Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಕ್ರಮದ ಹೆಸರಿನಲ್ಲಿ ರೈತನಿಂದ ಲಕ್ಷಗಳ ಲೂಟಿ?

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತನ ಕಣ್ಣೀರಿನ ಮೇಲೆ 3 ತಿಂಗಳ ಗಡುವು ಸರ್ಕಾರದ ಕ್ರೂರ ನಿರ್ಧಾರ!. ಹೊಲದಲ್ಲಿ ಬೆವರು ಸುರಿಸಿದ ರೈತನಿಗೆ ಸರ್ಕಾರದ ಹೊಸ ಹೊರೆ!. ಸಕ್ರಮದ ಹೆಸರಿನಲ್ಲಿ ರೈತನ ಮೇಲೆ ಲಕ್ಷಗಳ ಲೂಟಿ?”. ರೈತನ ಬದುಕು ಸಂಕಷ್ಟದಲ್ಲಿ ಸರ್ಕಾರದ ಆದೇಶ ಬೆಂಕಿಗೆ ಎಣ್ಣೆ!.

ಅನ್ನದಾತನಿಗೆ ಗಡುವು, ಅಧಿಕಾರಿಗಳಿಗೆ ಸಡಿಲಿಕೆ ಇದು ಯಾವ ನ್ಯಾಯ?”. ರೈತನ ಬೆವರಿನ ಮಣ್ಣಿಗೆ ಸರ್ಕಾರದ ಬೆಲೆಪಟ್ಟಿ?”.

ರೈತನು ಈ ದೇಶದ ಅನ್ನದಾತ. ಅವನ ಕೈಯಲ್ಲಿ ಬೆಳೆದ ಧಾನ್ಯದಿಂದಲೇ ದೇಶದ ಕೋಟ್ಯಾಂತರ ಜನರ ಹೊಟ್ಟೆ ತುಂಬುತ್ತದೆ. ಆದರೆ ಇಂದಿನ ಸ್ಥಿತಿ ನೋಡಿದರೆ, ಅನ್ನದಾತನಿಗೆ ಗೌರವ ಕೊಡುವ ಬದಲು ಅವನ ಮೇಲೇ ಮತ್ತೊಂದು ಹೊರೆ ಹಾಕುವ ಕ್ರಮಗಳು ನಡೆಯುತ್ತಿರುವುದು ನೋವು ತಂದಿದೆ.

ಈಗಾಗಲೇ ಸಾಲದ ಬಾಧೆ, ಬೆಳೆ ನಷ್ಟ, ಮಾರುಕಟ್ಟೆ ಬೆಲೆ ಕುಸಿತ, ಹವಾಮಾನ ವೈಪರಿತ್ಯ ಇಂತಹ ಅನೇಕ ಸಂಕಷ್ಟಗಳ ನಡುವೆ ರೈತನು ಬದುಕಿಗಾಗಿ ಹೋರಾಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಸಕ್ರಮಕ್ಕೆ 3 ತಿಂಗಳ ಗಡುವುಎಂದು ಹೇಳುವುದು ರೈತನ ಗಾಯದ ಮೇಲೆ ಉಪ್ಪು ಎರಚಿದಂತಾಗಿದೆ.

ಒಂದು ಕಡೆ ಹೊಲದಲ್ಲಿ ಬೆವರು ಸುರಿಸಿ ಬೆಳೆ ಬೆಳೆಸಿದ ರೈತನಿಗೆ ಬೆಲೆ ಸಿಗುವುದಿಲ್ಲ. ಇನ್ನೊಂದು ಕಡೆ ಸರ್ಕಾರದ ಆದೇಶದ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ಕಟ್ಟಬೇಕು ಎಂದು ಒತ್ತಡ ಹಾಕಿದರೆ, ಆ ಹಣವನ್ನು ರೈತನು ಎಲ್ಲಿಂದ ತರಬೇಕು? ಬ್ಯಾಂಕ್‌ಗಳ ಬಾಗಿಲು ತಟ್ಟಬೇಕಾ? ಅಥವಾ ಸಾಲದ ಬಲೆಗೆ ಮತ್ತಷ್ಟು ಸಿಲುಕಬೇಕಾ?.

ಸರ್ಕಾರಕ್ಕೆ ನಿಜವಾಗಿಯೂ ರೈತರ ನೋವು ಗೊತ್ತಿದೆಯೇ? ಹೊಲದಲ್ಲಿ ಒಂದು ಬೆಳೆ ಬೆಳೆಸಲು ರೈತನು ಎಷ್ಟು ಕಷ್ಟಪಡುತ್ತಾನೆ ಎಂಬುದು ಅರಿವಿದೆಯೇ? ಮಳೆ ಬರದಿದ್ದರೂ ಸಂಕಷ್ಟ, ಮಳೆ ಹೆಚ್ಚು ಬಂದರೂ ಸಂಕಷ್ಟ. ಬೆಳೆ ಬೆಳೆದರೂ ಬೆಲೆ ಇಲ್ಲದ ಸಂಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಆಡಳಿತಾತ್ಮಕ ನಿಯಮವನ್ನು ಹೊರೆ ಹಾಕುವುದು ನ್ಯಾಯವೇ?.

ಸರ್ಕಾರ ನೆನಪಿಡಬೇಕು ರೈತನು ದುರ್ಬಲನಲ್ಲ. ಅವನ ಬೆವರಿನ ಶಕ್ತಿಯೇ ಈ ದೇಶವನ್ನು ನಿಲ್ಲಿಸಿದೆ. ಅನ್ನದಾತನ ಧ್ವನಿಯನ್ನು ನಿರ್ಲಕ್ಷಿಸಿದರೆ ಅದು ಒಂದು ದಿನ ಆಕ್ರೋಶದ ಅಲೆ ಆಗಿ ಎದ್ದು ಬರುತ್ತದೆ.



ರೈತನು ಬೇಡಿಕೊಳ್ಳುವುದೇ ಒಂದು ನ್ಯಾಯ. ಗಡುವಿನ ಒತ್ತಡವಲ್ಲ, ಸಹಾನುಭೂತಿ ಬೇಕು. ಲಕ್ಷಗಟ್ಟಲೆ ಹಣದ ಬೇಡಿಕೆ ಅಲ್ಲ, ಬದುಕಲು ಅವಕಾಶ ಬೇಕು. ಅನ್ನದಾತನ ಮೇಲೆ ಇಂತಹ ನಿರ್ಧಾರಗಳನ್ನು ಹೇರುವುದನ್ನು ಸರ್ಕಾರ ತಕ್ಷಣ ಮರುಪರಿಶೀಲಿಸಬೇಕು. ಇಲ್ಲದಿದ್ದರೆ ರೈತನ ಆಕ್ರೋಶವೇ ನಾಳೆಯ ದೊಡ್ಡ ಹೋರಾಟದ ಕಿಡಿಯಾಗುತ್ತದೆ. ರೈತನನ್ನು ಉಳಿಸಿ ದೇಶವನ್ನು ಉಳಿಸಿ.
ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.


 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ