Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ವ ರೋಗಗಳಿಗೂ ಧ್ಯಾನ್ಯವೊಂದೇ ಪರಿಹಾರ, ಡಾ.ಹರಿಕೃಷ್ಣರ ಧ್ಯಾನ ಮಾರ್ಗಗಳು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಾ. ಹರಿಕೃಷ್ಣರವರು ವೃತ್ತಿಯಲ್ಲಿ ವೈದ್ಯರಾಗಿದ್ದು
, ನಿರಂತರ ಧ್ಯಾನಾಭ್ಯಾಸದಿಂದ ಜ್ಞಾನೋದಯ ಪಡೆದುಧ್ಯಾನ ಪ್ರಚಾರ ಮಾಡುತ್ತಿದ್ದು, ಎಲ್ಲರೂ ಧ್ಯಾನಿಗಳಾಗಿ ತಮ್ಮನ್ನು ತಾವು ತಿಳಿದುಕೊಂಡು, ಅಲೋಪತಿ ಔಷಧಿಗಳ ಬಳಕೆ ಮಾಡದೇ, ಧ್ಯಾನದ ಮೂಲಕ ನಮ್ಮ ಆರೋಗ್ಯವನ್ನು  ನಾವೇ ಕಾಪಾಡಿಕೊಂಡು ಸುಖ ಜೀವನವನ್ನು ಹೇಗೆ ಮಾಡಬೇಕಬೇಂದು ತಿಳಿಸುತ್ತಿದ್ದಾರೆ.

ತಮ್ಮ ಜೀವನದ ಮಹಾಪರಿವರ್ತನೆಯ ದಾರಿಯನ್ನು ತೋರಿಸುವಂತಹ ಹಾಗೂ ತಮ್ಮ ಜೀವನದ ಇಚ್ಚಿತ ಗುರಿ, ಸಾಧನೆ ಹಾಗೂ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಲು ಡಾ. ಹರಿಕೃಷ್ಣ ಸರ್ ರವರ ಸೂಕ್ತ ಮಾರ್ಗಗಳನ್ನು ಅನುಸರಿಸಿ 4 ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಸಾಮಾನ್ಯ  ತಲೆನೋವಿನಿಂದ ಹಿಡಿದು ಮಾರಕ ಖಾಯಿಲೆಯಾದ ಕ್ಯಾನ್ಸರ್ ನಿಂದಲೂ ಗುಣಮುಖರಾಗಿದ್ದಾರೆ.

ಧ್ಯಾನಂ ಸರ್ವ ರೋಗ ನಿವಾರಿಣಿ, ಧ್ಯಾನo ಸರ್ವ ಭೋಗ ಕಾರಿಣಿ, ಧಾನಂ ಮುಕ್ತಿ ನಿವಾರಿಣಿ ಎಂಬಂತೆ ಧ್ಯಾನದಿಂದ ನಮ್ಮ ದೈಹಿಕ ಮತ್ತು ಮಾನಸಿಕವಾದ ಎಲ್ಲಾ ಖಾಯಿಲೆಗಳಿಗೂ ಮುಕ್ತಿಯನ್ನು ಕಾಣಬಹುದು. ನಾವು ಪ್ರತಿದಿನ ಧ್ಯಾನ ಮಾಡುವುದರಿಂದ ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಚಟುವಟಿಕೆಯಾಗುತ್ತದೆ, ಇದು ನಿರ್ಧಾರ ಶಕ್ತಿ ಮತ್ತು ಸ್ಮರಣಾ ಶಕ್ತಿಯನ್ನು ಹೆಚ್ಚಿಸುತ್ತದೆ. ಧ್ಯಾನವು ಆಮಿಗ್ಡಾಲಾನ ಚಟುವಟಿಕೆ ಕಡಿಮೆಯಾಗಿಸಲು ಸಹಾಯ ಮಾಡುತ್ತದೆ, ಇದು ಭಯ ಮತ್ತು ಆತಂಕವನ್ನು ನಿಯಂತ್ರಿಸುತ್ತದೆ.

          ಧ್ಯಾನವನ್ನು ನಿರಂತರ ಅಭ್ಯಾಸ ಮಾಡುವುದರಿಂದ  ಶರೀರ ಮತ್ತು ಮನಸ್ಸಿಗೆ ಆಳವಾದ ಶಾಂತಿ, ಆರೋಗ್ಯ ಮತ್ತು ಶಕ್ತಿ ದೊರೆಯುತ್ತದೆ, ಧ್ಯಾನವು ಒತ್ತಡವನ್ನು ಕಡಿಮೆ ಮಾಡಿ ಸಂತುಷ್ಟ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಧ್ಯಾನವು ನಮ್ಮ ದೇಹದಲ್ಲಿನ  ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಾರ್ಟಿಸೋಲ್ ಉರಿಯೂತವನ್ನು ಪ್ರಚೋದಿಸುವ ಹಾರ್ಮೋನ್ ಆಗಿದ್ದು, ಕಡಿಮೆಯಾದ ಕಾರ್ಟಿಸೋಲ್‌ನೊಂದಿಗೆ, ನಮ್ಮ ದೇಹವು ಕಡಿಮೆ ಉರಿಯೂತದ ಸೈಟೊಕಿನ್‌ಗಳನ್ನು ಉತ್ಪಾದಿಸುತ್ತದೆ. 

ಧ್ಯಾನವು ಶರೀರದಲ್ಲಿ ಮೆದುಳಿನ ಕೆಲಸದ ಪ್ರಕ್ರಿಯೆ, ರಕ್ತ ಪ್ರವಾಹ, ನರಮಂಡಲ ಮತ್ತು ಹಾರ್ಮೋನ್ ಸ್ರಾವಿಸುವಿಕೆಯ ಮೇಲೆ ಪರಿಣಾಮ . ಬೀರಿ ನರವ್ಯೂಹವನ್ನು (Nervous System) ಸಮತೋಲನಗೊಳಿಸುತ್ತದೆ ಹಾಗೂ ಹಾರ್ಮೋನ್ ನನ್ನು ನಿಯಂತ್ರಣ (Hormonal Balance) ಮಾಡುವುದರೊಂದಿಗೆ ಉಜ್ವಲ ರಕ್ತಪ್ರವಾಹಕ್ಕೂ (Improved Blood Circulation) ಸಹಾಯ ಮಾಡುತ್ತದೆ.  ಹೀಗೆ ಶರೀರರದ ಎಲ್ಲಾ ಕೋಶಗಳಿಗೆ ಆಮ್ಲಜನಕವು ಸರಿಯಾಗಿ ಹರಿಯುವಂತೆ ಮಾಡುವುದರಿಂದ ಆಮಿಗ್ಡಾಲಾ (ಭಯ ಮತ್ತು ಆತಂಕದ ಕೇಂದ್ರ) ಶಮನಗೊಳ್ಳುತ್ತದೆ. S.T.A.R. (Stress, Tension, Anxiety, Restlessness) ಹಾಗೂ ಹೃದಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಧ್ಯಾನ ಮಾಡುವಾಗ ಪ್ಯಾರಾಸಿಂಪಥೆಟಿಕ್ ನರವ್ಯೂಹ ಸಕ್ರಿಯವಾಗುತ್ತದೆ.

ಇದರ ಪರಿಣಾಮವಾಗಿ ಹೃದಯದ ಬಡಿತ ಕಡಿಮೆಯಾಗುತ್ತದೆ.  ಆಗ ರಕ್ತದೊತ್ತಡ ಸಮತೋಲನವಾಗಿಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಇದೇ ಅಲ್ಲದೆ ಹಾರ್ಮೋನಲ್ ಸಮತೋಲನಕ್ಕೆ ಸಂಬಂಧಿಸಿದಂತೆ ಧ್ಯಾನ ಮಾಡುವಾಗ ಮೆದುಳಿನಲ್ಲಿ ಡೋಪಮಿನ್, ಸೆರಟೋನಿನ್ ಮತ್ತು ಎಂಡಾರ್ಫಿನ್ ಹಾರ್ಮೋನುಗಳ ಉತ್ಪತ್ತಿ ಹೆಚ್ಚಾಗಿ ಮನಸ್ಸಗೆ. ಶಾಂತಿ ಮತ್ತು ಸಂತೋಷವನ್ನು ನೀಡುತ್ತವೆ. ಹಾಗೆ ಧ್ಯಾನ ಮಾಡುವಾಗ ಜೀರ್ಣಕ್ರಿಯೆ ಮನುಷ್ಯನ ಹೃದಯ ಮತ್ತು ಜೀರ್ಣಾಂಗಗಳ ನಡುವೆ ನಾಡಿ ಸಂಬಂಧವೇರ್ಪಟ್ಟು, ಶ್ವಾಸಕೋಶ ಮತ್ತು ಜೀರ್ಣಶಕ್ತಿಗೆ ಸಂಬಂಧಿಸಿದ ನರವ್ಯೂಹ ನಿಯಂತ್ರಣದಲ್ಲಿ ಬರುತ್ತದೆ. ಇದರಿಂದ ಅಜೀರ್ಣ, ಆಮ್ಲಪಿತ್ತ, ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ನಿಯಂತ್ರಿತವಾಗುತ್ತವೆ. ಅಷ್ಟೇ ಅಲ್ದೆ ಧ್ಯಾನದಿಂದ ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ಸಕ್ರಿಯವಾಗುತ್ತದೆ.

ಧ್ಯಾನ ಮಾಡುವುದರಿಂದ ಯಾವ ಯಾವ ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು? ನಾವು ಪ್ರತಿನಿತ್ಯ ಧ್ಯಾನ ಮಾಡುವುದರಿಂದ ಅನೇಕ ದೈಹಿಕ ಮತ್ತು ಮಾನಸಿಕ ಖಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
(1) ಮಾನಸಿಕ ಒತ್ತಡ ಮತ್ತು ಆತಂಕ ನಿವಾರಣೆಗಾಗಿ(Stress & Anxiety Relief): ಧ್ಯಾನ ಮಾಡಿದಾಗ ನರವ್ಯೂಹ ತಣಿದು ಬಿಡುತ್ತದೆ, ಇದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತವೆ. ಧ್ಯಾನದಿಂದ ಕೊರ್ಟಿಸೋಲ್ (Cortisol) ಎಂಬ ಒತ್ತಡ ಹಾರ್ಮೋನ್ ಕಡಿಮೆಯಾಗುತ್ತದೆ.



(2) ಹೃದಯ ಸಂಬಂಧಿ ರೋಗಗಳ ನಿವಾರಣೆಗೆ (Heart Diseases) ಧ್ಯಾನ ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ.ಧ್ಯಾನದಿಂದ ಹೃದಯದ ಅರೆಥ್ಮಿಯ (Arrhythmia), ಉಚ್ಛ ರಕ್ತದೊತ್ತಡ (Hypertension) ಕಡಿಮೆಯಾಗಿ ಹೃದಯದಲ್ಲಿ ಆಮ್ಲಜನಕದ ಸರಿಯಾದ ಹರಿವು ವೃದ್ಧಿಯಾಗುತ್ತದೆ.

(3) ಉಚ್ಛ ರಕ್ತದೊತ್ತಡ ನಿವಾರಣೆಗಾಗಿ (High Blood Pressure – BP) :  ಧ್ಯಾನ ಮಾಡಿದಾಗ ನರವ್ಯೂಹದ ಹಾಸ್ಯಪಾತ್ತಳ (Sympathetic Nervous System) ಶಮನಗೊಳ್ಳುತ್ತದೆ. ನಿಯಮಿತ ಧ್ಯಾನ BP ಕಡಿಮೆಯಾಗಲು ಸಹಾಯ ಮಾಡುತ್ತದೆ.

(4) ಮಧುಮೇಹ ನಿವಾರಣೆಗಾಗಿ (Diabetes Control): “ಧ್ಯಾನದಿಂದ ಇನ್ಸುಲಿನ್ ಪ್ರತಿರೋಧ (Insulin Resistance) ಕಡಿಮೆಯಾಗುತ್ತದೆ.ಇದು ಶುಗ್ರುಕ್ಸ್ಟೋರ್ಸ್ ನಿಯಂತ್ರಿಸಲು ಸಹಾಯ ಮಾಡುತ್ತದೆ.ಧ್ಯಾನ ಮಾಡಿದರೆ ಮನಃಸ್ಥಿತಿ ಸಮತೋಲನವಾಗುತ್ತದೆ, ಇದು ತಿನ್ನುವ ಅಭ್ಯಾಸಗಳು ಮೇಲೂ ಪರಿಣಾಮ ಬೀರುತ್ತದೆ.

(5) ನಿದ್ರಾಹೀನತೆಗೆ ಸಂಬಂಧಿಸಿದಂತೆ (Insomnia – Sleep Disorders): ಧ್ಯಾನ ಮಾಡುವುದರಿಂದ ಮೆದುಳಿನಲ್ಲಿ ಮೆಲಟೋನಿನ್ (Melatonin) ಸ್ರಾವ ಹೆಚ್ಚಾಗುತ್ತದೆ, ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಮನಸ್ಸಿನ ಚಿಂತೆ ಕಡಿಮೆಯಾಗುವ ಕಾರಣ, ಸಹಜ ನಿದ್ರೆ ಉಂಟಾಗುತ್ತದೆ.

(6) ಹೊಟ್ಟೆ ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳ ನಿವಾರಣೆಗಾಗಿ (Digestive Disorders): ಧ್ಯಾನ ಮಾಡಿದಾಗ ಪೇಪ್ಟಿಕ್ ಅಲ್ಸರ್, ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಕಡಿಮೆಯಾಗುತ್ತವೆ.ಇದು ಆಂತರಿಕ ಅಂಗಗಳಿಗೆ ಸೂಕ್ಷ್ಮ ಶಕ್ತಿ ಮತ್ತು ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.

(7) ಇಮ್ಯೂನ್ ಸಿಸ್ಟಮ್ ಹೆಚ್ಚಿಸುವ ಬಗೆಗೆ  (Immunity Boosting):ಧ್ಯಾನದಿಂದ ರೋಗನಿರೋಧಕ ಶಕ್ತಿ (Immunity) ಹೆಚ್ಚುತ್ತದೆ. ಧ್ಯಾನವು ಮಾನಸಿಕ ಶಾಂತಿ ಶರೀರದ ಪ್ರತಿರೋಧ ಶಕ್ತಿಯನ್ನು ಸುಧಾರಿಸುತ್ತದೆ. ಧ್ಯಾನದ

(8) ಅಲ್ಜೈಮರ್ ಮತ್ತು ನೆನಪಿನ ಸಮಸ್ಯೆಗಳ ನಿವಾರಣೆಗಾಗಿ (Memory & Brain Health): ಧ್ಯಾನವು ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ (Prefrontal Cortex) ಅನ್ನು ಶಕ್ತಿಗೊಳಿಸುತ್ತದೆ. ಇದು ಮೆದುಳಿನ ಶ್ರೇಷ್ಟತೆಯನ್ನು ಹೆಚ್ಚಿಸುತ್ತದೆ ಮತ್ತು ನೆನಪಿನ ಶಕ್ತಿ ಉತ್ತಮಗೊಳಿಸುತ್ತದೆ.

          ಹೀಗೆ ದಿನನಿತ್ಯ ಧ್ಯಾನ ಮಾಡುವುದರಿಂದ  ಅಜೀರ್ಣಜೀರ್ಣಾಂಗಗಳ ಸಕ್ರಿಯತೆ ಸಮತೋಲನ, ಶ್ವಾಸ ನಿಯಂತ್ರಣ ಸಹಕಾರ, ಹೃದಯ ಸಮಸ್ಯೆಗಳು . ಹೃದಯ ಬಡಿತ ಸಮತೋಲನ, ರಕ್ತದೊತ್ತಡ ಕಡಿಮೆ, ಪಿಸಿಒಡೀ , ಹಾರ್ಮೋನಲ್ ಬ್ಯಾಲೆನ್ಸ್, ಮೈಗ್ರೆನ್ , ಮೆದುಳಿನ ಆಮಿಗ್ಡಾಲಾ ಶಾಂತಗೊಳಿಸು, ತಲೆನೋವು ಕಡಿಮೆಯಾಗುವುದು, ಮಧುಮೇಹ, ಇನ್ಸುಲಿನ್ ಸಂವೇದನೆ ಸುಧಾರಣೆ, ಕಾರ್ಟಿಸೋಲ್ ನಿಯಂತ್ರಣಆಸ್ತಿ/ಅಲರ್ಜಿ, ಉಸಿರಾಟ ವ್ಯವಸ್ಥೆಯ ಸಮತೋಲನ, ಶ್ವಾಸದ ಒತ್ತಡ ನಿವಾರಣೆಡಿಪ್ರೆಷನ್ , ಸೆರಟೋನಿನ್ ಮತ್ತು ಡೋಪಮಿನ್ ಹಾರ್ಮೋನುಗಳ ಉತ್ಪತ್ತಿಯೇ ಅಲ್ಲದೆ ಮಾರಕ ಖಾಯಿಲೆಗಳನ್ನೂ ಜಯಿಸಬಹುದು.

ಧ್ಯಾನದ ಬಗ್ಗೆ ಧೃಢಪಟ್ಟಿರುವ ವೈಜ್ಞಾನಿಕ ಅಧ್ಯಯನಗಳು:
        ಧ್ಯಾನವು ಪುರಾತನವಾದುದಷ್ಟೇ ಅಲ್ಲದೆ ಇತ್ತೀಚ್ಛೆಗೆ ವೈಜ್ಞಾನಿಕ ಅಧ್ಯಾಯನಕ್ಕೆ ಒಳಪಟ್ಟಿದ್ದು, ಮಾನವನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವುದಷ್ಟೆ ಅಲ್ಲದೆ, ಅನೇಕ ಖಾಯಿಲೆಗಳಿಗೆ ಚಿಕಿತ್ಸಾ ವಿಧಾನವಾಗಿ ಅಳವಡಿಸಿಕೊಳ್ಲಲ್ಪಟ್ಟಿದೆ.  ಉದಾ:- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಹೇಳಿರುವಂತೆ ಧ್ಯಾನವು ADHD, ಆಂಗ್ಸೈಟಿ ಡಿಸಾರ್ಡರ್, ಮತ್ತು ಡಿಪ್ರೆಷನ್‌ನಂತೆ ಮನೋವೈಜ್ಞಾನಿಕ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ.ಒತ್ತಡ ನಿವಾರಣೆಗಾಗಿ 2003 ರಲ್ಲಿ ಯೂನಿವರ್ಸಿಟಿ ಆಫ್ ವಿಆಇಸ್‌ಕಾನ್‌ಸಿನ್ ನಡೆಸಿದ ಅಧ್ಯಯನದಿಂದ ತಿಳಿಯುತ್ತದೆ ಧ್ಯಾನವು ಆಮಿಗ್ಡಾಲಾ (ಭಯಕ್ಕೆ ಸಂಬಂಧಿಸಿದ ಮೆದುಳಿನ ಭಾಗ) ಅನ್ನು ಶಾಂತಗೊಳಿಸುತ್ತದೆ. ಇದು ಒತ್ತಡ, ಆತಂಕ ಮತ್ತು ದೀರ್ಘಕಾಲೀನ ಆತ್ಮಸಂಕಟವನ್ನು ಕಡಿಮೆ ಮಾಡುತ್ತದೆ.

ಇಮ್ಮ್ಯೂನಿಟಿ  ಸಿಸ್ಟಮ್ ಗೆ ಸಂಬಂಧಪಟ್ಟಂತೆ ಧ್ಯಾನದಿಂದ ಮಾನಸಿಕ ಒತ್ತಡ ಕಡಿಮೆಯಾಗಿ, ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದು ಕೋಶದ ರಕ್ಷಣಾತ್ಮಕ ಶಕ್ತಿಯನ್ನು (ಇಮ್ಯುನಿಟಿ) ಹೆಚ್ಚಿಸುತ್ತಿದೆ ಎಂದು "Journal of Psychosomatic Research" ಸಂಶೋಧನೆ ಒತ್ತಿಹೇಳುತ್ತದೆ. ಹಾಗೆ ಏಕಾಗ್ರತೆ ಸಂಬಂಧಿಸಿದಂತೆ 2011 ರಲ್ಲಿ ಪೋಷಣಾ ವಿಜ್ಞಾನ ಸಂಸ್ಥೆ ಪ್ರಕಟಿಸಿದ ಅಧ್ಯಯನದ ಪ್ರಕಾರ ಧ್ಯಾನವು ಗ್ರೇ ಮ್ಯಾಟರ್ ಡೆನ್ಸಿಟಿಯನ್ನು (gray matter density) ಹೆಚ್ಚಿಸುತ್ತವೆ, ಇದು ಸ್ಮರಣೆ, ಏಕಾಗ್ರತೆ ಮತ್ತು ಅಧ್ಯಯನ ಸಾಮರ್ಥ್ಯದಲ್ಲಿ ಬಹುಮಾನ್ಯ ಸುಧಾರಣೆಗೆ ಕಾರಣವಾಗುತ್ತದೆ.

ಕ್ಯಾಲಿಫೋರ್ನಿಯಾ ವಿಶ್ವವಿಧ್ಯಾಲಯವು ತಿಳಿಸಿದಂತೆ ಧ್ಯಾನದಿಂದ ಟೆಲೊಮಿಯರ್ (ಜೀವಕೋಶದ ಜೀವಿತಾವಧಿ ನಿಯಂತ್ರಿಸುವ ಭಾಗ) ಉದ್ದವು ಹೆಚ್ಚಾದದ್ದು ಕಂಡುಬಂದಿದೆ. ಇದು ವೃದ್ಧಾಪ್ಯ ಶಮನಕ್ಕೆ ಕಾರಣವಾಗಿದೆ. ಹಾಗೂ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಅಧ್ಯಯನದ ಪ್ರಕಾರ 8 ವಾರಗಳ ಧ್ಯಾನ ಅಭ್ಯಾಸದಿಂದ ಆಸ್ಟಿಯೋಪೋರೋಸಿಸ್, ಉಸಿರಾಟ ಸಮಸ್ಯೆ ಮತ್ತು ಇನ್ಸೊಮ್ನಿಯಾ ನಿಯಂತ್ರಣವಾಗಿದೆ.

"ತೇಜಸ್ವಿನಿ ಹೆಲ್ತ್ ಸ್ಟಡೀಸ್" ಪ್ರಕಾರ ಧ್ಯಾನ ಮಾಡುವವರು ಆತ್ಮಚಿಂತನೆಯಲ್ಲಿ ಹೆಚ್ಚು ತೊಡಗಿರುತ್ತಾರೆ ಎಂದು ತಿಳಿಸುತ್ತದೆ.  ಇಷ್ಟೇ ಅಲ್ಲದೆ ಧ್ಯಾನವು ಪ್ರೀಫ್ರಂಟಲ್ ಕಾರ್ಟೆಕ್ಸ್ನ ಸಕ್ರಿಯತೆಯನ್ನು ಹೆಚ್ಚಿಸುತ್ತದೆ, ಇದು ನಿರ್ಧಾರಗಳ ನಿರ್ವಹಣೆಗೆ, ಶಾಂತಿ, ಸಹನೆ ಮತ್ತು ಸ್ಥಿತಪ್ರಜ್ಞೆಗಳಿಗೆ ಕಾರಣವಾಗುತ್ತದೆ ಎಂದು ಅನೇಕ ಅಧ್ಯಾಯನಗಳು ದೃಡಪಡಿಸಿವೆ.

    ಧ್ಯಾನವು ವೈಜ್ಞಾನಿಕ ಅಧ್ಯಾನಕ್ಕೂ ಒಳಪಟ್ಟಿದ್ದು ದೈಹಿಕ ಮತ್ತು ಮಾನಸಿಕ  ಖಾಯಿಲೆಗಳನ್ನು ನಿವಾರಿಸುವಲ್ಲಿ  ಸಹಾಯಕವಾಗಿವೆ.   ದೈನಂದಿನ ಧ್ಯಾನ ಅಭ್ಯಾಸದಿಂದಶಾರೀರಿಕ ಮತ್ತು ಮಾನಸಿಕ ಸಮತೋಲನ ಉಂಟಾಗಿ, ಒಟ್ಟಾರೆ ರೋಗಮುಕ್ತ ಜೀವನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಡಾ. ಹರಿಕೃಷ್ಣರವರು ಹೇಳುತ್ತಾರೆ.
ಲೇಖನ: ಡಾ.ಮಮತ, ಕಾವ್ಯಬುದ್ಧ, ಬೆಂಗಳೂರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ