ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಧೀರ್ಘ 31 ವರ್ಷಗಳ ಕಾಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯಗಳಲ್ಲಿ ಅಡುಗೆ ತಯಾರಕರಾಗಿ ಕೆಲಸ ನಿರ್ವಹಿಸಿ, ವಯೋನಿವೃತ್ತಿ ಹೊಂದಿದ ಎಂ.ಮಹಮ್ಮದ್ ಚಮನ್ ಅವರಿಗೆ ವಿದ್ಯಾರ್ಥಿಗಳು ಹಾಗೂ ಇಲಾಖೆ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.
ನಗರದ ಚಳ್ಳಕೆರೆ ರಸ್ತೆ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರ ಬಾಲಕರ (ಸಾಮಾನ್ಯ ಪದವಿ)ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ತಯಾರಕರಾಗಿದ್ದ, ಎಂ.ಮಹಮ್ಮದ್ ಚಮನ್ ಸತತ 21 ವರ್ಷಗಳ ಕಾಲ ಇದೇ ವಿದ್ಯಾರ್ಥಿನಿಲಯದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಇದಕ್ಕೂ ಮೊದಲು 9 ವರ್ಷಗಳ ಹೊಳಲ್ಕೆರೆ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಜುಲೈ 31 ರಂದು ವಯೋನಿವೃತ್ತಿ ಹೊಂದಿದ ಅವರಿಗೆ ಶುಕ್ರವಾರ ವಿದ್ಯಾರ್ಥಿ ಬಿಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ನಿಲಯ ಪಾಲಕ ರಾಘವೇಂದ್ರ, ನಿವೃತ್ತ ನೌಕರದ ಸಿ.ಹೆಚ್.ಲಿಂಗರಾಜು, ರವಿಕುಮಾರ್, ಜಿ.ಮೌನೇಶ, ಇತರೆ ಅಡುಗೆ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿ ವೃಂದ ಎಂ.ಮಹಮ್ಮದ್ ಚಮನ್ ಸನ್ಮಾನಿಸಿದರು. ಈ ವೇಳೆ ಅವರ ಪತ್ನಿ ಯಾಸ್ಮಿನ್ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.



