Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

SIR ಕರ್ತವ್ಯದಲ್ಲಿರುವ ಬಿಎಲ್‌ಒಗಳಿಗೆ 6,000 ಹೆಚ್ಚುವರಿ ಗೌರವಧನ ಘೋಷಿಸಿದ ಚುನಾವಣಾ ಆಯೋಗ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ನವದೆಹಲಿ:
ದೇಶಾದ್ಯಂತ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಈ ಅತ್ಯಂತ ಜವಾಬ್ದಾರಿಯುತ ಕೆಲಸದಲ್ಲಿ ತೊಡಗಿಸಿಕೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಮೇಲ್ವಿಚಾರಕರಿಗೆ ಭಾರತೀಯ ಚುನಾವಣಾ ಆಯೋಗವು ಭರ್ಜರಿ ಸಿಹಿ ಸುದ್ದಿ ನೀಡಿದೆ.

​ಕರ್ನಾಟಕ, ಪಂಜಾಬ್, ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಲ್‌ಒಗಳು ಮತ್ತು ಸೂಪರ್‌ವೈಸರ್‌ಗಳಿಗೆ ಅವರ ವಾರ್ಷಿಕ ಸಂಭಾವನೆಯ ಜೊತೆಗೆ ಹೆಚ್ಚುವರಿಯಾಗಿ 6,000 ಗಳ ಒಂದು ಬಾರಿಯ ವಿಶೇಷ ಗೌರವಧನವನ್ನು ಪಾವತಿಸಲು ಆಯೋಗವು ಅನುಮೋದನೆ ನೀಡಿದೆ.

​ಕೆಲಸದ ಒತ್ತಡ ಪರಿಗಣಿಸಿ ಮಹತ್ವದ ನಿರ್ಧಾರ:
​ಮಂಗಳವಾರ ರಾತ್ರಿ ಭಾರತೀಯ ಚುನಾವಣಾ ಆಯೋಗವು ಈ ಮಹತ್ವದ ಆದೇಶ ಹೊರಡಿಸಿದೆ. ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿನ ಕೆಲಸದ ಪ್ರಮಾಣ ಮತ್ತು ಅದರ ಗಂಭೀರ ಸ್ವರೂಪವನ್ನು ಪರಿಗಣಿಸಿ ಈ ಆರ್ಥಿಕ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದು ಇಸಿಐ ಸ್ಪಷ್ಟಪಡಿಸಿದೆ.

​"ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಕೆಲಸದ ಪ್ರಮಾಣ ಮತ್ತು ಸ್ವರೂಪವನ್ನು ಪರಿಗಣಿಸಿ, ಈ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ BLO ಮತ್ತು BLO ಮೇಲ್ವಿಚಾರಕರಿಗೆ ಅವರ ವಾರ್ಷಿಕ ಸಂಭಾವನೆಯ ಜೊತೆಗೆ 6,000 ಒಂದು ಬಾರಿಯ ಗೌರವಧನ ನೀಡಲು ಅನುಮೋದಿಸಲಾಗಿದೆ." ಭಾರತೀಯ ಚುನಾವಣಾ ಆಯೋಗದ ಆದೇಶ.

​ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಸಿಬ್ಬಂದಿಗೆ ಲಾಭ:
​ಆಯೋಗದ ಈ ಮಹತ್ವದ ಆದೇಶದಿಂದಾಗಿ ದೇಶದ ಪ್ರಮುಖ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನಗಳನ್ನು ರವಾನಿಸಲಾಗಿದೆ. ಇದರ ನೇರ ಲಾಭ ಈ ಕೆಳಗಿನ ರಾಜ್ಯಗಳ ಅಧಿಕಾರಿಗಳಿಗೆ ಸಿಗಲಿದೆ:

​ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ​ಮಹಾರಾಷ್ಟ್ರ, ಪಂಜಾಬ್, ಹರಿಯಾಣ, ಚಂಡೀಗಢ, ​ದೆಹಲಿ (ಎನ್‌ಸಿಆರ್), ಜಾರ್ಖಂಡ್, ಒಡಿಶಾ, ಉತ್ತರಾಖಂಡ್, ​ಈಶಾನ್ಯ ರಾಜ್ಯಗಳಾದ ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ​ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಹಾಗೂ ದಿಯು.

​3.94 ಲಕ್ಷ ಬಿಎಲ್‌ಒಗಳ ನಿಯೋಜನೆ:
​ಕಳೆದ ಮೇ ತಿಂಗಳಲ್ಲಿ, 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 36 ಕೋಟಿಗೂ ಹೆಚ್ಚು ಮತದಾರರನ್ನು ಒಳಗೊಂಡ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯ ಮೂರನೇ ಹಂತವನ್ನು ಪ್ರಾರಂಭಿಸುವುದಾಗಿ ಇಸಿಐ ಘೋಷಿಸಿತ್ತು. ಸದ್ಯ ಮನೆ-ಮನೆಗೆ ತೆರಳಿ ಮತದಾರರ ಮಾಹಿತಿ ಪರಿಶೀಲನೆ ನಡೆಸುವ ಈ ಬೃಹತ್ ಕಾರ್ಯಕ್ಕಾಗಿ ದೇಶಾದ್ಯಂತ ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಎಲ್ಲರಿಗೂ ಈ ನಿರ್ಧಾರದಿಂದ ದೊಡ್ಡ ಆರ್ಥಿಕ ನೆರವು ಸಿಗಲಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.