ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಲ್ಲಿನ ಸರ್ಕಾರಿ ಕಲಾ ಕಾಲೇಜಿನ (ಸ್ವಾಯತ್ತ) ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಬಿ.ಕೆ. ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯವು ಪಿಎಚ್.ಡಿ (ಡಾಕ್ಟರೇಟ್) ಪದವಿ ನೀಡಿ ಗೌರವಿಸಿದೆ.
ದಾವಣಗೆರೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ ಬೆನಕನಹಳ್ಳಿ ಅವರ ಮಾರ್ಗದರ್ಶನದಲ್ಲಿ ಬಸವರಾಜ ಬಿ.ಕೆ. ಅವರು ಸಂಶೋಧನೆ ನಡೆಸಿದ್ದರು.
ಅವರು ಮಂಡಿಸಿದ "ಹಿಂದುಳಿದ ವರ್ಗಗಳ ರಾಜಕಾರಣ ಮತ್ತು ಗ್ರಾಮ ಪಂಚಾಯತಿಗಳು : ದಾವಣಗೆರೆ ಜಿಲ್ಲೆಯ ಒಂದು ಅಧ್ಯಯನ" ಎಂಬ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ದಿನಾಂಕ: 02-06-2026 ರಂದು ಅಧಿಕೃತವಾಗಿ ಪಿಎಚ್.ಡಿ ಪದವಿ ನೀಡಿದೆ.
ಹಿನ್ನೆಲೆ ಮತ್ತು ಅಭಿನಂದನೆ:
ಡಾ. ಬಸವರಾಜ ಬಿ.ಕೆ. ಅವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬೆಣ್ಣೆಹಳ್ಳಿ ಗ್ರಾಮದ ಶಿಕ್ಷಕರಾಗಿದ್ದ ದಿ|| ಬಿ. ಕರಿಯಪ್ಪ ಮತ್ತು ದಿ|| ಕಮಲಮ್ಮನವರ ಕೊನೆಯ ಪುತ್ರರಾಗಿದ್ದಾರೆ.
ಸಾಧನೆಗೈದ ಇವರಿಗೆ ಅವರ ಕುಟುಂಬದ ಸಮಸ್ತ ಸದಸ್ಯರು, ಗ್ರಾಮದ ಮುಖಂಡರು ಹಾಗೂ ಕಾಲೇಜಿನ ಪ್ರಾಂಶುಪಾಲರು, ಸಹೋದ್ಯೋಗಿ ಅಧ್ಯಾಪಕ ಮಿತ್ರರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.



