ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಾರಸಂದ್ರದಲ್ಲಿ ನೂತನ ಬಡಾವಣೆಗಳು ವಿಲ್ಲಾಗಳು ನಿರ್ಮಾಣವಾಗಿದ್ದು ಬಡಾವಣೆಗಳಿಂದ ಹೊರಬರುವ ಕಲುಷಿತ ತ್ಯಾಜ್ಯ ನೀರು ನಲ್ಲುಕುಂಟೆ
ಕೆರೆ ಸೇರುತ್ತಿದ್ದು ಕೆರೆಯಲ್ಲಿ ಮೀನುಗಳು ಮೃತಪಟ್ಟಿವೆ ಎಂದು ಸ್ಥಳೀಯರು ನಿವಾಸಿಗಳಾದ ನೆಲ್ಲುಕುಂಟೆ ಗ್ರಾಮದ ಶೈಲೇಶ್, ಮಾರಸಂದ್ರದ ಜ್ಯೋತಿಪ್ರಕಾಶ್, ವಿಜಯಕುಮಾರ್ ದೂರಿದ್ದಾರೆ.
ವೆಲ್ವರ್ಥ್ ಸಿಟಿ ಬಡಾವಣೆಯಲ್ಲಿ ಸುಮಾರು ಎರಡು ಸಾವಿರ ಮನೆಗಳಿಂದ ಹೊರಬರುವ ಒಳಚರಂಡಿ ನೀರನ್ನು ಸೂಕ್ತ ರೀತಿಯಲ್ಲಿ ಶುದ್ದೀಕರಿಸದೇ ನೆಲ್ಲುಕುಂಟೆ ಕೆರೆಗೆ ಹರಿದು ಬೀಡಲಾಗುತ್ತಿದೆ ಇದರಿಂದ ಪರಿಸರ ಮಲೀನವಾಗಿ
ಕೆರೆಯಲ್ಲಿನ ನೀರಿನ ದುರ್ನಾತದಿಂದ ಕೆರೆ ಸುತ್ತಮುತ್ತಲಿನ ಮನೆ, ತೋಟಗಳಲ್ಲಿ ಇರುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಕೆರೆಯಲ್ಲಿ ನೀರು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ರೀತಿಯಲ್ಲಿ ಮಲಿನವಾಗಿದ್ದು ಈ ಕೆರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಮೀನುಗಳು ಸಾಯುತ್ತಿವೆ. ಮೀನು ಗಳ ಸಾವಿನಿಂದ ಕೆರೆ ಸುತ್ತಮುತ್ತ ದುರ್ನಾತ ಹೆಚ್ಚಾಗುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕೆರೆಯಲ್ಲಿನ ನೀರು ಕಲುಷಿತವಾಗಲು ಕಾರಣವಾಗಿರುವ ವೆಲ್ವರ್ಥ್ ಸಿಟಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕೊಳಚೆ ನೀರನ್ನು ಸೂಕ್ತ ರೀತಿಯಲ್ಲಿ ಶುದ್ದೀಕರಿಸಿ ಹೊರಬಿಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.



