ
ಜನರ ಹಸಿವ
ಲಕುಮಿಯ ಬವಣೆಯ
ಎನುವ ಅಧಮರ
ಅನುಭೂತಿಸಿದಳು
ತ್ರಿವೇಣಿ

ಸಂಗಮದಲಿ
ಸಮಗಮರಾದರು
ಮೋಕ್ಷ ಪಡೆದು
ಪುನೀತರಾದರು
ಪುನರ್ಜನ್ಮದ ಪಥಕೆ
ಸಾಗಿದ ಪುಣ್ಯಾತ್ಮರು
ನಮಿಸುವುದು
ಭರತ ಭೂಮಿ
ಅನವರತ

ತ್ರಿವೇಣಿಯಲಿ
ಮಿಂದದವರು
ಮಿಂದವರ ದರುಶನವ
ಪಡೆದು ಪಾವನರಾಗಿರಿ
ಪಡೆಯಿರಿ ಹಿರಿಯರ
ಆಶೀರ್ವಾದ
ಸ್ಪರ್ಶಿಸಿ ಪಾದವ

ಇಹುದು ಶಿವರಾತ್ರಿ
ಶಿವನ ಜಟೆಯಲಿ
ದುಮ್ಮಿಕ್ಕುವುದು ಗಂಗೆ ಮನದ ಧರೆಗೆ
ಭಜಿಸಿ ಭುಜಿಸಿ
ಅಹೋರಾತ್ರಿ ಜಪಿಸಿ
ಶಿವ ಸಂಗಮದಲಿ
ಮೇಳೈಸಿ
ಮನವರಳಿಸಿ
ಮನದ ವಿಕೃತಿಯ ಮರೆತು
ಪಡೆಯಿರಿ
ಶಿವ ಸಿಂಚನ
ಕವಿತೆ-ಗುಜ್ಜರ್,ದಾವಣಗೆರೆ
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ