ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಾಜಿ ನಗರಸಭೆ ಸದಸ್ಯ ಅಜ್ಜಪ್ಪ ಅವರನ್ನು ತಕ್ಷಣವೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಹಿರಿಯೂರು ಟೌನ್ ಮಾಜಿ ನಗರಸಭಾ ಸದಸ್ಯ ವಿ. ಶಿವಣ್ಣ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಜ್ಜಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷದ ಶಿಸ್ತು ಉಲ್ಲಂಘಿಸಿರುವ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ನಾಯಕರಿಗೆ ವಿನಂತಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಯ ಆರೋಪಗಳು:
ಅಭ್ಯರ್ಥಿ ತಂದು ಪ್ರಚಾರ: ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಬೇರೊಬ್ಬ ಪಕ್ಷೇತರ ಅಭ್ಯರ್ಥಿಯನ್ನು ಕರೆತಂದು, ಅವರ ಪರವಾಗಿ ಬಹಿರಂಗ ಪ್ರಚಾರ ನಡೆಸಿದ್ದಾರೆ.
ದಿಗಂತ ನಾಯಕರಿಗೆ ನಿಂದನೆ: ಹಾಲಿ ಶಾಸಕರೂ ಹಾಗೂ ಸಚಿವರೂ ಆಗಿದ್ದ ದಿವಂಗತ ಡಿ. ಸುಧಾಕರ್ ಅವರ ವಿರುದ್ಧ ಗಲ್ಲಿ ಗಲ್ಲಿಗಳಲ್ಲಿ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಕೃತಿ ಮೆರೆದಿದ್ದಾರೆ.
ನಾಯಕರ ಅವಹೇಳನ: ತಾಲೂಕಿನ ಹಿರಿಯ ನಾಯಕರು, ಮುಖಂಡರು ಹಾಗೂ ಪಕ್ಷದ ಅಧ್ಯಕ್ಷರುಗಳ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
ಶಿಸ್ತು ಕ್ರಮಕ್ಕೆ ಹಿರಿಯ ನಾಯಕರಿಗೆ ವಿನಂತಿ:
ಪಕ್ಷದ ಸೌಹಾರ್ದತೆ ಮತ್ತು ಶಿಸ್ತನ್ನು ಹಾಳು ಮಾಡುತ್ತಿರುವ ಮಾಜಿ ನಗರಸಭೆ ಸದಸ್ಯ ಅಜ್ಜಪ್ಪ ಅವರನ್ನು ಈ ಕೂಡಲೇ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಹಿರಿಯೂರು ಟೌನ್ ಮಾಜಿ ನಗರಸಭಾ ಸದಸ್ಯ ವಿ. ಶಿವಣ್ಣ ಅವರು ಈ ಕೆಳಕಂಡ ನಾಯಕರಲ್ಲಿ ಮನವಿ ಮಾಡಿದ್ದಾರೆ.
ನೂತನ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ಪೀರ್, ಜಿಲ್ಲಾ ಕಾರ್ಯಾಧ್ಯಕ್ಷ ಹಾಲೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಖಾದಿ ರಮೇಶ್ ಹಾಗೂ ಈರಲಿಂಗೇಗೌಡ ಇವರುಗಳು ಪಕ್ಷದ ಹಿತದೃಷ್ಟಿಯಿಂದ ಇಂತಹ ವಿಚ್ಛಿತ್ರಕಾರಕ ಶಕ್ತಿಗಳನ್ನು ಪಕ್ಷದಿಂದ ದೂರ ಇಡಬೇಕೆಂದು ಈ ಮೂಲಕ ಶಿವಣ್ಣ ಅವರು ಆಗ್ರಹಿಸಿದ್ದಾರೆ.



