Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಮ್ಮನ ಅಂಗಳದಲ್ಲಿ ‘ಸುಹಾಸ್’ ಭವಿಷ್ಯ: ಹಿರಿಯೂರು ರಾಜಕಾರಣದ ಹೊಸ ಭಾವಪಯಣ

ಸುಧಾಕರ್ ನಂತರ ಹಿರಿಯೂರು ರಾಜಕಾರಣ ಏನು, ಯಾರು ಬಂದರೆ ಕ್ಷೇತ್ರ ಶಾಂತವಾಗಿರಲಿ?

Advertisement

 

 

ಅಮ್ಮನ ಅಂಗಳದಲ್ಲಿ ಸುಹಾಸ್ಭವಿಷ್ಯ: ಹಿರಿಯೂರು ರಾಜಕಾರಣದ ಹೊಸ ಭಾವಪಯಣ
ಸುಧಾಕರ್ ನಂತರ ಹಿರಿಯೂರು ರಾಜಕಾರಣ ಏನು, ಯಾರು ಬಂದರೆ ಕ್ಷೇತ್ರ ಶಾಂತವಾಗಿರಲಿ?
ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಬರಡಾದ ಭೂಮಿಗೆ ಭದ್ರೆ ತರುತ್ತೇನೆ" ಎಂದು ಹಗಲಿರುಳು ಶ್ರಮಿಸಿದ
, ಕ್ಷೇತ್ರದ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡಿದ್ದ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿರ್ಗಮನ ಹಿರಿಯೂರು ಕ್ಷೇತ್ರದಲ್ಲಿ ದೊಡ್ಡ ರಾಜಕೀಯ ಕಂಪನವನ್ನೇ ಸೃಷ್ಟಿಸಿದೆ. ಚಳ್ಳಕೆರೆಯಿಂದ ಬಂದು ಹಿರಿಯೂರನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡಿದ್ದ ಸುಧಾಕರ್ ಅವರ ನಂತರ ಈ ಕ್ಷೇತ್ರದ ಚುಕ್ಕಾಣಿ ಹಿಡಿಯುವವರು ಯಾರು?, ಕ್ಷೇತ್ರಕ್ಕೆ ಯಾರು ಬಂದರೆ ಕ್ಷೇತ್ರ ಶಾಂತವಾಗಿರುತ್ತದೆ, ಅಭಿವೃದ್ಧಿಗಿಂತ ಕ್ಷೇತ್ರದ ಶಾಂತಿ ಮುಖ್ಯ, ಸಣ್ಣಪುಟ್ಟ ಸಮುದಾಯಗಳನ್ನ ಯಾರು ಕೈ ಹಿಡಿಯಲಿದ್ದಾರೆ, ಮತದಾರರ ಮುಂದಿರುವ ಆಯ್ಕೆಗಳೇನು ಎನ್ನುವ ಚರ್ಚೆ ಈಗ ಗಲ್ಲಿ ಗಲ್ಲಿಗಳಲ್ಲಿ ಸದ್ದು ಮಾಡುತ್ತಿದೆ.

ಅಭಿವೃದ್ಧಿಯ ಪರ್ವಕ್ಕೆ ತೆರೆ ಬಿತ್ತೇ?:
ನಾಲ್ಕು ಬಾರಿ ಶಾಸಕರಾಗಿ, ಮಂತ್ರಿಯಾಗಿ ಜಿಲ್ಲೆಯ ಪ್ರಭಾವಿ ನಾಯಕರಾಗಿ ಬೆಳೆದಿದ್ದ ಸುಧಾಕರ್ ಅವರು ಹಿರಿಯೂರು ಕ್ಷೇತ್ರವನ್ನು ರಾಜಕೀಯವಾಗಿ ಒಂದು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು. ಭದ್ರಾ ಮೇಲ್ದಂಡೆ ಯೋಜನೆ, ನಗರದ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಈಗ ಅವರ ನಿಧನದಿಂದ ಕ್ಷೇತ್ರದ ಮತದಾರರು ಅಕ್ಷರಶಃ ಅನಾಥ ಪ್ರಜ್ಞೆಯಲ್ಲಿ ಮುಳುಗಿದ್ದಾರೆ. "ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿದ್ದ ಧ್ವನಿ ಅಡಗಿತು" ಎನ್ನುವುದು ಸಾಮಾನ್ಯ ಜನರ ಆಕ್ರಂದನ.

ಮುಂದಿನ ಸಾರಥಿ ಯಾರು? ಮತದಾರರ ಲೆಕ್ಕಾಚಾರ:
ಈಗ ಕ್ಷೇತ್ರದ ಮತದಾರರ ಮುಂದೆ ಕೇಳಿ ಬರುತ್ತಿರುವ ಅತಿ ದೊಡ್ಡ ಪ್ರಶ್ನೆ- "ಸುಧಾಕರ್ ಅವರ ಪರಂಪರೆಯನ್ನು ಮುಂದುವರಿಸುವವರು ಯಾರು?". ಅನುಕಂಪದ ಅಲೆ ಅಥವಾ ಉತ್ತರಾಧಿಕಾರ: ಸುಧಾಕರ್ ಅವರ ಕುಟುಂಬದವರು (ಪತ್ನಿ ಹರ್ಷಿಣಿ ಅಥವಾ ಪುತ್ರ ಸುಹಾಸ್) ರಾಜಕೀಯಕ್ಕೆ ಬಂದು ಅವರ ಕೆಲಸಗಳನ್ನು ಮುಂದುವರಿಸಲಿ ಎಂಬುದು ಒಂದು ವರ್ಗದ ಅಭಿಲಾಷೆ. ಅನುಕಂಪದ ಅಲೆ ಮತಗಳಾಗಿ ಪರಿವರ್ತನೆಯಾಗುವ ಸಾಧ್ಯತೆಗಳೂ ದಟ್ಟವಾಗಿವೆ.

ಪ್ರತಿಪಕ್ಷಗಳ ವ್ಯೂಹ: ಕಳೆದ ಬಾರಿ ಅಲ್ಪ ಅಂತರದಲ್ಲಿ ಪರಾಜಿತಗೊಂಡಿದ್ದ ಬಿಜೆಪಿ ಮಾಜಿ ಶಾಸಕಿ ಕೆ. ಪೂರ್ಣಿಮಾ ಅವರು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಜೆಡಿಎಸ್, ಬಿಜೆಪಿ ಕೂಡ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಆದರೆ, ಸುಧಾಕರ್ ಅವರಂತಹ ಪ್ರಭಾವಿ ವ್ಯಕ್ತಿತ್ವದ ಎದುರು ಈ ಪಕ್ಷಗಳು ಹೇಗೆ ಮರುಸಂಘಟಿತಗೊಳ್ಳುತ್ತವೆ ಎಂಬುದು ಕುತೂಹಲಕಾರಿ.

ಮತದಾರರ ನಿರೀಕ್ಷೆ: ಹಿರಿಯೂರು ಕ್ಷೇತ್ರದ ಜನರಿಗೆ ಈಗ ಬೇಕಾಗಿರುವುದು ಕೇವಲ ರಾಜಕಾರಣಿಯಲ್ಲ; ಸುಧಾಕರ್ ಅವರಂತೆ ಜನರ ಮಧ್ಯೆ ಇದ್ದು ಕೆಲಸ ಮಾಡುವ 'ಜನನಾಯಕ'. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಮತ್ತು ಕ್ಷೇತ್ರದ ಶಾಂತಿಯನ್ನು ಕಾಪಾಡುವ ವ್ಯಕ್ತಿ ಯಾರೇ ಬಂದರೂ ಅವರಿಗೆ ಅನುಕೂಲ ಎಂಬ ಚರ್ಚೆಗಳು ನಡೆಯುತ್ತಿವೆ.

ಸವಾಲುಗಳ ಬೆಟ್ಟ:
ಮುಂದಿನ ದಿನಗಳಲ್ಲಿ ಬರುವ ಉಪಚುನಾವಣೆ ಅಥವಾ ಮುಂದಿನ ಸಾರ್ವತ್ರಿಕ ಚುನಾವಣೆ ಈ ಕ್ಷೇತ್ರಕ್ಕೆ ಅಗ್ನಿಪರೀಕ್ಷೆಯಾಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ತನ್ನ ಗಟ್ಟಿಯಾದ ನೆಲೆಯನ್ನು ಉಳಿಸಿಕೊಳ್ಳುವ ಸವಾಲಿದ್ದರೆ
, ವಿರೋಧ ಪಕ್ಷಗಳಿಗೆ ಸುಧಾಕರ್ ಇಲ್ಲದ ಹಿರಿಯೂರನ್ನು ಗೆಲ್ಲುವ ಹಂಬಲವಿದೆ.

ಡಿ. ಸುಧಾಕರ್ ಎಂದರೆ ಅದು ಕೇವಲ ಹೆಸರಲ್ಲ, ಅದೊಂದು ಶಕ್ತಿ. ಆ ಶಕ್ತಿಯ ಜಾಗವನ್ನು ತುಂಬುವುದು ಅಷ್ಟು ಸುಲಭವಲ್ಲ. ಹಿರಿಯೂರು ಕ್ಷೇತ್ರದ ಮತದಾರರು ಈಗ ಭಾವನೆ ಮತ್ತು ಅಭಿವೃದ್ಧಿಯ ನಡುವೆ ನಿಂತಿದ್ದಾರೆ. ಯಾರೇ ಬಂದರೂ ಸುಧಾಕರ್ ಅವರ ಹಾದಿಯಲ್ಲಿ ನಡೆದು ಕ್ಷೇತ್ರದ ಪ್ರಗತಿಯನ್ನು ಮುನ್ನಡೆಸಲಿ ಎನ್ನುವುದೇ ವೇದಾವತಿ ತೀರದ ಜನರ ಒಕ್ಕೊರಲ ಆಶಯ.

news_1778631333_9_159.webp

news_1778631525_0_819.webp

 

ಅಭಿಮಾನಿಗಳ ಹಕ್ಕೊತ್ತಾಯ:
ರಾಜಕೀಯ ಅಖಾಡ ಎಂದರೆ ಕೇವಲ ಸೋಲು-ಗೆಲುವಿನ ಲೆಕ್ಕಾಚಾರವಲ್ಲ
, ಅಲ್ಲಿ ಭಾವನೆಗಳಿಗೂ ಒಂದು ಬೆಲೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಿರಿಯೂರು ಕ್ಷೇತ್ರದ ರಾಜಕೀಯ ಹಾದಿಯಲ್ಲಿ ಈಗ ಇಬ್ಬರು ಪ್ರಭಾವಿ ವ್ಯಕ್ತಿಗಳ ನಡುವಿನ ತಾಯಿ-ಮಗನ ಅನ್ಯೋನ್ಯತೆಯ ಮಾತುಗಳು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

​ಒಂದು ತಾಯಿಯ ಮಮತೆ, ಒಬ್ಬ ಮಗನ ಭವಿಷ್ಯ:
ಡಿ. ಸುಧಾಕರ್ ಅವರ ಪುತ್ರ ಸುಹಾಸ್ ಸುಧಾಕರ್ ಅವರನ್ನು ಗೆಲ್ಲಿಸುವುದು ಅಥವಾ ಸೋಲಿಸುವುದು ಜನರ ಕೈಯಲ್ಲಿದ್ದರೂ, ಅವರನ್ನು ಪ್ರೀತಿಯಿಂದ ಕೈಹಿಡಿದು ನಡೆಸುವ ಜವಾಬ್ದಾರಿಯನ್ನು ಹಿರಿಯೂರಿನ ಹಿರಿಯ ನಾಯಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಜನರು ಆತ್ಮೀಯವಾಗಿ ಬಿಟ್ಟುಕೊಟ್ಟಿದ್ದಾರೆ. "ಸುಹಾಸ್ ನಿಮ್ಮ ಮಗನಿದ್ದಂತೆ, ಮುಂದಿನ ಚುನಾವಣೆಯ ಉಸ್ತುವಾರಿಯನ್ನು ನೀವೇ ಹೊತ್ತುಕೊಳ್ಳಿ" ಎನ್ನುವ ಅಭಿಮಾನಿಗಳ ಮಾತುಗಳು ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿವೆ.

​ಬೈ-ಎಲೆಕ್ಷನ್ ಆಸೆಯಿಲ್ಲದ ದೊಡ್ಡ ಮನಸ್ಸು:
ಪೂರ್ಣಿಮಾ ಶ್ರೀನಿವಾಸ್ ಅವರು ಬಂದಿರುವ ಕುಟುಂಬದ ಹಿನ್ನೆಲೆ ದೊಡ್ಡದು. ಅವರಿಗೆ ಕೇವಲ ಉಪಚುನಾವಣೆಯ ಹಸಿವಿಲ್ಲ ಅಥವಾ ಸಣ್ಣ ಅಧಿಕಾರದ ಆಸೆಯಿಲ್ಲ ಎಂಬುದು ಹಿರಿಯೂರು ಜನತೆಗೆ ತಿಳಿದಿರುವ ವಿಚಾರ. ಆದರೆ, ಸುಧಾಕರ್ ಸಾಹೇಬರ ಮಗನಿಗೆ ರಾಜಕೀಯ ಧೈರ್ಯ ತುಂಬಿ, ಅವರಿಗೆ ದಾರಿದೀಪವಾಗಬೇಕೆಂಬುದು ಇಂದಿನ ಸುಧಾಕರ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯವಾಗಿದೆ.

​ಅಮ್ಮನ ಆ ಸಾಂತ್ವನವೇ ಸಾಕ್ಷಿ!:
ಕಳೆದ ದಿನ ನಡೆದ ಘಟನೆಯಲ್ಲಿ, ಸುಹಾಸ್ ಅವರ ವಯಸ್ಸನ್ನು ಪರಿಗಣಿಸಿ ಅವರಿಗೆ ಪೂರ್ಣಿಮಾ ಅವರು ನೀಡಿದ ಸಾಂತ್ವನ ಎಲ್ಲರ ಕಣ್ಣು ಸೆಳೆದಿದೆ. "ನನ್ನ ಮಗನ ವಯಸ್ಸಿನವನು ನೀನು" ಎನ್ನುವ ಭಾವನೆಯಿಂದ ಅವರು ಮಾಡಿದ ಹಿತವಚನಗಳು ಬದ್ಧ ವೈರಿಗಳೂ ಒಂದಾಗುವ ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿಯಾಯಿತು.

​ಹಿರಿಯೂರು ಜವಾಬ್ದಾರಿ ಪೂರ್ಣಿಮಾ ಅವರ ಹೆಗಲಿಗೆ?:
ಸುಹಾಸ್ ಸುಧಾಕರ್ ಅವರ ಮನವೊಲಿಸಿ, ಅವರಿಗೆ ಚುನಾವಣಾ ಅಖಾಡದಲ್ಲಿ ಧೈರ್ಯ ತುಂಬುವ ಕೆಲಸವನ್ನು ಈಗ ಪೂರ್ಣಿಮಾ ಅವರೇ ಮಾಡಬೇಕಿದೆ. ತಾಯಿಯ ಸ್ಥಾನದಲ್ಲಿ ನಿಂತು ಸುಹಾಸ್ ಅವರನ್ನು ಮುನ್ನಡೆಸಿದರೆ, ಹಿರಿಯೂರಿನ ಭವಿಷ್ಯ ಹೊಸ ದಿಕ್ಕಿನತ್ತ ಸಾಗುವುದರಲ್ಲಿ ಸಂಶಯವಿಲ್ಲ.

​ಒಟ್ಟಿನಲ್ಲಿ, ಹಿರಿಯೂರು ವಿಧಾನಸಭಾ ಕ್ಷೇತ್ರವು ಕೇವಲ ಮತಗಳ ಕಣವಾಗಿ ಉಳಿಯದೆ, ಸಂಬಂಧಗಳ ಸೇತುವೆಯಾಗುತ್ತಿದೆ. ತಾಯಿ-ಮಗನ ಈ ಬಾಂಧವ್ಯ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಹೇಗೆ ಬದಲಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯ-- ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ಟೈಲರಿಂಗ್ ತರಬೇತಿ ಹಾಗೂ ಯಂತ್ರೋಪಕರಣಗಳ ವಿತರಣೆಗೆ ಅರ್ಜಿ ಆಹ್ವಾನಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಹತಾ ಪರೀಕ್ಷೆ: 321 ವಿದ್ಯಾರ್ಥಿಗಳು ಹಾಜರುನಿರುದ್ಯೋಗಿಗಳಿಗೆ ರುಡ್‍ಸೆಟ್  ಸಂಸ್ಥೆಯಿಂದ ಉದ್ಯೋಗ ತರಬೇತಿಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಅದ್ದೂರಿಯಾಗಿ ನಡೆದ ಉಜ್ಜನಿ ಬೀರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಯಭಾರಿ ಸ್ವಾಮಿ ರಂಗನಾಥಾನಂದಜೀಡಾ. ಅಂಬೇಡ್ಕರ್ ಅವರ ಜಯಂತಿ ಕೇವಲ ಒಂದು ಜಾತಿ ಧರ್ಮಕ್ಕೆ ಮೀಸಲಾಗಬಾರದುಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮೋತ್ಸವಕ್ಕೆ ಸಚಿವ ಎಂ.ಬಿ. ಪಾಟೀಲ್‌ಗೆ ಆಮಂತ್ರಣಜನರ ಅಹವಾಲು ಆಲಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್: ದಾವಣಗೆರೆಯಲ್ಲಿ ‘ಜನತಾದರ್ಶನ’