Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪದವಿ ಇಲ್ಲ, ಉದ್ಯೋಗವಿಲ್ಲ: ಪ್ಲೇಸ್ಮೆಂಟ್ ಸಮಸ್ಯೆಯ ಬೆಸುಗೆ

Advertisement
ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಪದವಿ ಇಲ್ಲ
, ಉದ್ಯೋಗವಿಲ್ಲ: ಪ್ಲೇಸ್ಮೆಂಟ್ ಸಮಸ್ಯೆಯ ಬೆಸುಗೆ
ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಎಂಬ ಪದವು ಯುವಕರ ಕನಸು, ಪಾಲಕರ ಹೆಮ್ಮೆ, ಹಾಗೂ ಸಮಾಜದ ಗೌರವವನ್ನು ಹೊಂದಿದೆ. ವಿದ್ಯಾರ್ಥಿಗಳು ಮೂರು ಅಥವಾ ನಾಲ್ಕು ವರ್ಷಗಳ ಕಾಲ ದುಡಿದು ಕೊನೆಗೆ ನಿರೀಕ್ಷಿಸುವುದು ಏನು? ಒಂದು ಚೆನ್ನಾದ ಕೆಲಸ. ಆದರೆ ಈ ಕನಸು ಎಲ್ಲಾ ವಿದ್ಯಾರ್ಥಿಗಳಿಗೂ ನನಸಾಗುತ್ತಿದೆಯೆ?

ಪದವಿ ಪಡೆದವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದರಂತೆ ಉದ್ಯೋಗಗಳ ಸಂಖ್ಯೆಯೂ ಏರಬೇಕೆಂದು ಎಲ್ಲರೂ ಭಾವಿಸುತ್ತಾರೆ. ಆದರೆ ವಾಸ್ತವ ಚಿತ್ರಣ ಬೇರೆಯಾಗಿದೆ. ದೇಶದ ಅನೇಕ ಟಾಪ್ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ಹಲವಾರು ವಿದ್ಯಾರ್ಥಿಗಳು ಪ್ಲೇಸ್ಮೆಂಟ್ ಇಲ್ಲದೆ ಪದವಿ ಪಡೆದು ಹೋದ ಉದಾಹರಣೆಗಳು ಕಡಿಮೆ ಇಲ್ಲ. ಹೀಗಾಗುತ್ತಿರುವುದರ ಹಿಂದೆ ಹಲವಾರು ಕಾರಣಗಳಿವೆ.

ಟಾಪ್ ಕಾಲೇಜುಗಳಲ್ಲಿ ಪ್ಲೇಸ್ಮೆಂಟ್ ಎಲ್ಲರಿಗೂ ಉಂಟೆ?
ಒಂದು ಸಾಮಾನ್ಯ ಅಂಶವೆಂದರೆ, ಟಾಪ್ ಕಾಲೇಜುಗಳ ಕಂಪನಿ ಪ್ಲೇಸ್ಮೆಂಟ್ ಅಂದರೆ ಅದು ಎಲ್ಲ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ ಎಂಬ ಅಪರೂಪ. ಸಾಮಾನ್ಯವಾಗಿ ಕಂಪನಿಗಳು ಕೆಲವೇ ಟಾಪ್‌ಪರ್ಫಾರ್ಮರ್‌ಗಳನ್ನು ಆಯ್ಕೆಮಾಡುತ್ತವೆ. ಉಳಿದ ವಿದ್ಯಾರ್ಥಿಗಳು, ಪಠ್ಯಕ್ರಮ ಪೂರ್ಣಗೊಳಿಸಿದರೂ, ಪ್ಲೇಸ್ಮೆಂಟ್ ಇಲ್ಲದೆ ಹೊರಬರುತ್ತಾರೆ. ಇನ್ನು ಕೆಲವರು ಲಘು ಕಂಪನಿಗಳಲ್ಲಿ ಖಾಲಿ ಹುದ್ದೆಗಾಗಿ ಕಾಲುಚಾಚುತ್ತಾರೆ. ಇದು ಟಾಪ್ ಕಾಲೇಜಿಗೆ ಹೋಗಿದ್ರೆ ಗ್ಯಾರಂಟೀ ಕೆಲಸ ಸಿಗುತ್ತೆ ಎಂಬ ಕಲ್ಪನೆಗೆ ದೊಡ್ಡ ಹೊಡೆತವೇ ಸರಿ.

ಮಧ್ಯಮ ಮಟ್ಟದ ಕಾಲೇಜುಗಳಲ್ಲಿ ಅವಕಾಶಗಳು ಹೇಗೆ?
ಇನ್ನೊಂದು ಅಚ್ಚರಿಕರ ಸಂಗತಿಯೆಂದರೆ, ಕೆಲವು ಮಧ್ಯಮ ಮಟ್ಟದ ಎಂಜಿನಿಯರಿಂಗ್ ಕಾಲೇಜುಗಳು ಉದ್ಯೋಗ ದೃಷ್ಟಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಕೈಚಲಾಕಿ, ಇಂಟರ್ನ್‌ಷಿಪ್‌ಗಳು, ಪ್ರಾಜೆಕ್ಟ್ ಆಧಾರಿತ ಕಲಿಕೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಇದರೊಂದಿಗೆ, ಶಿಷ್ಟ ಶ್ರಮದೊಂದಿಗೆ ಉದ್ಯೋಗಕ್ಕೆ ಸಿದ್ಧರಾಗುವ ಎಂಜಿನಿಯರ್‌ಗಳು ಇಲ್ಲಿ ರೂಪುಗೊಳ್ಳುತ್ತಾರೆ. ಆ ಮೂಲಕ, ಅವರು ಆರಂಭದಲ್ಲಿ ಕಡಿಮೆ ಸಂಬಳದ ಕೆಲಸವನ್ನಾದರೂ ಹಿಡಿದು, ಅನುಭವ ಗಳಿಸಿ, ಕೆಲವೇ ವರ್ಷಗಳಲ್ಲಿ ದೊಡ್ಡ ಕಂಪನಿಗಳತ್ತ ಚಲಿಸುತ್ತಾರೆ.

ಒಳಗಿರುವ ಶಕ್ತಿ ಉನ್ನತ ಭವಿಷ್ಯದ ಮೂಲ ಇದರಿಂದ ನಮಗೆ ಸ್ಪಷ್ಟವಾಗುವುದು: ವಿದ್ಯಾರ್ಥಿಯ ಶ್ರಮ, ತಾವು ಹೊಂದಿರುವ ಕೌಶಲ್ಯಗಳು ಹಾಗೂ ಕಲಿಕೆಗೆ ಹೊಂದುವ ನಿಲುವು ಎಂದಿಗೂ ಕಾಲೇಜಿನ ಹೆಸರಿಗಿಂತ ಶಕ್ತಿಶಾಲಿಯಾಗಿರುತ್ತದೆ. ಯಾವುದೇ ಕಾಲೇಜಿನಲ್ಲಿ ಓದುತ್ತಿದ್ದರೂ, ಪ್ರಾಮಾಣಿಕವಾದ ಶ್ರಮ, ಕೊನೆಯಲ್ಲಿ ಅದೃಷ್ಟವನ್ನೂ ತಿದ್ದುಪಡಿ ಮಾಡುತ್ತದೆ.

ಹೀಗಾಗಿ, ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಮಟ್ಟವನ್ನೇ ನಂಬದೆ, ತಮ್ಮ ತಂತ್ರಜ್ಞಾನ ಜ್ಞಾನ, ಸಂವಹನ ಕೌಶಲ್ಯ, ಪ್ರಾಜೆಕ್ಟ್ ಅನುಭವ ಮತ್ತು ಇಂಟರ್ನ್‌ಷಿಪ್‌ಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ಲೇಸ್ಮೆಂಟ್ ಇಲ್ಲದಿದ್ದರೆ ಸಹ, ತಮ್ಮದೇ ಆದ ಜ್ಞಾನ ಮತ್ತು ಸಾಧನೆಯ ಮೂಲಕ ಉದ್ಯೋಗವನ್ನು ತಾವು ಗೆಲ್ಲಬಹುದು.



ಉಪಸಂಹಾರ-
ಇಂದಿನ ದಿನದಲ್ಲಿ ಸಿಕ್ಕಿರುವ ಕಂಪ್ಯೂಟರ್ ಸೈನ್ಸ್ ಪದವಿ ಕೇವಲ ಎಡಿಜ್ ಅಲ್ಲ. ಅದನ್ನು ಶಕ್ತಿ ಎಂಬ ಮಟ್ಟಿಗೆ ತಲುಪಿಸಬೇಕಾದ ಹೊಣೆ ವಿದ್ಯಾರ್ಥಿಯದ್ದೇ. ಪ್ಲೇಸ್ಮೆಂಟ್ ಸಿಗದಿರುವುದು ಗಮ್ಯ ತಲುಪದಂತಲ್ಲ. ಬದಲಿಗೆ, ಅದು ಹೊಸ ದಾರಿ ಹುಡುಕುವ ಪ್ರೇರಣೆಯಾಗಲಿ. ಯಾಕೆಂದರೆ, ಕೆಲಸ ಹುಡುಕುವ ಹಾದಿಯು ಹೆಜ್ಜೆ ಹೆಜ್ಜೆಯಾಗಿ ಸಾಗಿದರೆ, ಯಶಸ್ಸು ದೂರವಲ್ಲ.
ಲೇಖನ: ಚಂದನ್ ಅವಂಟಿ, ಇಡ್ಲೂರ, ಯಾದಗಿರಿ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ