ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ನಗರಸಭೆಯ ಅಧ್ಯಕ್ಷರಾದ ಪ್ರಭಾ ನಾಗರಾಜ್ ರವರನ್ನು ಕರ್ನಾಟಕ ರಾಜ್ಯ ತಿಗಳರ (ವನ್ನಿಕುಲ ಕ್ಷತ್ರಿಯ)ಸಂಘದ ರಾಜ್ಯಾಧ್ಯಕ್ಷ ಮು ಕೃಷ್ಣಮೂರ್ತಿ ಅಭಿನಂದಿಸಿ ಮಾತನಾಡಿ ದೊಡ್ಡಬಳ್ಳಾಪುರ ನಗರಸಭೆಗೆ ನಮ್ಮ ಜನಾಂಗದ ಸದಸ್ಯರಾದ ಪ್ರಭಾ ನಾಗರಾಜ್ ರವರು ಅಧ್ಯಕ್ಷರಾಗಿ ಆಯ್ಕೆ ಯಾಗಿರುವುದು ನಮ್ಮ ಜನಾಂಗಕ್ಕೆ ಹೆಮ್ಮೆಯ ವಿಚಾರವಾಗಿದೆ.
ನೂತನ ಅಧ್ಯಕ್ಷರಾಗಿರುವ ಈ ಸಮಯದಲ್ಲಿ ಎಲ್ಲಾ ಸದಸ್ಯರ, ಶಾಸಕರ, ಲೋಕಸಭಾ ಸದಸ್ಯರ ಹಾಗೂ ಅಧಿಕಾರಿಗಳ ಸಹಕಾರದಿಂದ ಉತ್ತಮ ಆಡಳಿತ ನೀಡಿ ಮಾಧರಿ ಅಧ್ಯಕ್ಷರಾಗಲೆಂದು ರಾಜ್ಯ ಸಂಘದ ಪರವಾಗಿ ಅಭಿನಂದಿಸಿ ಶುಭ ಕೋರಿದರು.
ಈ ಸಂಧರ್ಭದಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ವರ್ತೂರು ಬಿ ಎಸ್ ಶ್ರೀಧರ್, ಉಪಾಧ್ಯಕ್ಷ ದೇವನಹಳ್ಳಯ ವೈ ಎನ್ ಶಾಮಣ್ಣ, ಸಂಘಟನಾ ಕಾರ್ಯದರ್ಶಿ ವಿಜಯಪುರದ ಜೆ ಆರ್ ಮುನಿವೀರಣ್ಣ, ನಿರ್ದೇಶಕರುಗಳಾದ ಕೋನಘಟ್ಟದ ಕೆ ಎಂ ಮಂಜುನಾಥ್ ಹಾಗೂ ವಿಜಯಪುರದ ಎನ್ ಕನಕರಾಜ್, ಯಲಹಂಕದ ನಾಗಾರ್ಜುನರವರು, ಸ್ಥಳೀಯ ಮುಖಂಡರುಗಳಾದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಅಧ್ಯಕ್ಷ ಮಂಜಣ್ಣ, ಮುಖಂಡರಾದ ರಾಮಣ್ಣ, ಪತ್ರಕರ್ತ ಮುನಿಸ್ವಾಮಿ, ಕೋನಘಟ್ಟ ಪೂಜಾರಿ ನಾಗರಾಜ್ ರವರು ಉಪಸ್ಥಿತರಿದ್ದು ಶುಭ ಕೋರಿದರು.



