ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನಾದ್ಯಂತ ಏ.೨೭ರಿಂದ ಆರಂಭವಾದ ಭರಣಿಮಳೆ ಉತ್ತಮವಾಗಿದ್ದು ಬಿಸಿಲಿನ ಧಗೆಯಿಂದ ರೋಸಿದ್ದ ಜನರಿಗೆ ಕೊಂಚನೆಮ್ಮದಿಉಂಟಾಗಿದ್ದು, ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯಲ್ಲಿ ಹೆಚ್ಚುಮಳೆಯ ಜೊತೆಗೆ ಅನಾಹುತವೂ ಹೆಚ್ಚಿದೆ.
ಮಂಗಳವಾರ ತಡರಾತ್ರಿಬಿದ್ದ ಮಳೆ ನಾಯಕನಹಟ್ಟಿ-೪೬.೦೪, ಪರಶುರಾಮಪುರ-೧೦.೦೪, ತಳಕು-೮.೦೨, ಚಳ್ಳಕೆರೆ-೨.೦೮ ಒಟ್ಟು೬೪.೧೬ ಎಂ.ಎಂ.ಮಳೆದಾಖಲಾಗಿದೆ. ದೇವಮರಿಕುಂಟೆ ಭಾಗದಲ್ಲಿ ಮಳೆಯಾಗಿಲ್ಲ. ತಾಲ್ಲೂಕಿ ಪರಶುರಾಮಪುರ ಹೋಬಳಿಯ ದೊಡ್ಡಚೆಲ್ಲೂರು ಗ್ರಾಮದಲ್ಲಿ ಹನುಮಂತರಾಯ ಎಂಬುವವರ ಮನೆ ಮೇಲ್ಚಾವಣಿ ಕುಸಿದು ೫೦ಸಾವಿರನಷ್ಟವಾಗಿದೆ. ಕಾಮಸಮುದ್ರ ಗ್ರಾಮದಲ್ಲಿ ಕರಿಯಣ್ಣ ಎಂಬುವವರ ಮೇಲ್ಚಾವಣಿ ಕುಸಿದು ೬೦ಸಾವಿರನಷ್ಟ ಉಂಟಾಗಿದೆ.
ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಚೌಳಕೆರೆ ಗ್ರಾಮದ ಜಿ.ಓಬಯ್ಯ, ಬಸಣ್ಣ ಎಂಬುವವರ ಸರ್ವೆ, ನಂ ೩೧ರ ೨ಎಕರೆ ಜಮೀನಿನಲ್ಲಿದ್ದ ಶೇಂಗಾಬೆಳೆ ಕಿತಿದ್ದುಪೂರ್ಣಪ್ರಮಾಣದಲ್ಲಿ ಬೆಳೆನೀರಿನಲ್ಲಿ ಕೊಚ್ಚಿಹೋಗಿದೆ. ಗ್ರಾಮದ ಎಂ.ಬಸವರಾಜು ಎಂಬುವವರ ೨ಎಕರೆ ಟೋಮ್ಯಾಟೋ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.
ತಹಶೀಲ್ದಾರ್ ಸೂಚನೆ ಮೇರೆಗೆ ಕಂದಾಯಾಧಿಕಾರಿ ಚೇತನ್ರೆಡ್ಡಿ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಅಂದಾಜಿನ ಬಗ್ಗೆ ಪರಿಶೀಲನೆ ನಡೆಸಿದರು.


