ಜೇಮ್ಸ್ ವಾರಿಯರ್ಸ್ ವಿಕ್ಕಿ ಬಾಲ್ ಕ್ರಿಕೆಟ್ ಪಂದ್ಯಾವಳಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಹಾಡೋನಹಳ್ಳಿಯಲ್ಲಿ ಹೋಬಳಿ ಮಟ್ಟದ ಜೇಮ್ಸ ವಾರಿಯರ್ಸ್ ವಿಕ್ಕಿ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.

ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಳ್ಳಿ ಸೂಗಡಿನ ಕಲೆಗಳ ಬದಲಾಗಿ ಕ್ರಿಕೆಟ್ ಹಳ್ಳಿಯ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆವಿಗೂ ಬಹಳಷ್ಟು ಮನ್ನಣೆ ಪಡೆದಿದೆ.

ಆಟವನ್ನು ಆಡುವುದರಿಂದ ಆರೋಗ್ಯ ಉತ್ತಮವಾಗಿರುತ್ತೆ. ಆದರೆ ಅದನ್ನ ಬಿಟ್ಟು ಐಪಿಎಲ್ ಗಳಲ್ಲಿ ಬೆಟ್ಟಿಂಗ್ ಮಾಡುವುದರಿಂದ ತುಂಬಾ ತೊಂದರೆ ಪಡಬೇಕಾಗುತ್ತದೆ. ಹಾಗೂ ಮುಂದಿನ ದಿನಗಳಲ್ಲಿ ಹೋಬಳಿಗೆ ಒಂದು ಕ್ರೀಡಾಂಗಣ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸುಮಾರು ತಂಡಗಳು ಪಂದ್ಯದಲ್ಲಿ ಭಾಗವಹಿಸಿದರು. ನಂತರ ಪಂದ್ಯದ ಕೊನೆಯ ಹಂತದಲ್ಲಿ ಅಂತರ ಹಳ್ಳಿ 4 ಓವರ್ ಅಂತಿಮ ಪಂದ್ಯದಲ್ಲಿ 25 ರನ್ ಕಲೆಹಾಕಲು ಸಾಧ್ಯವಾಯಿತು. ಇದನ್ನು ಬೆನ್ನಟಿದ ಜೇಮ್ಸ ವಾರಿಯರ್ಸ್ ಹಾಡೋನಹಳ್ಳಿಯ ತಂಡ 3 ಓವರ್ ಗಳಲ್ಲಿ ವಿಕೆಟ್ ಇಷ್ಟವಿಲ್ಲದೆ 26 ರನ್ ಕಲೆ ಹಾಕಿ 10 ವಿಕೆಟ್ ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

ಈ ಸಂದರ್ಭದಲ್ಲಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್ ಎ ನಾಗರಾಜು, ವಿ ಎಸ್ ಎಸ್ ಎನ ಅಧ್ಯಕ್ಷ ಎಂ.ಮುನೇಗೌಡ, ಎಂಪಿಸಿಎಸ್ ಅಧ್ಯಕ್ಷ ಹೆಚ್ ನಾರಾಯಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೌಡಪ್ಪ, ಮುಖಂಡರಾದ ಮುಕುಂದ, ಆಂಜನೇಯ, ಚೌಡಪ್ಪ ಇತರರು ಹಾಜರಿದ್ದರು.

 

Share This Article
error: Content is protected !!
";