ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಸುತ್ತಿರುವ ಮಾಸಿಕ ಗಮಕ ಸಂಭ್ರಮದ 34ನೇ ಕಾರ್ಯಕ್ರಮವು ದಿನಾಂಕ 24/05/2026 ರ ಭಾನುವಾರ ಸಂಜೆ 6 ಗಂಟೆಗೆ ನಗರದ ಜೆ.ಸಿ.ಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಅಂದು ಶ್ರೀ ನರಹರಿ ಕವಿಯ ಕಾವ್ಯದ ' ಪ್ರಹ್ಲಾದ ಚರಿತ್ರೆಯಲ್ಲಿ ನರಸಿಂಹಾವತಾರ 'ಎಂಬ ಕಥಾಭಾಗವನ್ನು ತುಮಕೂರಿನ ಗಮಕ ವಿದುಷಿ ಲಕ್ಷ್ಮೀ ಜಯಶಂಕರ್ ವಾಚಿಸುವರು. ಗಮಕ ವಿದ್ವಾಂಸ, ಗ.ಸೀ.ಶ್ರೀನಿವಾಸಮೂರ್ತಿ,ತುಮಕೂರು ,ಇವರು ವ್ಯಾಖ್ಯಾನಿಸುವರು. ಸರ್ವರಿಗೂ ಆತ್ಮೀಯ ಸ್ವಾಗತ, ಗಮಕ ಕಲಾಭಿಮಾನಿಗಳ ಸಂಘ ಹಾಗೂ ಜೆ.ಸಿ.ಆರ್.ಗಣಪತಿ ದೇವಾಲಯ ಸೇವಾ ಸಮಿತಿ, ಚಿತ್ರದುರ್ಗ ಇವರು ಪ್ರಕಟಣೆಯಲ್ಲಿ ಕೋರಿದದ್ದಾರೆ.



