Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೊಸ ವರ್ಷದ ಸಂಭ್ರಮಾಚರಣೆ ಮಾರ್ಗಸೂಚಿ ಪ್ರಕಟ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಪ್ರಮುಖ ಮಾರ್ಗಸೂಚಿಗಳನ್ನು ನೀಡಿದ್ದಾರೆ.
ಸಂಭ್ರಮದ ನಡುವೆ ಜನಸಮೂಹದ ವರ್ತನೆ ಮತ್ತು ಅಪಾಯಗಳು ​ಹೊಸ ವರ್ಷಾಚರಣೆಯ ಮೇಲೆ ಪರಿಣಾಮ ಬೀರಬಹುದಾಗಿದ್ದು
, ಕೆಲವು ಅಂಶಗಳನ್ನು ಗುರುತಿಸಿ ಮಾರ್ಗಸೂಚಿಗಳನ್ನು ಅವರು ನೀಡಿದ್ದಾರೆ.


ಮಾರ್ಗಸೂಚಿಗಳು:
ಮದ್ಯಪಾನ ವಿವೇಚನಾ ಶಕ್ತಿ ಕುಗ್ಗಿಸಿ
, ಸಂಕೋಚ ದೂರ ಮಾಡುತ್ತದೆ. ಜನ ಸಮೂಹದ ನಡುವೆ ಇರುವುದರಿಂದ ನಮಗೆ ಏನೂ ಅಪಾಯವಿಲ್ಲ ಎಂಬ ತಪ್ಪು ಕಲ್ಪನೆ ಮೂಡಿಸುವುದರಿಂದ‌ಚುಡಾಯಿಸುವುದು, ಜಗಳಗಳಿಗೆ ಪ್ರಚೋದಿಸಬಹುದು.

​ಸಂಗೀತದ ಅತಿಯಾದ ಶಬ್ದ ಮತ್ತು ಪಟಾಕಿ ಸಿಡಿಸುವ ಪ್ರದರ್ಶನಗಳು ಅಪ್ರಜ್ಞಾತ್ಮಕ ವರ್ತನೆಗಳಿಗೆ ಪ್ರಚೋದನೆ ನೀಡಬಹುದು. ​ವದಂತಿಗಳು ಹರಡಿದರೆ ಜನರಲ್ಲಿ ತಕ್ಷಣವೇ ಕೋಪ ಮತ್ತು ಆತಂಕ ಉಂಟಾಗಬಹುದು. ​ಇಳಿಜಾರು ಪ್ರದೇಶಗಳು, ಮೆಟ್ಟಿಲುಗಳು ಮತ್ತು ಸರಿಯಾದ ಗಾಳಿ-ಬೆಳಕಿಲ್ಲದ ಮಾಲ್‌ಗಳಂತಹ ಸ್ಥಳಗಳಲ್ಲಿ ಅಪಾಯದ ಸಾಧ್ಯತೆಗಳು ಹೆಚ್ಚಿರುವುದರಿಂದ ಸಾರ್ವಜನಿಕರು ಪ್ರಜ್ಞಾಪೂರ್ವಕವಾಗಿ ವರ್ತಿಸಬೇಕು ಎಂದು ಡಿಐಜಿ ಸಲೀಂ ಅವರು ಸೂಚನೆ ನೀಡಿದ್ದಾರೆ.

​ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ:
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಹೋಗುವಂತಹ ಬೀಚ್‌ಗಳು
, ಮಾಲ್‌ಗಳು, ಬಾರ್‌ಗಳು ಮತ್ತು ಹೆದ್ದಾರಿಗಳಂತಹ ಹಾಟ್ ಸ್ಪಾಟ್‌ಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸುವುದು ಕಡ್ಡಾಯ.

​ವಾಹನ, ಕಾಲ್ನಡಿಗೆ, ಬೈಕ್ ಮತ್ತು ಅಶ್ವಾರೋಹಿ ಗಸ್ತುಗಳನ್ನು ಹೆಚ್ಚಿಸುವುದು. ಎಲ್ಲ ಚೆಕ್ ಪೋಸ್ಟ್‌ಗಳಲ್ಲಿ ವಿಡಿಯೋಗ್ರಾಫಿ ಮಾಡಿಸುವುದು. ಡ್ರಿಂಕ್ ಆ್ಯಂಡ್ ಡ್ರೈವ್ ವಿರುದ್ಧ ಶೂನ್ಯ ಸಹಿಷ್ಣುತೆ ಪಾಲಿಸುವುದು. ತಕ್ಷಣವೇ ಎಫ್‌ಐಆರ್ ದಾಖಲಿಸಿ ವಾಹನ ಜಪ್ತಿ ಮಾಡುವುದು.

ಚುಡಾಯಿಸುವಿಕೆ ತಡೆಯಲು ಮಹಿಳಾ ಪೊಲೀಸ್ ತಂಡ ನಿಯೋಜಿಸುವುದು ಮತ್ತು 'ಮಹಿಳಾ ಸುರಕ್ಷತಾ ದ್ವೀಪ'ಗಳನ್ನು ಸ್ಥಾಪಿಸುವುದು.

ಡ್ರೋನ್, ಸಿಸಿಟಿವಿ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ಜನಸಂದಣಿಯ ಮೇಲೆ ನಿಗಾ ಇಡುವುದು. ಧ್ವನಿವರ್ಧಕಗಳ ಮೂಲಕ ಜನರನ್ನು ಶಾಂತಗೊಳಿಸಲು ಅಥವಾ ಮಾರ್ಗ ಬದಲಿಸಲು ಸೂಚನೆ ನೀಡುವುದು.

ಆಂಬ್ಯುಲೆನ್ಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ತಂಡಗಳನ್ನು ಸಿದ್ಧ ಸ್ಥಿತಿಯಲ್ಲಿಡುವುದು. ​ಕರ್ತವ್ಯದಲ್ಲಿರುವ ಎಲ್ಲಾ ಸಿಬ್ಬಂದಿ ಸೂರ್ಯಾಸ್ತದ ನಂತರ ಕಡ್ಡಾಯವಾಗಿ ಪ್ರತಿಫಲಕ ಜಾಕೆಟ್‌ಗಳನ್ನು ಧರಿಸುವುದು.

​ಜನಸಮೂಹದ ಮೇಲೆ ನಿಗಾ ಇಡಲು ಎತ್ತರದ ವಾಚ್ ಟವರ್‌ಗಳನ್ನು ನಿರ್ಮಿಸಬೇಕು.​ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಅಂಥಹ ಅಧಿಕಾರಿ‌ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಜಿ ಮತ್ತು ಐಜಿಪಿ ಡಾ.ಸಲೀಂ ಅವರು ಎಚ್ಚರಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ