Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಯಿಯ ಹೃದಯ ಕಲಿಸಿದ ಮಹಾ ಪಾಠಗಳು

Advertisement
ತಾಯಿಯೊಬ್ಬಳ ಕರುಣೆಯಿಂದ ಮೂಡಿದ ಬದುಕಿನ ಪಾಠ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಾಯಿಯೊಬ್ಬಳ ಕರುಣೆಯಿಂದ ಮೂಡಿದ ಬದುಕಿನ ಪಾಠ
.
ಶಾಪಿಂಗ್‌ನ ಸಾಹಸದಿಂದ ಧ್ಯಾನದ ಶಾಂತಿವರೆಗೂ
ಸಣ್ಣ ಘಟನೆಗಳಲ್ಲಿ ತಾಯಿಯ ಹೃದಯ ಕಲಿಸಿದ ಮಹಾ ಪಾಠಗಳು.

ಒಂದು ದಿನದ ಅನುಭವ ಕಥನ-
ಜೀವನದಲ್ಲಿ ಕೆಲವೊಮ್ಮೆ ದಿನನಿತ್ಯದ ಘಟನೆಗಳೇ ನಮ್ಮ ಮನಸ್ಸಿನಲ್ಲಿ ಆಳವಾದ ಪಾಠಗಳನ್ನು ಮೂಡಿಸುತ್ತವೆ. ಇತ್ತೀಚೆಗೆ ನನಗೆ ಹಾಗೂ ನನ್ನ ತಾಯಿಗೆ ಸಂಭವಿಸಿದ ಕೆಲವು ಸಣ್ಣ ಘಟನೆಗಳು ನನ್ನ ಬದುಕಿನಲ್ಲಿ ಮಹತ್ವದ ತಿರುವು ತಂದಿವೆ. ಅವುಗಳನ್ನು ಓದುಗರೊಂದಿಗೆ ಹಂಚಿಕೊಳ್ಳಲು ಮನಸ್ಸಾಗಿದೆ. ಜೀವನದಲ್ಲಿ ಕೆಲವೆಡೆಕಾಣುವ ಘಟನೆಗಳೇ ನಮ್ಮ ಮನಸ್ಸಿನಲ್ಲಿ ಆಳವಾದ ಪಾಠಗಳನ್ನು ಬಿಟ್ಟುಹೋಗುತ್ತವೆ. ಅತಿ ಸಣ್ಣ ಸಂದರ್ಭವೂ ನಮ್ಮ ದೃಷ್ಟಿಕೋನವನ್ನು ಬದಲಾಯಿಸಲು ಶಕ್ತಿ ಹೊಂದಿದೆ. ಇತ್ತೀಚೆಗೆ ನನ್ನ ಮತ್ತು ತಾಯಿಯ ಅನುಭವಗಳು ನನಗೆ ಅದ್ಭುತ ಜೀವನ ಪಾಠಗಳನ್ನು ಕಲಿಸಿವೆ.

ದಸರಾ ರಜೆ ಇರುವುದರಿಷ ಒಂದು ದಿನ ಶಾಪಿಂಗ್, ಸೀರೆಗಳ ಆಯ್ಕೆ, ಧ್ಯಾನ ಮತ್ತು ಮಾನವೀಯ ನೆರವು. ಈ ಎಲ್ಲ ಘಟನೆಗಳು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು. ಪ್ರತಿಯೊಂದು ದಿನದ ಸಾಮಾನ್ಯ ಸಣ್ಣ ಘಟಣೆಯು ಸಹ ಜೀವನದಲ್ಲಿ extraordinary ಪಾಠಗಳನ್ನು ಕಲಿಯಲು ಸಹಾಯವಾಗುತ್ತದೆ. ಜೀವನದಲ್ಲಿ ಕೆಲವೆಡೆ ಕಾಣುವ ಘಟನೆಗಳೇ ನಮ್ಮ ಮನಸ್ಸಿನಲ್ಲಿ ಆಳವಾದ ಪಾಠಗಳನ್ನು ಕಲಿಯುವಂತೆ ಮಾಡುತ್ತದೆ. ನೆನ್ನೆ ನನಗೆ ಮತ್ತು ನನ್ನ ತಾಯಿಗೆ ಸಂಭವಿಸಿದ ದಿನನಿತ್ಯದ ಕೆಲವು ಅನುಭವಗಳು ನನ್ನ ಜೀವನದಲ್ಲಿ ಅದ್ಭುತ ಪಾಠಗಳನ್ನು ಕಲಿಸಿವೆ. ಶಾಪಿಂಗ್, ಸೀರೆಗಳ ಆಯ್ಕೆ, ಧ್ಯಾನ ಮತ್ತು ಮಾನವೀಯ ನೆರವು. ಈ ಎಲ್ಲಾ ಘಟನೆಗಳು ನನ್ನ ಮನಸ್ಸಿನಲ್ಲಿ ಶಾಶ್ವತ imprint ಬಿಟ್ಟವು. ನನ್ನ ಮನಃಪರಿವರ್ತನೆಯಾಗಲು ಸಹಾಯವಾಯಿತು.

ಶಾಪಿಂಗ್‌ನಲ್ಲಿ ಆರಂಭವಾದ ಅಸಾಧಾರಣ ಅನುಭವ-
ಕನ್ನಡ ರಾಜ್ಯೋತ್ಸವ ಹತ್ತಿರವಾಗುತ್ತಿದ್ದುದರಿಂದ ನಾನು ಮತ್ತು ಅಮ್ಮ ಶಾಪಿಂಗ್‌ಗೆ ಹೊರಟೆವು. ಕಾರಣ ಬಹಳ ವಿಶೇಷ. ನನ್ನ ಸಹೋದ್ಯೋಗಿಗಳಿಗೆ ಕರ್ನಾಟಕದ ಇಳಕಲ್ ಸೀರೆಗಳು ಹಾಗೂ ಕೈಮಗ್ಗ ಪ್ಯೂರ್ ಹ್ಯಾಂಡ್‌ಲೂಮ್ ಕಾಟನ್ ಸೀರೆಗಳು ಉಡುಗೊರೆಯಾಗಿ ಕೊಡಬೇಕೆಂಬ ಉದ್ದೇಶ. ನನ್ನ ಜೊತೆ ಕೆಲಸ ಮಾಡುವವರು ಬಹಳಷ್ಟು ವಿದೇಶ ಹಾಗೂ ಹೊರ ರಾಜ್ಯಗಳಿಂದ ಬಂದವರಾಗಿದ್ದರಿಂದ, ರಾಜ್ಯೋತ್ಸವದಂದು ಆ ಸೀರೆಗಳನ್ನು ತೊಟ್ಟು ನಮ್ಮ ಸಂಸ್ಕೃತಿಯನ್ನು ಎತ್ತಿ ತೋರಿಸುವಂತೆ ಪ್ರೇರೇಪಿಸಬೇಕು ಎಂದು ಮನಸ್ಸು ಮಾಡಿದೆಯೇ ಹೊರತು. ನೀವು ಹಾಕಿ ಎಂದರೆ ಅವರು ಖಂಡಿತ ಹಾಕುತ್ತಾರೆಎಂಬ ವಿಶ್ವಾಸವೂ ನನ್ನೊಳಗೆ ಬೆಳೆದಿತ್ತು.

ಶಾಪಿಂಗ್‌ನಲ್ಲಿ ಅಸಾಧಾರಣ ಅನುಭವ-
ಶಾಪಿಂಗ್ ಆರಂಭಿಸಲು ಮೊದಲು ಸ್ಕಿನ್ ಮತ್ತು ಹೇರ್ ಕೇರ್ ಉತ್ಪನ್ನಗಳನ್ನು ನೋಡೋಣವೆಂದು ರಾಜಗುರುಅಂಗಡಿಗೆ ಹೋದೆವು. ಅಲ್ಲಿ ಹೊಸ ಉತ್ಪನ್ನಗಳ ಬಗ್ಗೆ ವಿಚಾರಿಸುತ್ತಾ, ಟ್ರಯಲ್ ನೋಡೋದರಲ್ಲಿ ನಾನು ತೊಡಗಿಕೊಂಡೆ. ಇನ್ನು ಅಮ್ಮಗೆ ಬೇಸರವಾಗಿತ್ತು. ಅದೆ ಸಮಯದಲ್ಲಿ ಅಂಗಡಿಯೊಳಗೆ ಯೂಟ್ಯೂಬರ್‌ಗಳು ಜಾಹೀರಾತು ಚಿತ್ರೀಕರಣ ಮಾಡುತ್ತಿದ್ದರು. ಮನರಂಜನೆಗಾಗಿ ಅಮ್ಮ ಅವರು ಅದನ್ನೇ ಗಮನಿಸುತ್ತಾ, ಚಿತ್ರೀಕರಣದ ನಡುವೆ ಇದನ್ನು ಹೀಗೆ ಮಾಡಿದ್ರೆ ಚೆನ್ನಾಗಿರುತ್ತೆ, ಅದನ್ನು ಹೀಗೆ ಹೇಳಿದ್ರೆ ನೈಸರ್ಗಿಕವಾಗಿರುತ್ತೆಎಂದು ನಿರ್ದೇಶಕರಂತೆ ಟಿಪ್ಪಣಿ ಕೊಡುತ್ತಾ ಕುಳಿತಿದ್ದರು.

ಅದನ್ನು ಗಮನಿಸಿದ ಯೂಟ್ಯೂಬರ್‌ಗಳು ಮತ್ತು ಅಂಗಡಿಯ ಮಾಲೀಕರು ಅಮ್ಮನತ್ತ ಬಂದು, “ನೀವು 24 ವರ್ಷಗಳಿಂದ ಇಲ್ಲಿ ಬರ್ತಿದ್ದೀರಲ್ಲಾ, ದಯವಿಟ್ಟು ನಮ್ಮ ಅಂಗಡಿಯ ಬಗ್ಗೆ ಹೇಳಿಎಂದು ಒತ್ತಾಯಿಸಿದರು. ಅಮ್ಮ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ನನ್ನನ್ನೇ ವೇದಿಕೆಗೆ ತಳ್ಳಿದರು. ನನ್ನ ಮಗಳು ತುಂಬಾ ಜ್ಞಾನವಂತಳು; 26 ವರ್ಷಗಳ ಬ್ಯೂಟೀಷಿಯನ್ ಅನುಭವವಿದೆ, ಮಾಡೆಲಿಂಗ್ ಮಾಡಿದ್ದಾರೆ, ಡಾಕ್ಟರೇಟ್ ಪಡೆದಿದ್ದಾರೆ, ವರ್ಲ್ಡ್‌ರೆಕಾರ್ಡ್ ಹೊಂದಿದ್ದಾರೆ, ಸ್ಕಿನ್‌ಸ್ಪೆಷಲಿಸ್ಟ್ ಕೂಡಎಂದು ನನ್ನ ಪರಿಚಯವನ್ನು ಸೊಗಸಾಗಿ ಹೇಳಿದರು. 

ಇದನ್ನು ಕೇಳಿದ ಅಂಗಡಿಯವರು ನನ್ನನ್ನೇ ಮಾತನಾಡಲು ಒತ್ತಾಯಿಸಿದರು. ಆದರೆ ನಾನು ಆ ದಿನ ಮೇಕಪ್ ಮಾಡದೇ ಹೋಗಿದ್ದೆ. ಅಮ್ಮ ಸೂಚಿಸಿದ ಕಾರಣ, ಅಂಗಡಿಯವರು ಸ್ವಲ್ಪ ಪೌಡರ್, ಲಿಪ್‌ಸ್ಟಿಕ್ ಮತ್ತು ಕೂದಲಿಗೆ ಟಚ್‌ಅಪ್ ಮಾಡಿಕೊಟ್ಟರು. ಒತ್ತಾಯವನ್ನು ಲೆಕ್ಕಿಸದೆ ಬಿಡಲಾಗಲಿಲ್ಲ. ಕೊನೆಗೆ ನಾನು ಮಾತನಾಡಿದೆ.

ನನ್ನ ಮಾತು ಮುಗಿದೊಡನೆ ಎಲ್ಲರೂ ಖುಷಿಪಟ್ಟರು. ಅಂಗಡಿಯ ಮಾಲೀಕರು ತುಂಬಾ ಸಂತೋಷದಿಂದ, “ಹಬ್ಬದ ಗಿಫ್ಟ್ಎಂದು ಒಂದು ಚಿಕ್ಕ ಮೇಕಪ್ ಬ್ಯಾಗ್ ಕೊಟ್ಟರು. ಆ ವೇಳೆಗೆ ನಾನು ಸುಮಾರು ಆರು ಸಾವಿರ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಅಂಗಡಿಯಿಂದ ಖರೀದಿಸಿಬಿಟ್ಟಿದ್ದೆ.



ಆ ಕ್ಷಣದಲ್ಲಿ ನನಗೆ ತುಂಬಾ ಸಂತೋಷವಾಯಿತು. ಏಕೆಂದರೆ ಆ ದಿನ ನನಗೆ ಗಿಫ್ಟ್ ಕೊಡುವವರೂ ಇದ್ದರು, ಗಿಫ್ಟ್ ಪಡೆಯುವ ಭಾಗ್ಯವೂ ನನಗೆ ಒಲಿದು ಬಂತು. ಆದರೆ ಇದರ ಹಿನ್ನಲೆಯಲ್ಲಿ ಒಂದೇ ಒಂದು ಉದ್ದೇಶ. ಕನ್ನಡ ರಾಜ್ಯೋತ್ಸವದಂದು ನನ್ನ ಸಹೋದ್ಯೋಗಿಗಳು ನಮ್ಮ ಸಾಂಸ್ಕೃತಿಕ ಗೌರವವನ್ನು ಹೊತ್ತು ನಡೆಯಬೇಕು, ಕನ್ನಡಿಗರ ಪರಂಪರೆಯನ್ನು ಒಮ್ಮೆ ಅನುಭವಿಸಬೇಕು. ಆ ಶಾಪಿಂಗ್ ಅನುಭವ ನನಗೆ ತಿಳಿಸಿತು ಒಂದು ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಯ ಬೀಜ ಬಿತ್ತಬಹುದು.

ಒಳ್ಳೆಯ ಹೃದಯ, ಸೌಂದರ್ಯದ ಸೂತ್ರಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಜೀವನದಲ್ಲಿ ನಾವು ಹೆಚ್ಚು ಕಲಿಯಬೇಕಾದರೆ, ಎಲ್ಲ ಸಂದರ್ಭಗಳನ್ನು ಗಮನದಿಂದ ನೋಡು. ಪ್ರತಿಯೊಂದು ಕ್ಷಣವೂ ಪಾಠ ನೀಡುತ್ತದೆ.

ಚಿಕ್ಕಪೇಟೆಯಲ್ಲಿನ ರೇಷ್ಮೆ ಸೀರೆ ಶಾಪಿಂಗ್- ಒಂದು ಸಾಹಸ
ಸೌಂದರ್ಯ ಉತ್ಪನ್ನಗಳ ಶಾಪಿಂಗ್ ಮುಗಿದ ನಂತರ, ಮುಂದಿನ ಕೆಲಸ ರೇಷ್ಮೆ ಸೀರೆ ಹುಡುಕುವುದು. ನನ್ನ ಕಜಿನ್ (ಅವಳು ಡಾಕ್ಟರ್‌) ನನಗೆ ಸ್ಪಷ್ಟವಾಗಿ ಹೇಳಿದ್ದಳು: ನನಗೆ ಒಂದು ರೇಷ್ಮೆ ಸೀರೆ ತಂದುಕೊಡು.ಅವಳಿಗೆ ಶಾಪಿಂಗ್‌ಗೆ ಹೋಗಲು ಸಮಯವಿರಲಿಲ್ಲ, ಆದ್ದರಿಂದ ನನ್ನ ಮೇಲೇ ಹೊಣೆ. ನಾನು ಕೂಡಾ ಸರಿ, ನಿನಗಾಗಿ ತರುತ್ತೇನೆಎಂದು ಒಪ್ಪಿಕೊಂಡಿದ್ದೆ.

ಇದಕ್ಕಾಗಿ ನಾವು ಚಿಕ್ಕಪೇಟೆಗೆ ಹೊರಟೆವು. ಅಲ್ಲಿ ರೇಷ್ಮೆ ಸೀರೆ ಅಂಗಡಿಗಳು ಅಸಂಖ್ಯಾತ. ಚಿಕ್ಕಪೇಟೆಯ ಜನಸಂದಣಿ ನೋಡಿದರೆ. ಅದು ತಾನೇ ಒಂದು ಸಾಹಸ! ಜನರ ನೂಕುನುಗ್ಗಲು, ರಸ್ತೆ ತುಂಬಿದ ವಾಹನಗಳು, ಅಂಗಡಿಗಳ ಒಳಹೊಕ್ಕು ಹೊರಬರಲು ಕಷ್ಟ all in all, ಅದು ಒಂದು ವಿಶಿಷ್ಟ ಅನುಭವ.

ಅಂಗಡಿಯಲ್ಲಿ ಒಂದರ ಹಿಂದೆ ಒಂದರಂತೆ ಸೀರೆಗಳನ್ನು ತೆಗೆಯಿಸಿ ನೋಡುತ್ತಾ, ಅವುಗಳ ಫೋಟೋಗಳನ್ನು ತೆಗೆದು ಕಜಿನ್‌ಗೆ ವಾಟ್ಸಪ್‌ನಲ್ಲಿ ಕಳುಹಿಸುತ್ತಿದ್ದೆ. ಅವಳು ಡಾಕ್ಟರ್ ಆದ್ದರಿಂದ, ತಕ್ಷಣ ಪ್ರತಿಕ್ರಿಯೆ ಕೊಡಲು ಅವಳಿಗೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಆಯ್ಕೆ ಮಾಡದೇ ಬಿಡುವುದೂ ಸಾಧ್ಯವಿರಲಿಲ್ಲ. ಅವಳು ಒಂದೊಂದೇ ಫೋಟೋ ನೋಡುತ್ತಾ, “ಇದು ಬೇಡ, ಅದು ಬೇಡ, ಇದು ಸರಿಎಂದು ಕೊನೆಗೂ ಒಂದು ಫೈನಲ್ ಸೆಲೆಕ್ಷನ್ ಮಾಡಿದರು.

ಆದರೆ ಚಿಕ್ಕಪೇಟೆಯಲ್ಲಿ ಶಾಪಿಂಗ್ ಅಂದ್ರೆ ಬಾರ್ಗೇನ್ ಮಾತುಕತೆ ತಪ್ಪದೇ ನಡೆಯುತ್ತದೆ. ಹೇಳಿದ ಬೆಲೆಯಲ್ಲಿ ಕೊಡಿಸಿಕೊಳ್ಳುವುದು ಅಸಾಧ್ಯ. ಅಲ್ಲಿ ಅಂಗಡಿಕಾರರು ತಮ್ಮ ಬೆಲೆಯಲ್ಲಿ ಅಡ್ಡಿ ಹಿಡಿಯುತ್ತಾರೆ, ಗ್ರಾಹಕರು ತಮ್ಮದೇ ರೀತಿಯಲ್ಲಿ ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಹೀಗೆಯೇ ನಾನೂ ಮಾತನಾಡುತ್ತಿದ್ದೆ.

ನಮ್ಮಕ್ಕ ನಿಯಮಿತವಾಗಿ ಚಿಕ್ಕಪೇಟೆಯಲ್ಲಿ ಸೀರೆಗಳನ್ನು ಖರೀದಿಸುತ್ತಿದ್ದರು. ಅವರ ಪರಿಚಯದಿಂದ ಒಂದು ಕಾನ್ಟ್ಯಾಕ್ಟ್ ಸಿಕ್ಕಿತು. ಅಂಗಡಿಯವರಿಗೆ ಅವರೊಂದಿಗೆ ಫೋನ್‌ನಲ್ಲಿ ಮಾತುಕತೆ ಮಾಡಿಸಿ, ಕೊನೆಗೂ ಒಂದು ಅಂತಿಮ ಬೆಲೆ (ಫೈನಲ್ ಕಾಸ್ಟ್) ಫಿಕ್ಸ್ ಆಯಿತು. ಇಷ್ಟರಲ್ಲೇ ಗಡಿಯಾರ ನೋಡಿದರೆ ಸಂಜೆ 6:30! ಸಮಯ ಹೇಗೆ ಹಾರಿ ಹೋಗಿತೋ ತಿಳಿಯದೆ ಹೋಯಿತು.

ಆದರೂ ನನ್ನೊಳಗೆ ಒಂದು ತೃಪ್ತಿ-
ಕಜಿನ್‌ಗಾಗಿ ಸೀರೆ ತರುವ ಕೆಲಸ ಯಶಸ್ವಿಯಾಗಿ ಮುಗಿದಿದೆಅನ್ನುವ ಭಾವನೆ. ಆದರೆ ಕೆಲಸ ಇನ್ನೂ ಬಾಕಿ. ನನ್ನ ಸಹೋದ್ಯೋಗಿಗಳಿಗೆ ಹ್ಯಾಂಡ್‌ಲೂಮ್ ಕಾಟನ್ ಸೀರೆಗಳು ತೆಗೆದುಕೊಳ್ಳಬೇಕಿತ್ತು.

ಸಹೋದ್ಯೋಗಿಗಳಿಗೆ ಹ್ಯಾಂಡ್‌ಲೂಮ್ ಸೀರೆ-ಸಂಸ್ಕೃತಿ ಹೊತ್ತು ಹೋಗುವ ಉಡುಗೊರೆ
ಕನ್ನಡ ರಾಜ್ಯೋತ್ಸವ ಹತ್ತಿರವಾಗುತ್ತಿದ್ದುದರಿಂದ, ನಾನು ಮತ್ತು ಅಮ್ಮ ವಿಶೇಷ ಉದ್ದೇಶದಿಂದ ಶಾಪಿಂಗ್‌ಗೆ ಹೊರಟೆವು. ಈ ಬಾರಿ ಸಾಮಾನ್ಯ ಖರೀದಿ ಅಲ್ಲ. ನನ್ನ ಸಹೋದ್ಯೋಗಿಗಳಿಗೆ ಕರ್ನಾಟಕದ ಪರಂಪರೆ, ಸಾಂಸ್ಕೃತಿಕ ಗೌರವವನ್ನು ತೋರಿಸಬಲ್ಲ ಉಡುಗೊರೆ ಆಯ್ಕೆ ಮಾಡಬೇಕು ಎನ್ನುವ ಬರೆವು ಹೃದಯದಲ್ಲಿ ಇತ್ತು. ಆದ್ದರಿಂದ ಇಳಕಲ್ ಸೀರೆಗಳು ಮತ್ತು ಕೈಮಗ್ಗ ಪ್ಯೂರ್ ಹ್ಯಾಂಡ್‌ಲೂಮ್ ಕಾಟನ್ ಸೀರೆಗಳು ನಮ್ಮ ದೃಷ್ಟಿಕೋಣದಲ್ಲಿ ನಿಖರವಾದ ಆಯ್ಕೆ ಆಗಿತ್ತು.

ನನ್ನ ಸಹೋದ್ಯೋಗಿಗಳಲ್ಲಿ ಬಹಳಷ್ಟು ಮಂದಿ ವಿವಿಧ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಬಂದಿರುವವರು. ರಾಜ್ಯೋತ್ಸವದಂದು ಅವರು ನಮ್ಮ ಸಂಸ್ಕೃತಿಯ ಹೂವಿನ ಸುಗಂಧವನ್ನು ತೋರುವಂತೆ, ಆಯ್ಕೆ ಮಾಡಿದ ಸೀರೆಗಳನ್ನು ತೊಟ್ಟು, ಹೆಮ್ಮೆಯಿಂದ ನಮ್ಮ ಪರಂಪರೆಯನ್ನು ಮೆಚ್ಚಿಸಬೇಕೆಂಬ ಪ್ರೇರಣೆಯೇ ನನ್ನೊಳಗೆ ಉಂಟಾಗಿತ್ತು. ನೀವು ಸೀರೆ ತೊಡಿ ಎಂದರೆ ಅವರು ಖಂಡಿತ ತೊಡುತ್ತಾರೆಎಂಬ ವಿಶ್ವಾಸವು ನನ್ನ ಹೃದಯದಲ್ಲಿ ಬೆಳೆಯಿತು.

ಆತ್ಮೀಯರಿಗೆ ಸರಿಯಾದ ಬಣ್ಣ ಮತ್ತು ವಿನ್ಯಾಸದ ಸೀರೆಗಳನ್ನು ತಂದುಕೊಡುವುದು ಹೀಗೇ ಸುಲಭವಲ್ಲವೆ? ಅಂಗಡಿಗಳೊಳಗೆ ಒಂದರ ಹಿಂದೆ ಒಂದರಂತೆ ಬಣ್ಣಬಣ್ಣದ ಸೀರೆಗಳನ್ನು ತೋರಿಸಿಕೊಂಡು, ಫೋಟೋಗಳನ್ನು ತೆಗೆದು ವಾಟ್ಸಪ್ ಮೂಲಕ ಕಳುಹಿಸಲು ಶುರು ಮಾಡಿದೆವು. ಪ್ರತಿ ಫೋಟೋ ನೋಡಿದ ಸಹೋದ್ಯೋಗಿಯ ಪ್ರತಿಕ್ರಿಯೆ ತುಂಬಾ ಸವಾಲಾಗಿತ್ತು. ಕೆಲವರು ಇದು ಚೆನ್ನಾಗಿದೆ, ಆದರೆ ಬಣ್ಣ ಹೆಚ್ಚು ಗಾಢವಾಗಿದೆಎಂದು ಸಲಹೆ ನೀಡಿದರೆ, ಇನ್ನೂ ಕೆಲವರು ಇದು ಸರಿಯಾಗಿದೆ, ಹಗುರವಾದ ಶೇಡ್ ಚೆನ್ನಾಗಿದೆಎಂದು ತಮ್ಮ ಅಭಿಪ್ರಾಯವನ್ನೂ ಹಂಚಿದರು. ಪ್ರತಿಯೊಬ್ಬರ ಅಭಿಪ್ರಾಯವನ್ನು ಗಮನಿಸಿದ ನಂತರ ಕೊನೆಗೆ ಒಬ್ಬೊಬ್ಬರ ಇಷ್ಟದ ಸೀರೆ ಆರಿಸಿಕೊಂಡು, ಖರೀದಿ ಮಾಡಲು ಫೈನಲ್ ನಿರ್ಧಾರ ಮಾಡಿದೆವು.

ಆ ಕ್ಷಣದಲ್ಲಿ ನನಗೆ ತಿಳಿದುಬಂದದ್ದು-
ಸಣ್ಣ ಉಡುಗೊರೆ, ಸೈಜ್, ಬಣ್ಣ ಅಥವಾ ಬೆಲೆಗಳಲ್ಲ, ಹೃದಯದ ಪ್ರಾಮಾಣಿಕತೆಯು ಮತ್ತು ಪರಸ್ಪರ ಗೌರವವು ಹೆಚ್ಚು ಮಹತ್ವವಿದೆ. ಅಂತಿಮವಾಗಿ ಆಯ್ಕೆಗೊಂಡ ಸೀರೆಗಳನ್ನು ನೋಡಿದಾಗ, ನನ್ನ ಮನಸ್ಸಿನಲ್ಲಿ ಸಂತೋಷ ಮತ್ತು ಸಮಾಧಾನ ತುಂಬಿ ಹೋದಿತು. ಇದು ಕೇವಲ ಶಾಪಿಂಗ್ ಅನುಭವವಲ್ಲ, ಸಂಸ್ಕೃತಿಯ ಪ್ರೀತಿ ಮತ್ತು ಒಗ್ಗಟ್ಟು ಪಾಠವನ್ನೇ ಕಲಿಸಿದ ಕ್ಷಣ ಎಂಬುದು ಸ್ಪಷ್ಟವಾಗಿದೆ.

ಸಣ್ಣ ಉಡುಗೊರೆ, ದೊಡ್ಡ ಸಂತೋಷ. ಪರಂಪರೆಯನ್ನು ಉಳಿಸಲು ಸಣ್ಣ ಪ್ರಯತ್ನವೇ ದೊಡ್ಡ ಬದಲಾವಣೆ ತರಬಹುದು”. 

ಬಸ್‌ನಲ್ಲಿ ಮೂಡಿದ ಪಾಠ-ತಾಯಿಯೊಬ್ಬಳ ಕರುಣೆಯಿಂದ ವೃದ್ಧನ ನೋವಿನ ಪರಿಹಾರ ತಾಯಿಯೊಬ್ಬಳ ಕರುಣೆಯಿಂದ ಮೂಡಿದ ಬದುಕಿನ ಪಾಠ”.

ಕರ್ನಾಟಕ ರಾಜ್ಯೋತ್ಸವದ ಪೂರ್ವ ದಿನ ಶಾಪಿಂಗ್‌ನ ಸುದೀರ್ಘ ಸಾಹಸದ ನಂತರ, ನಾನು ಮತ್ತು ಅಮ್ಮ ಕೋಲಾರದ ವೇಮಗಲ್ ಮನೆಗೆ ಹೊರಟಿದ್ದೆವು. ಬೆಂಗಳೂರಿನಿಂದ ಬೇಗಮ್ ಮಹಲ್‌ವರೆಗೆ ಕ್ಯಾಬ್‌ನಲ್ಲಿ ಹೋಗಿ, ಅಲ್ಲಿಂದ ಕೋಲಾರ ಬಸ್ ಹತ್ತಿದೆವು. ಬಸ್‌ನಲ್ಲಿ ಜನಸಂದಣಿ ಅಷ್ಟು ಹೆಚ್ಚು ಇದ್ದಿತು, ನಿಲ್ಲುವುದಕ್ಕೂ ತೊಂದರೆ. ನಾನು ತುಂಬಾ ಶ್ರಮದಿಂದ ನಿಂತೇ ಪ್ರಯಾಣಿಸುತ್ತಿದ್ದೆ. ಕೊನೆಗೆ ಹೊಸಕೋಟೆ ತಲುಪಿದಾಗ ಕೆಲ ಸೀಟುಗಳು ಖಾಲಿ ಆಗಿದ್ದು, ನಾನು ಮತ್ತು ಅಮ್ಮ ಒಟ್ಟಿಗೆ ಮೂರು ಸೀಟುಗಳ ಸಾಲಿನಲ್ಲಿ ಕುಳಿತುಕೊಂಡೆವು.

ಅಷ್ಟರಲ್ಲಿ ಒಬ್ಬ ವೃದ್ಧರು ಬಂದು ಅಮ್ಮನ ಪಕ್ಕದಲ್ಲಿ ಕುಳಿತರು. ಅವರು ನೆತ್ತಿ ಹಿಡಿದುಕೊಂಡು ಬೇಸರದಿಂದ ಹೇಳಿದರು: ಅಮ್ಮ, ನನಗೆ ತುಂಬಾ ಕಿವಿನೋವು. ಏನು ಮಾಡಲಿ?”

ಆ ಕ್ಷಣದಲ್ಲಿ ನನ್ನ ಮನಸ್ಸು ಗೊಂದಲದಿಂದ ತುಂಬಿತು. ಇಡೀ ದಿನ ಸೀರೆ ಶಾಪಿಂಗ್‌ನಲ್ಲಿ ತಲೆ ಕೆಡಿಸಿಕೊಂಡು, ಜನಸಂದಣಿಯಲ್ಲಿ ಅಲೆಯುತ್ತಾ, ದೇಹ ಶ್ರಮಗೊಂಡು, ಮನಸ್ಸು ಬೇಸತ್ತು ಹೋಯಿತ್ತು. ನನಗೆ ಆ ಹೊತ್ತಿಗೆ ಬೇಕಾಗಿದ್ದದ್ದು ಸ್ವಲ್ಪ ಶಾಂತಿ, ಮೌನ, ಕವನ-ಕಥೆ ಬರೆಯಲು ಸಮಯ ಮತ್ತು ಧ್ಯಾನ ಮಾಡುವ ನೆಮ್ಮದಿ. ಆದರೆ ಈ ವೃದ್ಧರ ಮಾತು ನನಗೆ ಇನ್ನೂ ಎಷ್ಟು ತಲೆ ತಿನ್ನೋರು?” ಎಂಬ ಅಸಹನೆಯನ್ನೂ ತಂದಿತು.

ಆದರೆ ನನ್ನ ಅಮ್ಮ ಸುಮ್ಮನಿರಲಿಲ್ಲ. ಅವರ ಹೃದಯ ಬೇರೆಯವರ ನೋವಿಗೆ ಯಾವತ್ತೂ ಕಿವಿಗೊಡುವುದು. ಅವರು ತಕ್ಷಣ ತನ್ನ ಕೈಯಲ್ಲಿ ಪ್ರೆಶರ್ ಪಾಯಿಂಟ್‌ಗಳನ್ನು ತೋರಿಸುತ್ತಾವೃದ್ಧನ ಕೈನ ಕೆಲವು ಪ್ರೆಶರ್ ಪಾಯಿಂಟ್‌ಗಳನ್ನು ತೋರಿಸಿದರು.

ಇವುಗಳನ್ನು ಐವತ್ತು ಬಾರಿ ಒತ್ತಿ. ನಂತರ ಕಣ್ಣುಗಳನ್ನು ಮೃದುವಾಗಿ ಮುಚ್ಚಿ, ಕೈಗಳನ್ನು ಲಾಕ್ ಮಾಡಿ, ಕಾಲುಗಳನ್ನು ಕ್ರಾಸ್ ಮಾಡಿ. ಉಸಿರಿನ ಮೇಲೆ ಸಂಪೂರ್ಣ ಗಮನ ಕೊಡಿ. ಹದಿನೈದು ನಿಮಿಷ ಧ್ಯಾನ ಮಾಡಿ,” ಎಂದು ಶಾಂತವಾಗಿ ತಿಳಿಸಿದರು. 

ವೃದ್ಧರು ಅಮ್ಮನ ಮಾತು ಕೇಳಿ ಅದೇ ರೀತಿ ಕುಳಿತುಕೊಂಡರು. ನಾನು ಅವರಿಗೆ ನೋಡುವಷ್ಟರಲ್ಲಿ ಅವರು ಸಂಪೂರ್ಣ ತಲ್ಲೀನರಾಗಿದ್ದರು. ಸುಮಾರು ಹದಿನೈದುಇಪ್ಪತ್ತು ನಿಮಿಷಗಳ ಬಳಿಕ ಕಣ್ಣು ತೆರೆದ ಅವರು ಕೃತಜ್ಞತೆಯಿಂದ ಹೇಳಿದರು:

ಅಮ್ಮ, ಧನ್ಯವಾದಗಳು! ನನಗೆ ಈಗ ಕಿವಿ ನೋವೇ ಇಲ್ಲ. ಸಂಪೂರ್ಣ ಹಗುರವಾಗಿದೆ.
ಅಮ್ಮ ಅದನ್ನು ಸಹಜವಾಗಿ ಸ್ವೀಕರಿಸಿದರು. ಅವರಿಗೆ ಇದು ಒಂದು ದಿನನಿತ್ಯದ ಸಹಾಯ ಮಾತ್ರ. ಅವರು ಹೇಳಿದರು: ಇದೀಗ ನೋವು ಕಡಿಮೆಯಾಗಿದೆ, ಆದರೂ ಬೆಳಿಗ್ಗೆ ಒಮ್ಮೆ ಆಸ್ಪತ್ರೆಗೆ ಹೋಗಿ ವೈದ್ಯರ ಸಲಹೆ ತಗೊಳ್ಳಿ.ಅಮ್ಮನಿಗೆ ಇದು ಸಾಮಾನ್ಯ ಸಹಾಯದ ಕೆಲಸವಾಗಿದ್ದರೂ, ನನಗೆ ಅದು ಅಚ್ಚರಿ ಮೂಡಿಸಿದ ಪಾಠವಾಯಿತು.

ಸಾರಾಂಶ:
ಅಲ್ಲಿ ನನ್ನೊಳಗೆ ಒಂದು ಪ್ರಶ್ನೆ ಎದ್ದಿತು.
ನಾನು ಅಧ್ಯಾಪಕಿ, ಧ್ಯಾನ ತರಗತಿಗಳನ್ನು ನಡೆಸುವವಳಾದರೂ, ಯಾಕೆ ಆ ಕ್ಷಣದಲ್ಲಿ ಸಹಾಯ ಮಾಡಲು ಮುಂದೆ ಬರಲಿಲ್ಲ? ಯಾಕೆ ಔಷಧಿ ರಹಿತ ಚಿಕಿತ್ಸೆಯನ್ನು ನಾನು ಪ್ರಯೋಗಿಸಿಲ್ಲ? ಆ ಕ್ಷಣದಲ್ಲಿ ನನಗೆ ಮನದಾಳದಿಂದ ಅರಿವು ಬಂತು. ಇನ್ನು ಮುಂದೆ ಬೇರೆಯವರ ನೋವನ್ನು ನೋಡಿದಾಗ ಕೈಕಟ್ಟಿ ಕುಳಿತುಕೊಳ್ಳಬಾರದು. ಪ್ರಯತ್ನ ಮಾಡುವುದೇ ಪವಿತ್ರ ಕಾರ್ಯ.

ಅಮ್ಮನ ವ್ಯಕ್ತಿತ್ವ ನನಗೆ ಇನ್ನೊಮ್ಮೆ ಹೆಮ್ಮೆಯನ್ನು ತಂದಿತು. ಅವರು ಕೇವಲ ನನ್ನ ತಾಯಿ ಮಾತ್ರವಲ್ಲ, ಮಾನವೀಯ ಮೌಲ್ಯಗಳ ಜೀವಂತ ಪ್ರತಿರೂಪ. ಇನ್ನೊಬ್ಬರ ಸಂತೋಷದಲ್ಲಿ ತಮ್ಮ ಸಂತೋಷ ಕಂಡುಕೊಳ್ಳುವವರು, ಬೇರೆಯವರ ನೋವು-ಕಷ್ಟವನ್ನು ತಮ್ಮದೇ ನೋವಿನಂತೆ ಭಾವಿಸುವವರು. ಅವರಂತಹ ಮಹಾನ್ ತಾಯಿಯನ್ನು ಪಡೆದಿರುವುದು ನನ್ನ ಜೀವನದ ದೊಡ್ಡ ಭಾಗ್ಯ.

ಆ ದಿನದ ಅನುಭವಗಳು ನನಗೆ ಅನೇಕ ಪಾಠ ಕಲಿಸಿವೆ. ಅಪ್ರತೀಕ್ಷಿತ ಸಂದರ್ಭಗಳು ನಮಗೆ ಹೊಸ ಅವಕಾಶಗಳನ್ನು ಕೊಡುತ್ತವೆ.ಶಾಪಿಂಗ್‌ನ ಸಾಹಸವೂ ಸಹ ಜೀವನ ಪಾಠವಾಗಬಹುದು.ಸಣ್ಣ ಉಡುಗೊರೆಯೂ ಒಗ್ಗಟ್ಟು ಮತ್ತು ಸಂಸ್ಕೃತಿಯನ್ನು ಎತ್ತಿ ತೋರಿಸಬಹುದು ಮತ್ತು ಮುಖ್ಯವಾಗಿ ಮಾನವೀಯ ಕರುಣೆ, ಧ್ಯಾನ ಮತ್ತು ಔಷಧಿ ರಹಿತ ವಿಧಾನಗಳ ಶಕ್ತಿ ಅಪಾರ. 

ನನ್ನ ತಾಯಿ ಪ್ರತಿದಿನ ತೋರಿಸುವ ಸಹಾನುಭೂತಿ, ಇತರರ ನೋವನ್ನು ತಮ್ಮದೇ ನೋವಿನಂತೆ ಭಾವಿಸುವ ಗುಣ ಇವುಗಳನ್ನು ನಾನು ನನ್ನ ಜೀವನದ ಶ್ರೇಷ್ಠ ಪಾಠವೆಂದು ಭಾವಿಸುತ್ತೇನೆ. ಅಂತಹ ಮಹಾನ್ ತಾಯಿಯನ್ನು ಪಡೆದಿರುವುದು ನನ್ನ ಅದೃಷ್ಟ.
ಲೇಖನ-ಡಾ.ಮಮತ, ಕಾವ್ಯಬುದ್ಧ, ಅಧ್ಯಾಪಕಿ
, ಸಾಹಿತಿ, ಸಂಪನ್ಮೂಲ ವ್ಯಕ್ತಿ, ಬೆಂಗಳೂರು.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ