ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದಲ್ಲಿ ರಸ್ತೆಗಳು ಗುಂಡಿಗಳಾಗಿದ್ದು, ಡಾಂಬರು ಹಾಕಿ ಸರಿಪಡಿಸುವುದರ ಜೊತೆಗೆ ಮಣ್ಣು ಮತ್ತು ಕಸದಿಂದ ತುಂಬಿ ಹೋಗಿರುವ ಚರಂಡಿಗಳನ್ನು ಸ್ವಚ್ಚಗೊಳಿಸಬೇಕೆಂದು ದೊಡ್ಡಬಳ್ಳಾಪುರ ನಗರಸಭೆಯ ಪೌರಯುಕ್ತರಿಗೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎ ನಂಜಪ್ಪ ಮಾತನಾಡಿ ದೊಡ್ಡಬಳ್ಳಾಪುರ ನಗರದಲ್ಲಿ ರಸ್ತೆಗಳೆಲ್ಲಾ ಗುಂಡಿಗಳಾಗಿದ್ದು, ಈಗ ಮಳೆಗಾಲವು ಪ್ರಾರಂಭವಾಗುದರಿಂದ ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನಗಳ ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ಗುಂಡಿ ಬಿದ್ದಿರುವ ರಸ್ತೆಗಳನ್ನು ಡಾಂಬರ್ ಹಾಕಿ ಸರಿಪಡಿಸಬೇಕು.
ಇದರ ಜೊತೆಗೆ ದೊಡ್ಡಬಳ್ಳಾಪುರದಲ್ಲಿ ಒಳಚಂರಡಿಗಳು ತುಂಬಿ ಒಳಚರಂಡಿಯ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತದೆ ಕೆಲವೊಂದು ಸ್ಥಳಗಳಲ್ಲಿ ಸಂಪೂರ್ಣವಾಗಿ ಹಾಳಾಗಿದ್ದು,(ವನ್ನಿಗರಪೇಟೆ, ಜೆಸಿ ವೃತ್ತದಿಂದ ರಂಗಪ್ಪ ವೃತ್ತ, ದೇವರಾಜನಗರ, ಡಿ.ಕ್ರಾಸ್ ರಸ್ತೆ ಹೊಸ ಕರಗದ ಗುಡಿ ರಸ್ತೆ ದರ್ಜಿಪೇಟೆ ಮುಖ್ಯರಸ್ತೆ, ತಾಲ್ಲೂಕು ರಸ್ತೆ, ಮುಕ್ತಾಂಬಿಕ ರಸ್ತೆ, ಸಂಜಯನಗರ ಮುಂತಾದ ಕಡೆಗಳಲ್ಲಿ) ಇರುವ ಚರಂಡಿಗಳು ಮಣ್ಣು ಮತ್ತು ಕಸದಿಂದ ತುಂಬಿ ಹೋಗಿದ್ದು, ಇವುಗಳನ್ನು ಸ್ವಚ್ಚಗೊಳಿಸಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದೇವೆ ಎಂದರು.
ನಗರದ ಜೆಸಿ ವೃತ್ತದಿಂದ ರಂಗಪ್ಪ ವೃತ್ತವರಗಿನ ಕಾಮಗಾರಿಯಿಂದಾಗಿ ರಸ್ತೆ ಹಾಳಾಗಿರುವ ಬಗ್ಗೆ ಈಗಾಗಲೇ ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಆದರೂ ಯಾವುದೇ ಪ್ರಯೋಜನವಾಗಿಲ್ಲ ಈ ರಸ್ತೆಯನ್ನು ಸಂರ್ಪೂವಾಗಿ ಡಾಂಬರೀಕರಣಮಾಡಿ ಸಾರ್ವಜನಿಕ ಅನುಕೂಲಕ್ಕೆ ಅನುವು ಮಾಡಿಕೊಡಬೇಕೆಂದರು ಒಂದು ವೇಳೆ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆಯ ಮುಂಭಾಗದಲ್ಲಿ ತಮಟೆ ಚಳವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಜುನಾಥ್ , ಪ್ರಮುಖರಾದ ಬಿ ಎನ್ ಚಂದ್ರಶೇಖರ್, ಎನ್ ಚಂದ್ರಶೇಖರಯ್ಯ, ವೇಣುಗೋಪಾಲ್, ಬಿ ಎನ್ ಸೋಮಶೇಖರ್, ಆರ್ ಶಿವಕುಮಾರ್, ಸೌಮ್ಯಬಾಯಿ, ನಾಗಮಣಿ, ರೇಷ್ಮಾ ಖಾನಂ, ಪದ್ಮ ಸೇರಿದಂತೆ ಹಲವರು ಹಾಜರಿದ್ದರು.



