Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇಶದ ಪ್ರಥಮ ಗೂಢಾಚಾರಿಣಿ, ಅಪ್ರತಿಮ ದೇಶಭಕ್ತೆಯಾಗಿ ಸೇವೆ ಸಲ್ಲಿಸಿದ ನೀರಾಆರ್ಯ

Advertisement
ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರೆಜಿಮೆಂಟ್ ನಲ್ಲಿ ದೇಶದ ಪ್ರಥಮ ಗೂಢಾಚಾರಿಣಿಯಾಗಿ ಸೇವೆ ಸಲ್ಲಿಸಿ ಅಪ್ರತಿಮ ದೇಶಭಕ್ತರಾದ ನೀರಾಆರ್ಯರವರ ದೇಶ ಸೇವೆ ಮರೆಯಲಾಗದು ಎಂದು ನಿವೃತ್ತ ಮುಖ್ಯ ಶಿಕ್ಷಕರು
, ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕಿ ವಿಜಯಲಕ್ಷ್ಮಿ ತಿಳಿಸಿದರು.


ಇಲ್ಲಿನ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಐಎನ್ಎ ವೀರ ಸೈನಿಕೆ ನೀರಾ ಆರ್ಯ ಜನ್ಮದಿನ ಆಚರಣೆಯ ಅಂಗವಾಗಿ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಅಪ್ರತಿಮ ವೀರ ಸೈನಿಕರಾದ ನೀರಾ ಆರ್ಯ ರವರ ಜನ್ಮದಿನದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.


 ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಅತ್ಯಂತ ಕಷ್ಟಕರವಾದ ಹಿಂಸೆಗೆ ಒಳಗಾದ ನೀರಾ ಆರ್ಯರವರನ್ನು ಬ್ರಿಟಿಷರು ಅತ್ಯಂತ ಹೀನಾಯವಾಗಿ ನಡೆಸಿಕೊಂಡರು. ದೇಶಪ್ರೇಮದ ನೀರಾ ಆರ್ಯ ನೇತಾಜಿಯವರ ಬಗ್ಗೆ ಯಾವುದೇ  ರಹಸ್ಯವನ್ನು ಬಿಟ್ಟು ಕೊಡದೆ ಇಂಡಿಯನ್ ನ್ಯಾಷನಲ್ ಆರ್ಮಿಯ ಶ್ರೇಷ್ಠ ಸೈನಿಕರಾಗಿ ಸೇವೆ ಸಲ್ಲಿಸಿದ ಮಹಾನ್ ವೀರ ಗೂಡಾಚಾರಿಣಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಮಾತನಾಡುತ್ತ ನೀರ ಆರ್ಯ ಭಾರತದ ಹೆಮ್ಮೆಯ ವೀರ ವನಿತೆ. ಸುಭಾಷ್ ಚಂದ್ರ ಬೋಸ್ ರವರ ರಹಸ್ಯವಿಷಯಗಳನ್ನು ತಿಳಿಸಲು ನಿರಾಕರಿಸಿದ ನೀರಾ ರವರನ್ನು ಅಂಡಮಾನ್ ಜೈಲಿಗೆ ಕಳುಹಿಸಲಾಯಿತು. ನೀರಾ ಆರ್ಯ ರವರ ಸ್ತನಗಳನ್ನು ಕತ್ತರಿಸುವ ಮೂಲಕ ಅಟ್ಟಹಾಸ ಮೆರೆದ ಬ್ರಿಟಿಷರ ಕ್ರೂರ ಹಿಂಸೆಗೆ ಒಳಗಾದವರು ನೀರ ಆರ್ಯ.

ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಪ್ರಾಣತೆಗೆಯಲು ಹಾರಿಸಿದ ಗುಂಡು ಸುಭಾಷ್ ಅವರ ಚಾಲಕನಿಗೆ ತಗುಲಿ ಪ್ರಾಣ ಅರ್ಪಣೆಯಾಯಿತು. ಸುಭಾಷ್ ರವರನ್ನು ರಕ್ಷಿಸಲು ನೀರಾ ರವರು ಬ್ರಿಟಿಷ್ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತನ್ನ ಪತಿಯನ್ನೇ ಕೊಂದು ಹಾಕಿದ ಧೀರ ಮಹಿಳೆ. ಭಾರತದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಹಿಳೆಯರ ತ್ಯಾಗ ಬಲಿದಾನವನ್ನು ನಾವೆಲ್ಲರೂ ಮರೆಯಬಾರದು. ಪ್ರತಿ ಮನೆಮನೆಗಳಲ್ಲೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾನ್ ವೀರರನ್ನು ಸ್ಮರಿಸಿಕೊಳ್ಳುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕು .

ಇತ್ತೀಚೆಗೆ ನಟಿ ರೂಪ ಅಯ್ಯರ್ ರವರು ನೀರ ಆರ್ಯ ರವರ ಹೋರಾಟದ ಕುರಿತು ಆಜಾದ್ ಭಾರತ್ ಎಂಬ ಜೀವನ ಚರಿತ್ರೆಯ ಚಲನಚಿತ್ರವನ್ನು ತೆಗೆದಿರುವುದು ಸಂತೋಷವಾಗಿದೆ . ಪ್ರತಿಯೊಬ್ಬ ಭಾರತೀಯರು ಆಜಾದ್ ಭಾರತ್ ಚಲನಚಿತ್ರವನ್ನು ವೀಕ್ಷಿಸಬೇಕಾಗಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಸರಸ್ವತಿ, ಕುಸುಮ,ಶಿಕ್ಷಕರಾದ ಮಂಜುಳ, ಬೋಜರಾಜ್, ಬಿಕೆ ಆರಾಧ್ಯ , ಭರತ್ ಜೈನ್ ಹಾಗೂ ಶ್ರಾವ್ಯ ಋಗ್ವೇದಿ ಇದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ