ವ್ಯಾಪಾರಸ್ಥರು ಹಾಗೂ ರೈತ ಸಮುದಾಯಕ್ಕೆ ಆರ್ಥಿಕ ನೆರವು ನೀಡಲು ಸುಕೋ ಬ್ಯಾಂಕ್ ಸಹಕಾರಿ :ಆರ್.ಪಾಲಯ್ಯ 

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಸುಕೋ ಸೌಹಾರ್ಧ ಸಹಕಾರಿ ಬ್ಯಾಂಕ್‌ನ ೩೨ನೇ ಸಂಸ್ಥಾಪನಾ ದಿನಾಚರಣೆಯನ್ನು ಬ್ಯಾಂಕ್‌ನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮ್ ಮೋಟಾರ್‍ಸ್‌ನ ಮಾಲೀಕ
, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ, ಸದಸ್ಯ ಆರ್.ಪಾಲಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸುಕೋ ಬ್ಯಾಂಕ್ ಚಳ್ಳಕೆರೆ ಸೇರಿದಂತೆ ರಾಜ್ಯ ಹಲವಾರು ಭಾಗಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ವಿಶೇಷವಾಗಿ ಉದ್ಯಮಿಗಳು, ವ್ಯಾಪಾರಸ್ಥರು, ಕೃಷಿಕರು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ವಾಣಿಜ್ಯ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದರು.

ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್‌ನ ವ್ಯವಸ್ಥಾಪಕ ಎಸ್.ಶಿವಾನಂದ, ಪ್ರಸ್ತುತ ಸುಕೋ ಸೌಹಾರ್ಧ ಸಹಕಾರಿ ಬ್ಯಾಂಕ್‌ನ ೩೨ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಇಂದು ನಾವೆಲ್ಲರೂ ಆಚರಿಸುತ್ತಿದ್ದೇವೆ. ೩೨ ವರ್ಷಗಳ ಇತಿಹಾಸದಲ್ಲಿ ಸುಕೋ ಸೌಹಾರ್ಧ ಸಹಕಾರಿ ಬ್ಯಾಂಕ್ ಕೃಷಿ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ದಿಗೆ ಕಾರಣವಾಗಿದೆ. ಪ್ರತಿವರ್ಷವೂ ಬ್ಯಾಂಕ್ ಲಾಭದತ್ತ ಮುನ್ನಡೆಯಲು ಗ್ರಾಹಕರೇ ಕಾರಣ, ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದಿಸುವುದಾಗಿ ತಿಳಿಸಿದರು.

ಎಂ.ಮಲ್ಲಿಕಾರ್ಜುನ್, ಈ.ವೆಂಕಟೇಶ್, ಎ.ಅಭಿಷೇಕ್, ವಿ.ರಮೇಶ್, ಚಂದ್ರಶೇಖರ್, ಟಿ.ಪಿ.ರಂಗಸ್ವಾಮಿ, ಉಮೇಶ್‌ಚಂದ್ರಬ್ಯಾನರ್ಜಿ, ವಿನೋದ್‌ಕುಮಾರ್, ಬ್ಯಾಂಕ್ ಅಧಿಕಾರಿಗಳಾದ ಎಂ.ವಿ.ಮಂಜುಳಾ, ಎಂ.ರಂಜಿತ, ಕೀರ್ತಿನಿವೇದಿತ, ಪಿ.ಲಿಖಿತ, ಯು.ವಿನಯ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

 

 

Share This Article
error: Content is protected !!
";