Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಲ್ಲಾ ಜಾತಿಯವರಿಗೂ ಸೊಸೈಟಿಯಲ್ಲಿ ಅವಕಾಶ- ನಿಶಾನಿ ಜಯಣ್ಣ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಜಾತಿಯವರಿಗೂ ಸೊಸೈಟಿಯಲ್ಲಿ ಅವಕಾಶ ನೀಡಲಾಗಿದೆ ಎಂದು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ತಿಳಿಸಿದರು.


ಐದನೆ ಬಾರಿಗೆ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಎಂ.ನಿಶಾನಿ ಜಯಣ್ಣ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ೧೯೧೨ ರಲ್ಲಿ ತಿರುಮಲಾಚಾರ್ಯರು ಸ್ಥಾಪಿಸಿದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಿಟ್ಟೂರು ಶ್ರೀನಿವಾಸ್ ಅಯ್ಯಂಗಾರ್, ಎಸ್.ನಿಜಲಿಂಗಪ್ಪ, ಭೀಮಪ್ಪನಾಯಕ, ಜಾಫರ್‌ಷರೀಫ್, ಪೀರ್‌ಸಾಬ್, ಬೋಜರಾಜು, ಪಟೇಲ್ ಚಂದ್ರಶೇಖರಪ್ಪ, ಪಿ.ಸಿ.ಜಯಣ್ಣ ಇವರುಗಳು ಆಳಿದ್ದಾರೆ. ಕೆಲವರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಸೊಸೈಟಿಯನ್ನು ಬಿಡಿಸಿಕೊಳ್ಳಲು ೨೦೦೫ ರಲ್ಲಿ ಹೋರಾಟ ಮಾಡಿ ಚುನಾವಣೆ ಮೂಲಕ ವಶಕ್ಕೆ ಪಡೆದುಕೊಂಡಾಗ ಒಂದುವರೆ ಕೋಟಿ ರೂ.ನಷ್ಟದಲ್ಲಿತ್ತು. ಎಲ್ಲವನ್ನು ಬಗೆಹರಿಸಿಕೊಂಡು ಈಗ ಸುಸ್ಥಿತಿಯಲ್ಲಿಟ್ಟಿದ್ದೇನೆಂದು ಹೇಳಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಸುತ್ತ ಎರಡುವರೆ ಕೋಟಿ ರೂ. ಬೆಲೆಬಾಳುವ ಕಟ್ಟಡಗಳನ್ನು ಕಟ್ಟಿಸಿದ್ದೇನೆ. ಪ್ರತಿ ತಿಂಗಳು ನಾಲ್ಕುವರೆ ಲಕ್ಷ ರೂ. ಬಾಡಿಗೆ ಬರುತ್ತದೆ. ಇತರೆ ಮೂಲಗಳಿಂದ ಒಂದುವರೆ ಲಕ್ಷ ರೂ.ಆದಾಯ ಬರುವಂತೆ ಮಾಡಿದ್ದೇನೆ. ಡಿ.ಸಿ.ಸಿ. ಬ್ಯಾಂಕ್‌ನಿಂದ ಐವತ್ತು ಲಕ್ಷ ರೂ.ಗಳನ್ನು ಸಾಲ ಪಡೆದಿದ್ದನ್ನು ತೀರಿಸಲಾಗಿದೆ. ಷೇರುದಾರರಿಗೆ ಐವತ್ತು ಸಾವಿರದಿಂದ ಒಂದು ಲಕ್ಷ ರೂ.ಗಳವರೆಗೆ ಸಾಲ ಕೊಡುವ ವ್ಯವಸ್ಥೆಯಿದೆ. ಕಳೆದ ವರ್ಷ ಹದಿನಾರು ಪರ್ಸೆಂಟ್ ಡೆವಿಡೆಂಟ್ ಕೊಟ್ಟಿದ್ದೇವೆ. ಮುಂದೆ ಶೇ.೨೫ ಪರ್ಸೆಂಟ್ ಡೆವಿಡೆಂಟ್ ನೀಡಲಾಗುವುದು.

ಎರಡು ಕೋಟಿ ರೂ.ವೆಚ್ಚದಲ್ಲಿ ಸಹಕಾರಿ ಸಮುದಾಯ ಭವನ ನಿರ್ಮಿಸುವ ಗುರಿಯಿದೆ. ಇದರಿಂದ ಪ್ರತಿ ತಿಂಗಳು ಸೊಸೈಟಿಗೆ ಮೂವತ್ತರಿಂದ ಮೂವತ್ತೈದು ಲಕ್ಷ ರೂ. ಬಾಡಿಗೆ ಬರುವಂತಾಗುತ್ತದೆ. ಒಟ್ಟಾರೆ ಮಾಸಿಕ ಒಂದು ಕೋಟಿ ರೂ.ಆದಾಯ ಗಳಿಸುವ ಉದ್ದೇಶವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಎನ್.ಎಂ.ಪುಷ್ಪವಲ್ಲಿ ಹಾಗೂ ನಿರ್ದೇಶಕರುಗಳು ಈ ಸಂದರ್ಭದಲ್ಲಿದ್ದರು. ಅಪಾರ ಅಭಿಮಾನಿಗಳು ಎಂ.ನಿಶಾನಿ ಜಯಣ್ಣನವರನ್ನು ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ