Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದುರ್ಗವನ್ನ ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲಾಗುವುದಿಲ್ಲ- ನೆಲದ ಮಾತು1

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು  1-
ಯಾರಿಗಾದರು ಸರಿ, ದುರ್ಗವನ್ನ ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲಾಗುವುದಿಲ್ಲ, ಕೋಟೆ ಎಂದರೆ ಮದಕರಿಯನ್ನ ನೆನಪಿಸುವ  ಅಬೇಧ್ಯ ಬುರುಜು, ಭತೇರಿ ಹಾಗೂ ಸಾಹಸ ಶೌರ್ಯ ಪರಾಕ್ರಮಗಳ ಮಹಾ ಸಂಗಮವೆಂದರೂ ಸರಿ.

 ಅಂದಿನ ಊರು ಈ ದಿನಕ್ಕೆ ಮತ್ತಷ್ಟು ಉದ್ದಗಲ ಹಿಗ್ಗಿ ಕಣ್ಣಳತೆಯ ದೂರಕ್ಕೂ ವಿಸ್ತರಿಸಿದೆ, ಹುಲ್ಲೂರು ಶ್ರೀನಿವಾಸಜೋಯಿಸರು ಲಕ್ಷ್ಮಣತೆಲಗಾವಿ ಇನ್ನೂ ಮುಂತಾದ ಮಹಾನ್ ಸಂಶೋದಕರ ನೆರವಿನಿಂದ, ಹಾಗೂ ತ ರಾ ಸುಬ್ಬರಾಯರು,ಬಿ ಎಲ್ ವೇಣುರವರು ಇನ್ನೂ ಮುಂತಾದ ಇತಿಹಾಸ ಕಾದಂಬರಿಕಾರರಿಂದ ಚಿತ್ರದುರ್ಗ ನಾಡಿನ ಜನತೆಗೆ ಯಾವ ಕಾಲಕ್ಕೂ ಚಿರಪರಿಚಿತವೇ.

 ಈ ಲೇಖಕರ (ಸರ್ಪಮತ್ಸರ) ನಾಗರಹಾವು, ಹಂಸಗೀತೆ, ಕಲ್ಲರಳಿ ಹೂವಾಗಿ ಕಾದಂಬರಿಗಳು ಚಲನ ಚಿತ್ರಗಳಾಗಿ ದೇಶವ್ಯಾಪಿ ಪ್ರದರ್ಶನ ಕಂಡು ದುರ್ಗದ ಹಿರಿಮೆಯನ್ನ ಹೆಚ್ಚಿಸಿವೆ, ಇಲ್ಲಿ ನಾಯಕ ಸಂತತಿಯವರಷ್ಟೇ ಅಲ್ಲ,ಕದಂಬರು, ಹೋಯ್ಸಳರು, ರಾಷ್ಟ್ರಕೂಟರು, ವಿಜಯನಗರ ಅರಸರ ಆಳ್ವಿಕೆಯ ಕುರುಹುಗಳು ಸಹ ಕಾಣ ಸಿಗುತ್ತವೆ,ಹಾಗೆಯೇ ಇನ್ನೊಂದು ವಿಶೇಷವೆಂದರೆ ದುರ್ಗದ ಪಾಳೇಗಾರರು ಅರಸರೇನಲ್ಲ ಸಾಮಂತರೇ.

ಆದರೆ ಇವರ ಆಳ್ವಿಕೆಯ ಮೇಲೆ ರಚಿತವಾಗಿರುವ ಕಾದಂಬರಿಗಳು ಭಾರತದ ಇತಿಹಾಸದಲ್ಲಿ ಯಾವ ಅರಸರು,ಚಕ್ರವರ್ತಿಗಳ ಮೇಲೂ ರಚಿತವಾಗಿಲ್ಲ,ಅಷ್ಟು ಕಾದಂಬರಿಗಳು ಇವರ ವೀರೋಚಿತ,ಸಮಾಜಮುಖಿ ಬದುಕನ್ನಾಧರಿಸಿ ರಚಿತಗೊಂಡಿವೆ.

ಇಲ್ಲಿರುವಷ್ಟು ಐತಿಹಾಸಿಕ ಕುರುಹುಗಳು ಬೇರೆಲ್ಲೂ ಕಂಡು ಬರುವುದಿಲ್ಲವೇನೋ ಅನ್ನುವಷ್ಟಿವೆ,ದುರಂತವೆಂದರೆ ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ ಮಲತಾಯಿ ದೋರಣೆಯಲ್ಲಿಯೇ ಕುಂಟುತ್ತ ಸಾಗಿದೆ.



ಮೊನ್ನೆ ಹೆಸರಿಸಿದ ರಾಜ್ಯದ ಏಳು ಅಧ್ಬುತಗಳ ಸಾಲಿನಲ್ಲಿ ದುರ್ಗವನ್ನು ಗುರುತಿಸದೇ ಇರುವುದು ಅತ್ಯಂತ ನೋವಿನ ಸಂಗತಿ(ಮುಂದೆ)
ಲೇಖನ-ಕುಮಾರ್ ಬಡಪ್ಪ


 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ