Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಕ್ಷಾ ಬಂಧನ – ಬಂಧದ ಪವಿತ್ರತೆಯ ಹಬ್ಬ

Advertisement
ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ರಕ್ಷಾ ಬಂಧನ
ಬಂಧದ ಪವಿತ್ರತೆಯ ಹಬ್ಬ
ಭಾರತದ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬವು ತನ್ನದೇ ಆದ ಮಹತ್ವವನ್ನು ಹೊಂದಿದ್ದು
, ಸಮಾಜದ ಮೌಲ್ಯಗಳನ್ನು, ಸಂಬಂಧಗಳ ಘನತೆಯನ್ನು, ಮತ್ತು ಭಕ್ತಿಯ ಮೂಲ್ಯವನ್ನು ಕಾಪಾಡುವಲ್ಲಿ ಬಹುಮೂಲ್ಯವಾದ ಪಾತ್ರ ವಹಿಸುತ್ತವೆ. ಅಂತಹ ಹಬ್ಬಗಳಲ್ಲಿ ಅಣ್ಣ-ತಂಗಿಯ ನಡುವಿನ ಶುದ್ಧವಾದ, ನಿರ್ಭಾರತ, ಮತ್ತು ಬಲವಾದ ಸಂಬಂಧವನ್ನು ಪ್ರತಿಬಿಂಬಿಸುವ ಹಬ್ಬವೇ ರಕ್ಷಾ ಬಂಧನ. "ರಕ್ಷಾ" ಎಂದರೆ ರಕ್ಷಣೆ ಮತ್ತು "ಬಂಧನ" ಎಂದರೆ ಬಂಧ ಅಥವಾ ಬಾಂಧವ್ಯ. ಈ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಪ್ರೀತಿಯ ಸಂಕೇತವಾಗಿದೆ. ರಕ್ಷಾ ಬಂಧನದಂದು ಸಹೋದರಿಯು ತನ್ನ ಸಹೋದರರ ಕೈಗೆ ರಾಖಿಯನ್ನು ಕಟ್ಟಿ, ಅವನ ದೀರ್ಘಾಯುಷ್ಯ ಹಾಗೂ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾಳೆ. ಸಹೋದರನಾದ ತಾನು ತನ್ನ ತಂಗಿಯನ್ನು ಸಕಲವಿಧವಾಗಿ ರಕ್ಷಿಸುವ ಪ್ರತಿಜ್ಞೆ ತೆಗೆದುಕೊಳ್ಳುತ್ತಾನೆ. ಇದೊಂದು ಸಾಮಾಜಿಕ ನಿಟ್ಟಿನಲ್ಲಿ ಬಹುಪರಿಣಾಮಕಾರಿ ಹಬ್ಬವಾಗಿದ್ದು, ಸಂಬಂಧಗಳ ಗಾಢತೆಯನ್ನು ಹೆಚ್ಚಿಸುತ್ತದೆ ಮತ್ತು ಬಾಂಧವ್ಯದ ಬೇರನ್ನು ಇನ್ನಷ್ಟು ಬಲಪಡಿಸುತ್ತದೆ.

ಈ ಹಬ್ಬವು ಶ್ರಾವಣ ಮಾಸದ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬರುತ್ತದೆ. ಭಾರತದಲ್ಲಿ ಬೃಹತ್ ಮಟ್ಟದಲ್ಲಿ ಆಚರಿಸಲಾಗುವ ಈ ಹಬ್ಬವು ಹಿಂದೂ ಧರ್ಮದ ಹೆಗ್ಗಳಿಕೆಯ ಆಚರಣೆಯಾಗಿದೆ. ರಕ್ಷಾ ಬಂಧನದ ಹಿನ್ನೆಲೆಯು ಬಹಳ ಪುರಾತನವಾಗಿದೆ. ಪುರಾಣಗಳಲ್ಲಿ, ಮಹಾಭಾರತದಿಂದ ಹಿಡಿದು ಇತಿಹಾಸದ ಪ್ರಸಿದ್ಧ ಘಟನೆಯವರೆಗೆ ಈ ಹಬ್ಬದ ಮಹತ್ವವನ್ನು ವಿವರಿಸಲಾಗಿದೆ. ಮಹಾಭಾರತದಲ್ಲಿ ದ್ರೌಪದಿಯು ಶ್ರೀಕೃಷ್ಣನ ಕೈಗೆ ರಕ್ತ ಬಂದಾಗ, ತನ್ನ ಬಟ್ಟೆಯನ್ನು ಹರಿದು ಅದನ್ನು ಅವನ ಕೈಗೆ ಕಟ್ಟಿದಳು. ಆ ಬಂಧವು ಭಾವನಾತ್ಮಕವಾಗಿತ್ತು, ಮತ್ತು ಆಗ ಶ್ರೀಕೃಷ್ಣನು ಅವಳನ್ನು ತನ್ನ ಸಹೋದರಿ ಎಂಬ ಬಾಂಧವ್ಯದಿಂದ ಜೀವನದ ಅಂತ್ಯದವರೆಗೆ ರಕ್ಷಣೆ ನೀಡಲು ಪ್ರತಿಜ್ಞೆ ತೆಗೆದುಕೊಂಡನು ಎಂದು ಓದಿದ ನೆನಪು.

ಈ ಕಥೆಗಳು ಈ ಹಬ್ಬದ ಹಿನ್ನೆಲೆಯ ಆಳವನ್ನೂ ಮತ್ತು ಸಂಬಂಧಗಳ ಪಾವಿತ್ರ್ಯವನ್ನೂ ವ್ಯಕ್ತಪಡಿಸುತ್ತವೆ. ಈ ಹಬ್ಬವು ಪ್ರತಿಯೊಬ್ಬನ ಹೃದಯದಲ್ಲಿ ಭಾವನಾತ್ಮಕವಾಗಿ ನೆಲೆಯೂರುತ್ತದೆ, ಏಕೆಂದರೆ ಇದು ಬಾಂಧವ್ಯ, ನಂಬಿಕೆ, ವಿಶ್ವಾಸ, ಹಾಗೂ ಬಾಧ್ಯತೆಯ ಸಂಕೇತವಾಗಿದೆ.

ರಕ್ಷಾ ಬಂಧನದ ದಿನ, ಬೆಳಿಗ್ಗೆಯೇ ಸ್ನಾನ ಮಾಡಿ ಸಹೋದರಿಯರು ಪೂಜಾ ತಟ್ಟೆಯಲ್ಲಿ ರಾಖಿ, ಅರಿಶಿನ, ಕುಂಕುಮ, ದೀಪ, ಹಣ್ಣು ಮತ್ತು ಸಿಹಿ ತಿನಿಸುಗಳೊಂದಿಗೆ ಸಹೋದರರಿಗೆ ಆರತಿ ಎತ್ತುತ್ತಾರೆ. ನಂತರ ರಾಖಿಯನ್ನು ಅವನ ಕೈಗೆ ಕಟ್ಟುತ್ತಾರೆ. ಈ ಸಂದರ್ಭದಲ್ಲಿ ತಂಗಿಯರು ಅಣ್ಣನ ದೀರ್ಘಾಯುಷ್ಯ, ಸಮೃದ್ಧಿ ಮತ್ತು ಸುಖಕ್ಕಾಗಿ ಪ್ರಾರ್ಥಿಸುತ್ತಾರೆ. ಅಣ್ಣನು ತಂಗಿಗೆ ಉಡುಗೊರೆ ನೀಡುವ ಪರಂಪರೆಯೂ ಇದೆ. ಇದು ತಂಗಿಯೊಂದಿಗಿನ ಆಪ್ತತೆ ಮತ್ತು ಭದ್ರತೆಯ ಭರವಸೆಯ ಸಂಕೇತವಾಗಿದೆ. ಇಂತಹ ಪರಂಪರೆಗಳು ನಾವೆಲ್ಲರೂ ಸಂಬಂಧಗಳನ್ನು ಗೌರವಿಸುವ, ಕಾಪಾಡುವ, ಮತ್ತು ಬಲಪಡಿಸುವ ಕಲೆಯನ್ನು ಕಲಿಯುತ್ತೇವೆ.

ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿಯೂ ಈ ಹಬ್ಬವು ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ. ತಾಂತ್ರಿಕತೆಯ ಈ ಯುಗದಲ್ಲೂ ಸಹೋದರ-ಸಹೋದರಿಯ ನಡುವಿನ ಪ್ರೀತಿ ಇನ್ನೂ ಜೀವಂತವಾಗಿದೆ. ಇತ್ತೀಚಿನ ದಿನಗಳಲ್ಲಿ, ಕುಟುಂಬಗಳು ಬೇರೆ ಬೇರೆ ಊರುಗಳಲ್ಲಿ ವಾಸಿಸುತ್ತಿರುವುದರಿಂದ, ತಂಗಿಯರು ಅಣ್ಣನಿಗೆ ರಾಖಿಯನ್ನು ಪೋಸ್ಟ್ ಮೂಲಕ ಕಳುಹಿಸುವ ಅಥವಾ ಆನ್ಲೈನ್ ಮೂಲಕ ರಾಖಿ ಕೊಳ್ಳುವ ಸಂಪ್ರದಾಯಗಳು ಸಹ ಆರಂಭವಾಗಿವೆ. ಆದರೆ ಈ ಎಲ್ಲಾ ಮಾಧ್ಯಮಗಳ ಮಧ್ಯೆ, ಹಬ್ಬದ ಭಾವನೆ, ಭದ್ರತೆ, ಮತ್ತು ಬಂಧನದ ಪವಿತ್ರತೆ ಮಾತ್ರ ಯಾವತ್ತೂ ತಳಹದಿಯಲ್ಲೇ ಉಳಿದಿದೆ.

ಇತ್ತೀಚೆಗಿನ ವರ್ಷಗಳಲ್ಲಿ ರಕ್ಷಾ ಬಂಧನದ ಹಬ್ಬವು ಸಾಮಾಜಿಕ ಜವಾಬ್ದಾರಿಯ ಮತ್ತೊಂದು ಪ್ರತಿರೂಪವನ್ನೂ ತಾಳಿದೆ. ಹಲವಾರು ತಂಗಿಯರು ತಮ್ಮ ಅಣ್ಣರಾಗಿ ಸೈನಿಕರಿಗೆ ರಾಖಿ ಕಟ್ಟುದು, ಗಡಿ ಪಾಲಿಸುವ ಯೋಧರ ಬಲಶಾಲಿಯಾದ ಪಾತ್ರವನ್ನು ಗೌರವಿಸುವ ಕ್ರಮವಾಗಿ ಕಂಡುಬರುತ್ತದೆ. ಇದರಿಂದಾಗಿ ಈ ಹಬ್ಬವು ವೈಯಕ್ತಿಕ ಸಂಬಂಧದ ಮಟ್ಟದವರಿಂದ ಜಾತಿಯ ಮಟ್ಟದ ಬಾಂಧವ್ಯದ ಹಬ್ಬವಾಯಿತು. ಶಾಲೆ, ಕಾಲೇಜುಗಳು ಸಹ ಈ ಹಬ್ಬವನ್ನು ಆಚರಿಸುತ್ತವೆ, ಮಕ್ಕಳಲ್ಲಿ ಪರಸ್ಪರ ಗೌರವ ಮತ್ತು ಸಂಬಂಧದ ಮಹತ್ವವನ್ನು ಅರಿಯುವ ಭಾವನೆ ಬೆಳೆಸಲು. ಕೆಲವು ಶಾಲೆಗಳಲ್ಲಿ ಹುಡುಗಿಯರು ತಮ್ಮ ಸ್ನೇಹಿತರ ಕೈಗೆ ರಾಖಿ ಕಟ್ಟುವ ಮೂಲಕ ಸೌಹಾರ್ದತೆ ಮತ್ತು ಸಹಕಾರದ ಸಂಕೇತವನ್ನು ಪ್ರದರ್ಶಿಸುತ್ತಾರೆ.

ಇಂತಹ ಹಬ್ಬಗಳು ಇಂದಿನ ಪೀಳಿಗೆಯಲ್ಲಿ ಸಂಬಂಧಗಳ ಪ್ರಾಮುಖ್ಯತೆಯನ್ನು ಮರಳಿ ನೆನಪಿಸಲು ಬಹುಮುಖ್ಯವಾದ ಅವಕಾಶವನ್ನು ಒದಗಿಸುತ್ತವೆ. ಡಿಜಿಟಲ್ ಕಾಲದ ತ್ವರಿತದಲ್ಲಿ, ಮಾನವ ಸಂಬಂಧಗಳು ಹೆಚ್ಚು ತಾಂತ್ರಿಕ ಮತ್ತು ತಾತ್ಕಾಲಿಕವಾಗುತ್ತಿರುವ ಸಂದರ್ಭದಲ್ಲಿ,

ರಕ್ಷಾ ಬಂಧನ ನಮ್ಮನ್ನು ಆತ್ಮೀಯತೆಯತ್ತ, ನಂಬಿಕೆಯತ್ತ, ಹಾಗೂ ಸಂಬಂಧದ ಸಾಂಸ್ಕೃತಿಕ ಮೌಲ್ಯಗಳತ್ತ ಕರೆದೊಯ್ಯುತ್ತದೆ. ಇದು ಕೇವಲ ಒಂದು ತಂಗಿಯ ಹಕ್ಕು ಅಥವಾ ಅಣ್ಣನ ಕರ್ತವ್ಯವಲ್ಲ, ಇದು ಒಟ್ಟು ಸಮಾಜದಲ್ಲಿ ಬಾಂಧವ್ಯದ ಭಾವನೆ ಬೆಳೆಸುವ, ಪರಸ್ಪರ ರಕ್ಷಣೆಯ ಮನಸ್ಥಿತಿಯನ್ನು ರೂಪಿಸುವ ಹಬ್ಬವಾಗಿದೆ.

 ಹೀಗೆ, ರಕ್ಷಾ ಬಂಧನ ನಮ್ಮ ಸಂಸ್ಕೃತಿಯಲ್ಲೊಂದು ಅಮೂಲ್ಯವಾದ ಸಂಪ್ರದಾಯವಾಗಿದ್ದು, ನಮ್ಮ ಕುಟುಂಬದ ಬಂಧಗಳನ್ನು ಬಲಪಡಿಸಲು, ಪವಿತ್ರತೆಯ ಸಂಕೇತವಾಗಿ, ಮತ್ತು ಸಂಬಂಧಗಳಲ್ಲಿ ನಂಬಿಕೆ ಹಾಗೂ ಗೌರವವನ್ನು ಅಳವಡಿಸಲು ಒಂದು ಅಮೂಲ್ಯವಾದ ಅವಕಾಶವನ್ನು ಒದಗಿಸುತ್ತದೆ.



ಬದಲಾಯಿಸುತ್ತಿರುವ ಕಾಲದ ಮಧ್ಯೆ, ನಾವು ಈ ಹಬ್ಬದ ಮೂಲ ಉದ್ದೇಶವನ್ನು ಮರೆಯದೇ, ಅದರ ಪವಿತ್ರತೆಯನ್ನು ಉಳಿಸಿ, ಮುಂದಿನ ಪೀಳಿಗೆಯಲ್ಲಿಯೂ ಇದರ ಪ್ರಾಮುಖ್ಯತೆಯನ್ನು ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಅಂತಿಮವಾಗಿ, ರಕ್ಷಾ ಬಂಧನವು ಪ್ರೀತಿ, ನಂಬಿಕೆ, ಬದ್ಧತೆ ಮತ್ತು ಬಾಂಧವ್ಯದ ಜನುಮದ ನುಡಿಮುತ್ತುಗಳ ಸರಪಳಿಯಂತೆ ನಮ್ಮ ಜೀವನದ ಸಂಬಂಧಗಳ ಸೌಂದರ್ಯವನ್ನು ಹೆಚ್ಚಿಸುವ ಹಬ್ಬವಾಗಿದೆ.
ಲೇಖನ-
ಚಂದನ್ ಎಸ್ ಅವಂಟಿ, ಇಡ್ಲೂರ್, ಯಾದಗಿರಿ ಜಿಲ್ಲೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ