ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದರ್ಶನ, ರುದ್ರಾಭಿಷೇಕ ಮತ್ತು ಸತ್ಸಂಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮೇ 2 ರಿಂದ ಮೇ 4 ರವರೆಗೆ ನಡೆಯಲಿರುವ ಈ ಕಾರ್ಯಕ್ರಮಗಳ ವಿವರ:ದಿನಾಂಕ ನಗರ/ಪಟ್ಟಣ ಸ್ಥಳ ಸಮಯ
02-05-2026 ಚಿತ್ರದುರ್ಗ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಆವರಣ, ಮೆದೇಹಳ್ಳಿ ರಸ್ತೆ, ಚಿತ್ರದುರ್ಗ. ಬೆಳಗ್ಗೆ 7:30 ರಿಂದ 12:30, ಸಂಜೆ 5:30 ರಿಂದ 8:00 ಗಂಟೆಯವರೆಗೆ.
03-05-2026 ಹೊಸದುರ್ಗ ಅಶೋಕ ರಂಗಮಂದಿರ, ಹೊಸದುರ್ಗ. ಬೆಳಗ್ಗೆ 7:30 ರಿಂದ 11:30 ಸಂಜೆ 5:00 ರಿಂದ 7:00 ಗಂಟೆಯವರೆಗೆ.
04-05-2026 ಚಳ್ಳಕೆರೆ ಬಿ.ಎಂ.ಜೆ.ಹೆಚ್.ಎಸ್. ಶಾಲಾ ಮೈದಾನ, ಚಿತ್ರದುರ್ಗ ರಸ್ತೆ, ಚಳ್ಳಕೆರೆ. ಬೆಳಗ್ಗೆ 7:30 ರಿಂದ 10:00 ರವರೆಗೆ.
04-05-2026 ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯ, ಹೊರಮಠ. ಸಂಜೆ 4:00 ರಿಂದ 7:00 ಗಂಟೆಯವರೆಗೆ.
ವಿಶೇಷ ಸೂಚನೆ: ಭಕ್ತಾದಿಗಳು ನಿಗದಿತ ಸಮಯದಲ್ಲಿ ಆಗಮಿಸಿ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದರ್ಶನ ಪಡೆದು, ಪುನೀತರಾಗಬೇಕೆಂದು ಸಂಘಟಕರು ಕೋರಿದ್ದಾರೆ.


