ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಐಮಂಗಲ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಕಲಿಕಾ ಹಿತದೃಷ್ಟಿಯಿಂದ ಚಿತ್ರದುರ್ಗದ ಪ್ರಸಿದ್ಧ ಅನ್ನಪೂರ್ಣ ಜುವೆಲರ್ಸ್ ಮಾಲೀಕರಾದ ಶ್ರೀ ಲಕ್ಷ್ಮಣ್ ಡಿ. ಸೋನಿ ಅವರು ಕಾಲೇಜಿಗೆ ಯು.ಪಿ.ಎಸ್ ಹಾಗೂ ಬ್ಯಾಟರಿಯನ್ನು ಕೊಡುಗೆಯಾಗಿ ನೀಡುವ ಮೂಲಕ ಉದಾತ್ತತೆ ಮೆರೆದಿದ್ದಾರೆ.
ಕಾಲೇಜಿನಲ್ಲಿ ನಿರಂತರ ವಿದ್ಯುತ್ ಸಂಪರ್ಕ ಹಾಗೂ ಡಿಜಿಟಲ್ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ದಾನಿಗಳು ಮಾಡಿರುವ ಈ ಧನಸಹಾಯ ಮತ್ತು ತಾಂತ್ರಿಕ ಬೆಂಬಲಕ್ಕೆ ಕಾಲೇಜು ಮಂಡಳಿ ಮತ್ತು ವಿದ್ಯಾರ್ಥಿ ಸಮೂಹ ಕೃತಜ್ಞತೆ ಸಲ್ಲಿಸಿದೆ.
ದಾನಿಗಳಿಗೆ ಅಭಿನಂದನೆ:
ಕೊಡುಗೆ ಹಸ್ತಾಂತರಿಸಿದ ಈ ವಿಶೇಷ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕಾಲೇಜಿನ ಪ್ರಾಚಾರ್ಯ ಎಂ. ತಿಪ್ಪೇಸ್ವಾಮಿ ಹಾಗೂ ಹಿರಿಯ ಉಪನ್ಯಾಸಕ ಮಹಮ್ಮದ್ ಶಕೀಲ್ ಅವರು ದಾನಿ ಲಕ್ಷ್ಮಣ್ ಡಿ. ಸೋನಿ ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ, ಗೌರವಿಸಿದರು.
ಈ ವೇಳೆ ಅರ್ಥಶಾಸ್ತ್ರ ಉಪನ್ಯಾಸಕರಾದ ಎಸ್.ಕೆ. ಮಂಜುನಾಥ್, ಉಪನ್ಯಾಸಕಿ ಬಿ. ಶಿಲ್ಪಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ದಾನಿಗಳಿಗೆ ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.



