Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಪಾರ್ಟ್ಮೆಂಟ್ ಗಳಿಗೆ ನೀರು ಹರಿಸಲು ಮುಂದಾದ ಪಟ್ಟಣ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ : 
ನಮ್ಮ ಗ್ರಾಮದ ನೀರಿನ ಟ್ಯಾಂಕಿನಿಂದ ಖಾಸಗಿ ಅಪಾರ್ಟ್ಮೆಂಟ್ ಗೆ ನೀರಿನ ಸಂಪರ್ಕ ಕೊಡಲು ಸ್ಥಳೀಯ ಜನಪ್ರತಿನಿಧಿ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮುಂದಾಗಿದೆ ಈ ಪ್ರಯತ್ನ ಇಲ್ಲಿಗೆ ಕೈಬಿಡಬೇಕು ಇಲ್ಲವಾದಲ್ಲಿ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಳ್ಳುಪುರ ಗ್ರಾಮದ ನಿವಾಸಿ ಮಧುಚಂದ್ರ ತಿಳಿಸಿದರು.

ಸ್ಥಳೀಯ ಸಮಸ್ಯೆ ಕುರಿತು ಎಳ್ಳುಪುರ ಕ್ರಾಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು  ಈಗಾಗಲೇ ಎಳ್ಳುಪುರ ಗ್ರಾಮದಲ್ಲಿ ನೀರಿನ ಸಮಸ್ಯೆಗಳು ಹೆಚ್ಚಾಗಿದ್ದು ಗ್ರಾಮದಲ್ಲಿ ಬೋರ್ವೆಲ್ ಕೊರೆಸಿದರೆ ಕೆಮಿಕಲ್ ಮಿಶ್ರಿತ ನೀರು ಸಿಗುತ್ತಿದೆ.ಆದಕಾರಣ ಪಕ್ಕದ ದೇವನಹಳ್ಳಿ ತಾಲೂಕಿನ ಜುಟ್ಟನಹಳ್ಳಿ ಗ್ರಾಮದಿಂದ ನಮ್ಮ ಗ್ರಾಮಕ್ಕೆ ನೀರಿನ ಸಂಪರ್ಕ ಕಲ್ಪಿಸಿಕೊಂಡಿದ್ದೇವೆ ಈಗ ಲಭ್ಯವಾಗುತ್ತಿರುವ ನೀರು ನಮ್ಮ ಗ್ರಾಮಕ್ಕೆ ಸಾಕಾಗುತ್ತಿಲ್ಲ  ಸತ್ಯದ ಪರಿಸ್ಥಿತಿಯಲ್ಲಿ   ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದು  ಗ್ರಾಮದಲ್ಲಿ ದಿನದಿಂದ ದಿನಕ್ಕೆ ಮನೆಗಳು ಹೆಚ್ಚಾಗುತ್ತಿದ್ದು ಜನಸಂಖ್ಯೆಯು ಹೆಚ್ಚುತ್ತಿದೆ  ನಮಗೆ ನೀರು ಸಾಕಾಗುತ್ತಿಲ್ಲ ಇದರ ಹೊರತಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಖಾಸಗಿ ಅಪಾರ್ಟ್ಮೆಂಟ್ ಗಳಿಗೆ ನೀರು ಸಂಪರ್ಕ ಕಲ್ಪಿಸುವುದು ಎಷ್ಟು ಸರಿ..ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ನೀರಿನ ಅಭಾವದಿಂದಾಗಿ ತುಂಬಾ ತೊಂದರೆ ಎದುರಿಸಬೇಕಾದ ಪರಿಸ್ಥಿತಿ ಬರಲಿದೆ ಈ ಕುರಿತು ಪಟ್ಟಣ ಪಂಚಾಯಿತಿ ಗಮನ ಹರಿಸಬೇಕು ಎಂದರು.

ನಮ್ಮ ಸಮಸ್ಯೆಯನ್ನು ಈಗಾಗಲೇ ಪಂಚಾಯ್ತಿ ಗಮನಕ್ಕೆ ತಂದಿದ್ದೇವೆ ಈ ಕುರಿತು ಎಳ್ಳುಪುರ ಗ್ರಾಮಸ್ಥರು ಮನವಿ ಕೂಡ ಸಲ್ಲಿಸಲಿದ್ದೇವೆ ನಮ್ಮ ಮನವಿಗೆ ಬೆಲೆ ಕೊಡದೆ  ಪಂಚಾಯಿತಿ ವತಿಯಿಂದ ಖಾಸಗಿ ಅಪಾರ್ಟ್ಮೆಂಟ್ ಗೆ ನೀರಿನ ಸಂಪರ್ಕ ಕಲ್ಪಿಸಿದರೆ  ಗ್ರಾಮಸ್ಥರು ಪಟ್ಟಣ ಪಂಚಾಯಿತಿ ಮುಂದೆ ಧರಣಿ ಕೂರುತ್ತೇವೆ ಎಂದರು.

ಸ್ಥಳೀಯ ನಿವಾಸಿ ಮುರಳಿ ಮಾತನಾಡಿ ನಮ್ಮ ಗ್ರಾಮಕ್ಕೆ ನೀಡಬೇಕಿರುವ ನೀರನ್ನು ಖಾಸಗಿ ಅಪಾರ್ಟ್ಮೆಂಟ್ ಗೆ ನೀಡಲು ಸ್ಥಳೀಯ ಜನಪ್ರತಿನಿಧಿ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು  ಮುಂದಾಗಿದ್ದಾರೆ. ಪೈಪ್ ಲೈನ್ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಗ್ಯಾಸ್ ಸರಬರಾಜು ಮಾಡಲು ಎಂದು ಹೇಳಿದ್ದರು ಆದರೆ ಈಗ ಏಕಾಏಕಿ  ನೀರು ಹರಿಸಲು ಮುಂದಾಗಿದ್ದಾರೆ ನಮ್ಮ ಹಿತ ಕಾಯಬೇಕಿರುವ ಪಂಚಾಯ್ತಿ ಖಾಸಗಿ ವ್ಯಕ್ತಿಗಳ ಹಿತ ಕಾಯುತ್ತಿದೆ ನಮ್ಮ ಬೇಡಿಕೆ ಇಷ್ಟೇ ನಮ್ಮಲ್ಲಿ ಲಭ್ಯವಾಗುತ್ತಿರುವ ನೀರು ನಮಗೆ ನೀರು ಸಮರ್ಪಕವಾಗಿಲ್ಲ ಹಾಗಾಗಿ ನಮ್ಮ ಗ್ರಾಮದ ಟ್ಯಾಂಕ್ನಿಂದ  ಖಾಸಗಿ ಅಪಾರ್ಟ್ಮೆಂಟ್ ಗೆ ನೀರು ಹರಿಸುವ ಯೋಜನೆ ಕೈ ಬಿಡಬೇಕು ನಮ್ಮ ಗ್ರಾಮಕ್ಕೆ ಹೆಚ್ಚಿನ ನೀರು ಹರಿಸಲು ಯೋಜನೆ ರೂಪಿಸಬೇಕು ಎಂದರು.

 ಈ ವೇಳೆ ಚನ್ನೇ ಗೌಡ, ವಿನೋದ್, ಮಧುಚಂದ್ರ, ಮುರಳಿಗೌಡ ಸೇರಿದಂತೆ ಹಲವು ಪ್ರಮುಖರು ಮತ್ತು ಏಳ್ಳುಪುರ ಗ್ರಾಮಸ್ಥರು ಹಾಜರಿದ್ದರು.

 

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಕೆಲವರ ಮಾತು ಕೇಳಿ ಬಿಡದಿ ಟೌನ್‌ಶಿಪ್ ಕೈಬಿಡಲ್ಲ": ಸಚಿವ ಯತೀಂದ್ರಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಸಿಎಂ ಶಿವಕುಮಾರ್ ಸೂಚನೆಮಹಿಳೆಯರಿಗೆ ಉಚಿತ 'ಸ್ಮಾರ್ಟ್ ಕಾರ್ಡ್'; ಶೀಘ್ರದಲ್ಲೇ ಅಂತಿಮ ರೂಪುರೇಶೆ ಎಂದ ಸಚಿವ ಬೈರತಿ ಸುರೇಶ್ವಿಧಾನ ಪರಿಷತ್ ಚುನಾವಣೆ: ಕ್ರಾಸ್ ವೋಟಿಂಗ್ ಭೀತಿ; ಬಿಡದಿ ರೆಸಾರ್ಟ್‌ಗೆ ಕಾಂಗ್ರೆಸ್ ಶಾಸಕರು ಶಿಫ್ಟ್!ಐಎಎಫ್ ಅಧಿಕಾರಿಯ ಪತ್ನಿ ಮೇಲೆ ಅತ್ಯಾಚಾರ; ಬಲವಂತದ ಮತಾಂತರಕ್ಕೆ ಯತ್ನ ಇಬ್ಬರ ಬಂಧನ"ಶ್ರೀರಾಮನೇ ಲೆಕ್ಕ ಕೊಡುವಾಗ ಆರ್‌ಎಸ್‌ಎಸ್ ಯಾಕೆ ಕೊಡಬಾರದು?": ಪ್ರಿಯಾಂಕ್ ಖರ್ಗೆ ನೇರ ಪ್ರಶ್ನೆದೂರು ದಾಖಲಾಗುವ ಮುನ್ನವೇ ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು! ಹೈಕೋರ್ಟ್ ಆಘಾತನಗರಾಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡ ಕೃಷ್ಣಬೈರೇಗೌಡ; ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ 'ರಾಕೆಟ್ ಸೈನ್ಸ್' ಕ್ಲಾಸ್!ಮಹಜರು ವೇಳೆ ಪೊಲೀಸರ ಮೇಲೆಯೇ ಹಲ್ಲೆ; ಕೊಲೆ ಆರೋಪಿ ಮಧು ಕಾಲಿಗೆ ಬಿದ್ದಿತು ಗುಂಡೇಟು!ರೌಡಿಪಟ್ಟಿಯಿಂದ ಸೈಲೆಂಟ್ ಸುನೀಲ, ಒಂಟೆ ರೋಹಿತ್ ಮುಕ್ತಿ? ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರ ಸಜ್ಜು!