ಚಂದ್ರವಳ್ಳಿ ನ್ಯೂಸ್, ವಿಜಯನಗರ:
ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಹಾಗೂ ಹೊಸಪೇಟೆ ನಗರಸಭೆ ಸದಸ್ಯರು ಮತ್ತು ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ವಿಶ್ವಖ್ಯಾತ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಡಿಕೆ ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಶುಭವಾಗಲೆಂದು ಅಭಿಷೇಕ ಮತ್ತು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡ ಭರತ್ ಕುಮಾರ್ ಸಿಆರ್ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ 5 ಯೋಜನೆಗಳನ್ನ ಕೊಡ ಜನರಿಗೆ ನೀಡುವುದರ ಮೂಲಕ ಅನೇಕ ಅಭಿವೃದ್ಧಿ ಯಶಸ್ಸನ್ನು ಕಟ್ಟಿದ್ದಾರೆ.
ಅದೇ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಉತ್ತಮವಾದ ಆಡಳಿತ ನೀಡುವುದರ ಮೂಲಕ ಮತ್ತು ಹೆಚ್ಚಿನ ಯೋಜನೆಗಳನ್ನು ಈ ರಾಜ್ಯದ ಬಡವರ, ರೈತರ, ಕಾರ್ಮಿಕರ ಹಾಗೂ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ ಎಲ್ಲರಿಗೂ ಕೂಡ ಉತ್ತಮವಾದ ಯೋಜನೆಗಳನ್ನು ನೀಡುವುದರ ಮೂಲಕ ಸುಭದ್ರವಾದ ಸರ್ಕಾರವನ್ನು ನಡೆಸಲು ಹಂಪಿ ವಿರೂಪಾಕ್ಷೇಶ್ವರ ಶಕ್ತಿಯನ್ನು ನೀಡಲಿ, ಇಂದಿನ ಸರ್ಕಾರ ಮತ್ತು ಮುಂಬರುವ ಸರ್ಕಾರದಲ್ಲಿ ಕೂಡ ಡಿಕೆಶಿ ಕುಮಾರ್ ಅವರು ಅಧಿಕಾರದಲ್ಲಿ ಇರಲಿ ಎಂದು ಮಾತನಾಡಿದರು.
ದಾದಾ ಕಲಂದರ್ ಅವರ ಮಾತಾಡಿ ರಾಜ್ಯದಲ್ಲಿ ಉತ್ತಮವಾದ ಮಳೆ ಬೆಳೆ ಸಮೃದ್ಧಿ ಆಗಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಅಧಿಕಾರದಲ್ಲಿರಲಿ ಡಿಕೆ ಶಿವಕುಮಾರ್ ಅವರು ನಿರಂತರ ಮುಖ್ಯಮಂತ್ರಿಗಳಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮಂಜುನಾಥ್, ದಾದಾ ಕಲಂದರ್, ವೆಂಕಟೇಶ್,ಹುಲುಗಪ್ಪ, ಗೌಸ್, ಶೇಖರ್, ಯುವ ಮುಖಂಡರಾದ ರಾಜು ಗುಜ್ಜಲ್ ಮಹಮ್ಮದ್ ಸುಹೇಲ್ ಆಕಾಶ್ ನವೀನ್ ಕುಮಾರ್ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿಕೆ ಶಿವಕುಮಾರ್ ಅಭಿಮಾನಿಗಳು ಇತರರು ಇದ್ದರು.



