Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅವತಾರ ವರಿಷ್ಠ ಶ್ರೀರಾಮಕೃಷ್ಣರು: ಮಾತಾಜೀ ಚೈತನ್ಯಮಯೀ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಅವತಾರಗಳಲ್ಲಿ ಅತ್ಯಂತ ಶ್ರೇಷ್ಠವಾದ ಅವತಾರವಾದ  ಶ್ರೀರಾಮಕೃಷ್ಣರು ಜಗತ್ತಿನ ಜನರ ಮೇಲಿನ ಕರುಣೆಯಿಂದ ಭೂಮಿಗೆ ಅವತಾರಿಸಿ ಬಂದು ಭವದ ದುಃಖವನ್ನು ಪರಿಹರಿಸಿದವರು ಎಂದು ಹಿರಿಯೂರಿನ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಚೈತನ್ಯಮಯೀ ತಿಳಿಸಿದರು.


ನಗರದ ವಾಲ್ಮೀಕಿ ನಗರದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಆವರಣದಲ್ಲಿ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ "ಶ್ರೀರಾಮಕೃಷ್ಣ ಪರಮಹಂಸರ 191ನೇ ಜಯಂತ್ಯುತ್ಸವ"ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಭಜನೆ ಮತ್ತು ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು "ಅವತಾರ ವರಿಷ್ಠ ಶ್ರೀರಾಮಕೃಷ್ಣ" ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡಿದರು.


ಜಗತ್ತಿನ ಜನರ ಉದ್ಧಾರಕ್ಕಾಗಿ ಲೋಕಕಲ್ಯಾಣದ ಉದ್ದೇಶದಿಂದ ಪೂರ್ಣಾವತಾರರಾಗಿ ಹುಟ್ಟಿ ಬಂದ ಶ್ರೀರಾಮಕೃಷ್ಣರು ಅಂದಿನ ಬಂಗಾಳದ ಪ್ರಸಿದ್ಧ ಪಂಡಿತರಿಂದ ಅವತಾರ ಪುರುಷರೆಂದು ಕರೆಯಲ್ಪಟ್ಟವರು.ಅಲ್ಲದೆ ಪ್ರಿಯಶಿಷ್ಯ ಸ್ವಾಮಿ ವಿವೇಕಾನಂದರಿಂದ "ಅವತಾರ ವರಿಷ್ಠ" ಎಂದು ಸ್ತುತಿ ಮಾಡಲ್ಪಟ್ಟವರು ಶ್ರೀರಾಮಕೃಷ್ಣರು ಎಂದು ಅವತಾರ ವರಿಷ್ಠ ಎಂಬುದಕ್ಕೆ  ಅನೇಕ ಘಟನೆಗಳನ್ನು ಹೇಳಿದರು.

"ಸ್ವಾಮಿ ವಿವೇಕಾನಂದರ ಗುರು" ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದ ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು  ಶ್ರೀರಾಮಕೃಷ್ಣರು ಸ್ವಾಮಿ ವಿವೇಕಾನಂದರ ಕುರಿತು ಹೇಳುತ್ತಾರೆ, ಅವನಲ್ಲಿ ಶಕ್ತಿಯ ಹದಿನೆಂಟು ಗುಣಗಳು ಪೂರ್ಣ ರೂಪದಲ್ಲಿ ಪ್ರಕಟಗೊಂಡಿವೆ.ಅವನು ಸಾಕ್ಷಾತ್ ನರ ನಾರಾಯಣ,ಶಿವ ಸ್ವರೂಪ, ಜ್ಞಾನಸೂರ್ಯ, ಧ್ಯಾನಸಿದ್ಧ   ಎಂದು  ಹೊಗಳಿಸಲ್ಟಟವರು, ಸ್ವಾಮಿ ವಿವೇಕಾನಂದರು ಅಧಿಕೃತವಾಗಿ ಶ್ರೀರಾಮಕೃಷ್ಣ ಪರಮಹಂಸರ ಕುರಿತಾಗಿ ಯಾವುದೇ ಜೀವನ  ಚರಿತ್ರೆ ಬರೆಯದಿದ್ದರೂ ಅವರೇ ಬರೆದ "ಖಂಡನ ಭವ ಬಂಧನ" ಆರತಿ ಸ್ತೋತ್ರ ಶ್ರೀರಾಮಕೃಷ್ಣರ ಜೀವನಕ್ಕೆ ಬರೆದ ಭಾಷ್ಯದಂತಿದೆ.ಈ ಸ್ತೋತ್ರ ಶ್ರೀರಾಮಕೃಷ್ಣರ ಸಮಗ್ರ ಜೀವನವನ್ನು ಹಾಡಿನ ರೂಪದಲ್ಲಿ ವರ್ಣನೆ ಮಾಡುತ್ತದೆ‌ ಎಂದರು.


ಕಾರ್ಯಕ್ರಮದ ಆರಂಭದಲ್ಲಿ ಬೆಂಗಳೂರಿನ ಶ್ರೀಶಾರದಾದೇವಿ ಪ್ರಗತಿ ಮಂದಿರದ ಕುಮಾರಿ ಚಿನ್ಮಯಿ ರಾವ್, ರಾಘವೇಂದ್ರ ರಾವ್, ಅನ್ನಪೂರ್ಣ, ಅನಘಾ, ಸೌಮ್ಯಶ್ರೀ, ಭಾರ್ಗವ ಕೃಷ್ಣ ಅವರಿಂದ ವಿಶೇಷ "ಶ್ರೀರಾಮಕೃಷ್ಣ ಗಾನಸುಧೆ" ಅದ್ಭುತ ಭಜನಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಕೊನೆಯಲ್ಲಿ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ, ಶ್ರೀಶಾರದಾಶ್ರಮದಿಂದ ಪುಸ್ತಕ ಮಾರಾಟ ವ್ಯವಸ್ಥೆ ಮಾಡಲಾಗಿತ್ತು.
ಎಂ.ಗೀತಾ ನಾಗರಾಜ್ ಸ್ವಾಗತಿಸಿದರು. ಟಿ.ಎಂ.ವಿಜಯಕಲಾ ಗುರು ನಿರೂಪಸಿದರು. ಯತೀಶ್ ಎಂ ಸಿದ್ದಾಪುರ ವಂದಿಸಿದರು.


ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಎಚ್.ಸೈಯದ್, ಮುಕುಂದ, ವಿಶ್ವಾರಾಧ್ಯ, ವೆಂಕಟಸುಬ್ಬಣ್ಣ, ನಾಗಶಯನಾ ಗೌತಮ್, ರಾಧಮ್ಮ , ರವೀಂದ್ರನಾಥ್, ರಾಮಚಂದ್ರಪ್ಪ, ಎಚ್ ಲಕ್ಷ್ಮೀದೇವಮ್ಮ , ಎಂ ಗೀತಾ ನಾಗರಾಜ್, ಅನುಸೂಯ ರಾಘವೇಂದ್ರ,ಟಿ.ಎಂ.ವಿಜಯಕಲಾ, ಯತೀಶ್ ಎಂ ಸಿದ್ದಾಪುರ,ಸುನೀತಾ, ಪಂಕಜಾ, ಸರಸ್ವತಿ, ಗೀತಾ ಪ್ರಕಾಶ್,ಜಿ ಯಶೋಧಾ ಪ್ರಕಾಶ್, ಜಗದಂಬಾ,

ಸಂತೋಷ್, ಹೃತಿಕ್, ಮಾನ್ಯ, ಚೇತನ್, ಭಾಗ್ಯಲಕ್ಷ್ಮೀ,ವಾಣಿ, ಬಳ್ಳಾರಿ ರಶ್ಮಿ,ಶಾರದಾ, ಗೀತಾ ವೆಂಕಟೇಶರೆಡ್ಡಿ, ಬಿ.ಸಿ.ವೀಣಾ, ಸೌಮ್ಯ ಪ್ರಸಾದ್,ಪಿ.ಎಸ್.ಮಾಣಿಕ್ಯ, ಹೂವಿನ ಲಕ್ಷ್ಮೀದೇವಿ, ಮಹಾದೇವಿ, ಗೀತಾ ಸುಂದರೇಶ್ ದೀಕ್ಷಿತ್, ವಿಶಾಲಾಕ್ಷಿ,ಗಿರಿಜಾ, ಗಂಗಾಂಬಿಕೆ, ತಿಪ್ಪಮ್ಮ,ಸಿ.ಎಸ್.ಭಾರತಮ್ಮ, ಪ್ರಮೀಳಾ, ನಾಗರತ್ನಮ್ಮ, ಲೋಕಮಾನ್ಯ, ಸರ್ವಮಂಗಳಾ ಶಿವಣ್ಣ,ಮೋಹಿನಿ, ಶುಭ,ಚೆನ್ನಕೇಶವ,ಸುಮನಾ, ನಾಗೇಶ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ