Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಲವು ಕೆರೆಗಳಿಗೆ ತರಳಬಾಳು ಶ್ರೀಗಳಿಂದ ಬಾಗಿನ ಸಮರ್ಪಣೆ

Advertisement
ಚಂದ್ರವಳ್ಳಿ ನ್ಯೂಸ್, ಜಗಳೂರು:
ನೀರು ಎನ್ನುವ ಶಬ್ದ ಕೇಳಿದರೇನೇ ಅದೊಂದು ಅನನ್ಯ ಅನುಭೂತಿ. ಹಸಿದಿದ್ದ
ಶಾಶ್ವತ ಬರಪೀಡಿತ ಪ್ರದೇಶ ಎಂದು ರಾಜ್ಯದಲ್ಲಿಯೇ ಹಣೆಪಟ್ಟಿ ಕಟ್ಟಿಕೊಂಡು ನರಳುತ್ತಿದ್ದ ಜಗಳೂರು ತಾಲ್ಲೂಕಿನಾದ್ಯಂತ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪ ಶ್ರಮ, ಸರ್ಕಾರದ ಸಹಕಾರ, ಶಾಸಕರು, ಸಚಿವರುಗಳ ಕಾರ್ಯ ತತ್ಪರತೆಯ ಫಲವಾಗಿ ಕೆರೆಗಳು ತುಂಬಿ ನಳನಳಿಸುತ್ತಿವೆ.

ಕುಡಿಯುವ ನೀರಿಗೆ ಬರ. ಕೃಷಿಗೆ ನೀರಿಲ್ಲದ ಸ್ಥಿತಿ. ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿರುವ ನೀರಿನ ಪ್ರಮಾಣದಿಂದಾಗಿ ಫಲವತ್ತಾದ ಕೃಷಿಭೂಮಿ ಬರಡಾಗಿಸತ್ವಃ ಹೀನವಾಗಿದ್ದ ಅಲ್ಲೊಂದು ಇಲ್ಲೊಂದು ತೋಟಗಳು ಇಂದು ಅಕ್ಷರಶಃ  ಕಂಗೊಳಿಸುತ್ತಿವೆ.

ಭಗೀರಥನ ಕಠಿಣ ಪ್ರಯತ್ನದಿಂದ ಸ್ವರ್ಗದಲ್ಲಿರುವ ಗಂಗಾನದಿ ಧರೆಗಿಳಿದುಹಿಮಾಲಯದಲ್ಲಿ ಧುಮ್ಮಿಕ್ಕಿ, ಬಯಲಲ್ಲಿ ಭೋರ್ಗರೆದು, ಭಗೀರಥನ ಪೂರ್ವಜರಿಗೆ ಪ್ರೇತಲೋಕದಿಂದ ಮುಕ್ತಿ ನೀಡಿದರೆ, ಶ್ರೀ ತರಳಬಾಳು ಜಗದ್ಗುರುಗಳವರ ಶಾಶ್ವತ ಸ್ಮರಣೀಯ ಜಲಕೈಂಕರ್ಯದ ಯಶಸ್ಸಿನ ಪರಿಣಾಮ ಇಂದು ಜಗಳೂರು ಕೆಲವೇ ವರ್ಷಗಳಲ್ಲಿ ಮಲೆನಾಡಾಗಿ ಭಾಷ್ಯ ಬರೆಯಲಿದೆ.

ಇಂದು ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಜಗಳೂರು ತಾಲ್ಲೂಕಿನ ಹಿರೇಅರಕೆರೆ, ಮುಷ್ಟಿಗರ ಹಳ್ಳಿ, ಗೋಡೆ, ಮರಿಕುಂಟೆ, ಅಸಗೋಡು ಗ್ರಾಮದ ಕೆರೆಗಳನ್ನು ವೀಕ್ಷಿಸಿ ಬಾಗೀನ ಸಮರ್ಪಿಸಿದರು.

ಶ್ರೀ ಜಗದ್ಗುರುಗಳವರ ಆಗಮನವು ಪ್ರತಿ ಹಳ್ಳಿಗಳಲ್ಲಿ ಸಂಭ್ರಮ ತಂದಿತ್ತು. ಶ್ರೀ ಪೂಜ್ಯರ ಶಾಶ್ವತ ಸ್ಮರಣೀಯ ಜಲಕೈಂಕರ್ಯಕ್ಕೆ ಮನೆ ಮನೆಗಳಲ್ಲಿ ಭಕ್ತಿ ಕೃತಜ್ಞತೆಯು ಮೇಳೈಸಿತ್ತು. ಪೂರ್ಣಕುಂಭ ಹಿಡಿದ ಮಹಿಳೆಯರು ಶ್ರೀ ಜಗದ್ಗುರುಗಳವರನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.



ಪೂಜ್ಯರೊಂದಿಗೆ ಸಾಗಿದ  ಮೆರವಣಿಗೆಯಲ್ಲಿ  ಜನರ ಉತ್ಸಾಹ ಮುಗಿಲು ಮುಟ್ಟಿತ್ತು. ಊರಿಗೆ ಊರೇ ಸಂಭ್ರಮಪಡುವ ಅಪರೂಪದ ಕಾರ್ಯಕ್ರಮ ಇದಾಗಿತ್ತು.

ಅಸಗೋಡಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರು ಆಶೀರ್ವಚನ ದಯಪಾಲಿಸಿದರು. ಶಾಸಕ ಬಿ. ದೇವೇಂದ್ರಪ್ಪನವರು, ಮಾಜಿ ಶಾಸಕರುಗಳಾದ  ರಾಮಚಂದ್ರಪ್ಟ, ಹೆಚ್.ಪಿ.ರಾಜೇಶ್ , ಬ್ರಾಹ್ಮಣ ಅಭಿವೃದ್ಧಿಯ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ, ಮುಖಂಡ ಕೆ.ಪಿ.ಪಾಲಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು ಇದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ