Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಮಯ ಪಾಲನೆ ಮತ್ತು ದಕ್ಷತೆಗೆ ಮತ್ತೊಂದು ಹೆಸರೇ ಸರ್. ಎಂ. ವಿಶ್ವೇಶ್ವರಯ್ಯ ​

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
​ಪ್ರತಿಯೊಂದು ನಿಮಿಷವನ್ನೂ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದ ಸರ್. ಎಂ. ವಿಶ್ವೇಶ್ವರಯ್ಯ ಅವರು ಸಮಯ ಪಾಲನೆಗೆ ಅಪಾರ ಮಹತ್ವ ನೀಡುತ್ತಿದ್ದರು ಎಂದು ನಗರಸಭೆ ಪೌರಾಯುಕ್ತ ಎ.ವಾಸೀಂ ಹೇಳಿದರು.
ಹಿರಿಯೂರು ತಾಲೂಕು ಪ್ರಾಕ್ಟೀಸಿಂಗ್ ಆರ್ಕಿಟೆಕ್ಟ್ ಹಾಗೂ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ವತಿಯಿಂದ ಹಿರಿಯೂರಿನಲ್ಲಿ ಆಯೋಜಿಸಿದ್ದ ಸರ್ ಎಂ.ವಿ. ಅವರ ಜನ್ಮದಿನಾಚರಣೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

​ ಸರ್ ಎಂ.ವಿ. ಅವರು ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ಆಡಳಿತ ಮತ್ತು ತಾಂತ್ರಿಕ ಕಾರ್ಯಗಳಲ್ಲಿ ಯಾವುದೇ ಆಯಾಸವಿಲ್ಲದೆ ಕೆಲಸ ಮಾಡುತ್ತಿದ್ದರು ಎಂದು ವಾಸೀಂ ತಿಳಿಸಿದರು.​

Advertisement

​ಅಧಿಕೃತ ಕೆಲಸಕ್ಕೆ ಸರ್ಕಾರದ ಹಣ ಮತ್ತು ದೀಪಗಳನ್ನು (ಮೇಣದಬತ್ತಿ), ವೈಯಕ್ತಿಕ ಓದಿಗೆ ಸ್ವಂತ ದೀಪಗಳನ್ನು ಬಳಸುವ ಮೂಲಕ ಪ್ರಾಮಾಣಿಕತೆಗೆ ಅವರು ಹೆಸರಾಗಿದ್ದರು ಎಂದು ಹೇಳಿದರು.

​ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸುವಾಗ ಭ್ರಷ್ಟಾಚಾರರಹಿತ ಹಾಗೂ ಪಾರದರ್ಶಕ ಆಡಳಿತ ನೀಡಿದರು.​ ​ಪುಣೆಯ ಖಡಕ್ವಾಸ್ಲಾ ಅಣೆಕಟ್ಟು ಹಾಗೂ ಕೆ.ಆರ್.ಎಸ್ ಅಣೆಕಟ್ಟುಗಳಿಗೆ ಸ್ವಯಂಚಾಲಿತ ನೀರಿನ ಗೇಟ್‌ಗಳನ್ನು ವಿನ್ಯಾಸಗೊಳಿಸಿ ಪೇಟೆಂಟ್ ಪಡೆದರು ಎಂದು ತಿಳಿಸಿದರು.

​ ಪ್ರಾಕ್ಟೀಸಿಂಗ್ ಆರ್ಕಿಟೆಕ್ಟ್ ಹಾಗೂ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಎಚ್.ಟಿ. ​ಎಚ್.ಪಿ. ಗುರುದೇವ್ ಅಧ್ಯಕ್ಷತೆ ವಹಿಸಿ ಮಾತನಾಡಿ "ಕೈಗಾರಿಕೀಕರಣ ಇಲ್ಲವೇ ವಿನಾಶ" ಎಂಬ ಸೂತ್ರದೊಂದಿಗೆ ಭದ್ರಾವತಿಯ ಕರ್ಬ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಬ್ಯಾಂಕ್ (ಎಸ್‌ಬಿಎಂ), ಮೈಸೂರು ವಿಶ್ವವಿದ್ಯಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತುಗಳ ಸ್ಥಾಪನೆಗೆ ಸರ್ ಎಂವಿ ಅವರು ಕಾರಣರಾದರು. ​ಅವರ ಅಚಲ ಕರ್ತವ್ಯ ನಿಷ್ಠೆ ಮತ್ತು ಸಾರ್ವಜನಿಕ ಜೀವನದ ಮೌಲ್ಯಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿವೆ ಎಂದು ತಿಳಿಸಿದರು.
ಸಂಸ್ಥೆಯ ಖಜಾಂಚಿ ವಿ.ಮಂಜುನಾಥ್ ಮಾತನಾಡಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ 166ನೇ ಜನ್ಮದಿನದ ಅಂಗವಾಗಿ ಈ ವಿಶೇಷ ಕಾರ್ಯಕ್ರಮದಲ್ಲಿ ನಗರಸಭೆ, ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆ, ಲೋಕೋಪಯೋಗಿ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಭಾಗವಹಿಸುವ ಮೂಲಕ ಕಾರ್ಯಕ್ರಮದ ಗೌರವ ಹೆಚ್ಚಿಸಿದ್ದಾರೆ ಎಂದರು.​

ಹಿರಿಯೂರು ನಗರಸಭೆ ಎಇಇ​ ​​ಕೆ.ಟಿ. ಸುನಿಲ್, ​ಯುಬಿಪಿ ಇಇ ಚಂದ್ರಪ್ಪ,  ಲೋಕೋಪಯೋಗಿ ಇಲಾಖೆ ಎಇಇ ಅನಂತರಾಜು, ವಾಣಿ ವಿಲಾಸ ಜಲಾಶಯದ ಎಇಇ ಜಯಕುಮಾರ್ ಆರ್.ಎಸ್, ಯುಬಿಪಿ ಎಇಇ ಬಸವರಾಜ್ ಬಿ.ಎಚ್, ಚಿತ್ರದುರ್ಗ ನಗರಸಭೆ ಎಇಇ ರಜಿನಿ ಕೆ., ಯುಬಿಪಿ ಎಇಇ ವೀರಣ್ಣ, ಲೋಕೋಪಯೋಗಿ ಇಲಾಖೆ ಇಇ ಶ್ರೀರಂಗಪ್ಪ, ಎಇ ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿ ಶೀಟರ್ ಬಂಧನಪ್ರಜ್ವಲ್ ರೇವಣ್ಣ ರಾಜಕೀಯ ಅಂತ್ಯಕ್ಕೆ ಕುಮಾರಸ್ವಾಮಿಯೇ ಕಾರಣ: ಎಚ್.ಸಿ. ಬಾಲಕೃಷ್ಣ ಗಂಭೀರ ಆರೋಪ!ಯುಪಿಐ ಬಳಕೆದಾರರಿಗೆ ಮಹತ್ವದ ಸುದ್ದಿ: ಅ.15ರಿಂದ ಆಯ್ದ ವಹಿವಾಟುಗಳಿಗೆ ಶುಲ್ಕ ಜಾರಿ!ಅಪಾಯಕಾರಿ ಸೌಂದರ್ಯವರ್ಧಕಗಳ ಬಳಕೆ: ಪಾಕಿಸ್ತಾನದ 'ಗೋರಿ' ಹಾಗೂ 'ಚಾಂದನಿ' ಕ್ರೀಮ್‌ಗಳ ವಿರುದ್ಧ CDSCO ಎಚ್ಚರಿಕೆ!'ವಂದೇ ಮಾತರಂ' ವಿವಾದ: ಪ್ರಿಯಾಂಕ್ ಖರ್ಗೆ ಸವಾಲು, ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ!ದುರ್ಗಕ್ಕೆ ಭದ್ರಾ ನೀರು ಬಿಟ್ಟಿದ್ದಕ್ಕಾಗಿ ರೈತ ಹೋರಾಟ; ಹೆದ್ದಾರಿ ಬಂದ್, ರಾಜಕೀಯ ತಿರುವು!ಸೆ.19ರಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಪ್ರವಾಸ, ಪೂರ್ವಭಾವಿ ಸಿದ್ಧತೆ ಸಮಯ ಪಾಲನೆ ಮತ್ತು ದಕ್ಷತೆಗೆ ಮತ್ತೊಂದು ಹೆಸರೇ ಸರ್. ಎಂ. ವಿಶ್ವೇಶ್ವರಯ್ಯ ​ಪಾಕೆಟ್ ತುಂಬಿತು ನೋಟು... ಮನುಷ್ಯತ್ವಕ್ಕೆ ಬಿತ್ತು ಪೆಟ್ಟು!ವಾಲ್ಮೀಕಿ ಮಹರ್ಷಿ ಕಂಚಿನ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ