ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಆಗಸ್ಟ್ ೧೨ರ ಅಂತರಾಷ್ಟ್ರೀಯ ಯುವ ದಿನಾಚರಣೆ ಮತ್ತು ಹೆಚ್.ಐ.ವಿ / ಏಡ್ಸ್ ಅರಿವಿನ ಮಾಸಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದಲ್ಲಿ ಬೈಕ್ ರ್ಯಾಲಿ ಮತ್ತು ಅಂತರಾಷ್ಟ್ರೀಯ ಯುವ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಬೈಕ್ ರ್ಯಾಲಿ ಯನ್ನು ಸಾರ್ವಜನಿಕ ಆಸ್ಪತ್ರೆ ಡಿ.ಬಿ. ಪುರ ಇಲ್ಲಿಂದ ಶ್ರೀ ದೇವರಾಜ್ ಅರಸು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕೊಡಿಗೆಹಳ್ಳಿ ಡಿ.ಬಿ. ಪುರ ಇಲ್ಲಿಯವರೆಗೂ ಹಮ್ಮಿಕೊಂಡು ಅರಿವು ಮತ್ತು ಜಾಗ್ರತೆ ಮಂಡಿಸಲಾಯಿತು.
ಬೈಕ್ ರ್ಯಾಲಿಯನ್ನು ಡಾ. ಪರಮೇಶ್ವರಯ್ಯ, ತುರ್ತು ಚಿಕಿತ್ಸಾ ಮೆಡಿಕಲ್ ಆಫೀಸರ್, ಸಾರ್ವಜನಿಕ ಆಸ್ಪತ್ರೆ ಡಿ.ಬಿ. ಪುರ, ಡಾ. ಮಂಜುನಾಥ್, ಕೀಲು ಮತ್ತು ಮೂಳೆ ರೋಗ ತಜ್ಞರು, ಸಾರ್ವಜನಿಕ ಆಸ್ಪತ್ರೆ ಡಿ.ಬಿ. ಪುರ, ಡಾ. ಹರಿಣಿ, ಮೆಡಿಕಲ್ ಆಫೀಸರ್,
ಆಯುರ್ವೇದ ವಿಕಿತ್ಸಾ ವಿಭಾಗ, ಸಾರ್ವಜನಿಕ ಆಸ್ಪತ್ರೆ ಡಿ.ಬಿ. ಪುರ, ಡಾ. ಸುನಿಲ್ ಕುಮಾರ್ ಡಿ.ಜಿ. ಮೆಡಿಕಲ್ ಆಫೀಸರ್, ಎ.ಆರ್.ಟಿ. ವಿಭಾಗ, ಸಾರ್ವಜನಿಕ ಆಸ್ಪತ್ರೆ ಡಿ.ಬಿ. ಪುರ ಮತ್ತು ಜಾನಪದ ಕಲಾ ತಂಡ, ಹೊಸಕೋಟೆ ಇವರು ಕಾರ್ಯಕ್ರಮವನ್ನು ನೀಡಿದ ನಂತರ ಚಾಲನೆ ನೀಡಲಾಯಿತು.
ಬೈಕ್ ರ್ಯಾಲಿ ಕಾರ್ಯಕ್ರಮದ ನಂತರ ಅಂತರಾಷ್ಟ್ರೀಯ ಯುವ ದಿನಾಚರಣೆಯನ್ನು ಕಾಲೇಜಿನಲ್ಲಿ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಶ್ರೀ ರಾಜೇಂದ್ರ, ಉಪಾದ್ಯಕ್ಷರು, ಆರ್. ಎಲ್. ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಡಿ.ಬಿ. ಪುರ, ಡಾ. ಪರಮೇಶ್ವರಯ್ಯ, ಡಾ. ಸುನಿಲ್ ಕುಮಾರ್, ಡಾ. ಗೌರಪ್ಪ, ಪ್ರಾಂಶುಪಾಲರು, ಡಾ. ದಕ್ಷಿಣ ಮೂರ್ತಿ, ಉಪ ಪ್ರಾಂಶುಪಾಲರು, ಡಾ. ಚಿಕ್ಕಣ್ಣ, ಪ್ರಾಂಶುಪಾಲರು, ಸಂಜೆ ಕಾಲೇಜು, ಶ್ರೀ ಶೆಟ್ಟಿನಾಯಕ್, ಎನ್.ಎಸ್.ಎಸ್. ಅಧಿಕಾರಿಗಳು, ಪ್ರಗತಿ ಪ್ರಥಮ ದರ್ಜೆ ಕಾಲೇಜು, ವಿಜಯಪುರ, ಶ್ರೀ ರಾಜೇಂದ್ರ, ಪ್ರ. ಶಾ. ತಂತ್ರಜ್ಞಾಧಿಕಾರಿಗಳು, ಶ್ರೀ ಜಯಪ್ರಕಾಶ್, ಆಪ್ತ ಸಮಾಲೋಚಕರು ಇತರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



