Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾನವ ಧರ್ಮ ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವರ್ಣ ವ್ಯವಸ್ಥೆಯ ಶೋಷಣೆಯನ್ನು ಖಂಡಿಸಿ ಮಾನವ ಧರ್ಮವನ್ನ ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ನಾನು ಬುದ್ದನ ನಾಡಿನಿಂದ ಬಂದಿದ್ದೇನೆಂದು ಹೆಮ್ಮೆಯಿಂದ ಹೇಳಿ, ಬೌದ್ದ ಧರ್ಮವನ್ನು ಮನಸಾರೆ ಮೆಚ್ಚಿದ್ದರು ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದ ಕೋಟೆ ನಾಡು ಬುದ್ದ ವಿಹಾರದಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೈಯಲ್ಲಿರೋ ರೇಖೆಗಳನ್ನೋ, ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸುವುದಕ್ಕಿಂತ ನಮ್ಮ ತಲೆಯಲ್ಲಿರುವ ಜ್ಞಾನವನ್ನು ಮತ್ತು ಮನಸ್ಸಿನಲ್ಲಿರುವ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವವನ್ನು ನಡೆಸಿದರೆ ಯಾವುದು ಅಸಾಧ್ಯವಲ್ಲ ಎಂದು ನಂಬಿದ್ದರು.

ಮೂಢನಂಬಿಕೆಯನ್ನು ಹಿಂಬಾಲಿಸಬೇಡಿ. ಅದಕ್ಕಿಂತಲೂ ನಾಸ್ತಿಕರಾಗುವುದು ಸೂಕ್ತ. ಇದರಿಂದ ನಮಗೆ ಮತ್ತು ದೇಶಕ್ಕೆ ಒಳ್ಳೆಯದು. ನಮ್ಮ ರಾಷ್ಟ್ರೀಯ ಆದರ್ಶಗಳಾದ ತ್ಯಾಗ ಮತ್ತು ಸೇವೆ ಇವೆರಡೂ ಆದರ್ಶಗಳಿದ್ದಾಗ ಉಳಿದೆಲ್ಲವು ಸರಿಯಾಗಿರುತ್ತದೆ. ಕುವೆಂಪು ಅವರು ತಮ್ಮ ಅಂತರAಗದ ಗುರುವನ್ನಾಗಿ ಆರಿಸಿಕೊಂಡ ವಿವೇಕಾನಂದರ ಪೂರ್ಣದೃಷ್ಟಿಯೇ ಕುವೆಂಪು ಅವರಲ್ಲೂ ಒಡಮೂಡಿತು ಎಂದರು.

ಲೇಖಕ ಮೊದುರು ತೇಜ ಮಾತನಾಡಿ ಸ್ವಾಮಿ ವಿವೇಕಾನಂದರು, ಹಸಿದವನಿಗೆ ಅನ್ನ ನೀಡಿದಾಗ ಅವನ ಮುಖದಲ್ಲಿ ಮೂಡುವ ಕಿರು ನಗೆಯಲ್ಲಿ ದೇವರನ್ನು ಕಾಣಿ ಎಂದು ಹೇಳಿದರು. ಅವರ ವಿಚಾರಗಳು ವೈಚಾರಿಕತೆಯಿಂದ ಕೂಡಿದ್ದವು. ಈ ಜಗತ್ತು ಒಂದು ಉದ್ಯಾನವನದಂತೆ ಅಲ್ಲಿ ಎಲ್ಲಾ ಬಗೆಯ ಹೂಗಳಿರುವಂತೆ ಎಲ್ಲಾ ಧರ್ಮವನ್ನು ಗೌರವಿಸಿ ಎಂದು ಬಹುತ್ವದ ಮಹತ್ವ ತಿಳಿಸಿದರು. ಜೊತೆಗೆ ಹಿಂದೂ ಧರ್ಮದಲ್ಲಿ ಲೋಪಗಳನ್ನು ತಿಳಿಸುತ್ತಾ ಅದು ಸುಧಾರಣೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ರಂಗ ನಿರ್ದೇಶಕ ಧೀಮಂತರಾವ್, ಹಿರಿಯೂರು ತಾಲೂಕು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಈ.ನಾಗೇಂದ್ರಪ್ಪ, ಶಿಕ್ಷಕರಾದ ಯರದಕಟ್ಟೆ ಲಕ್ಷ್ಮೀದೇವಿ, ಪಿಲ್ಲಹಳ್ಳಿ ರಾಮಣ್ಣ, ಲಾಯರ್ ಬೆನಕನಹಳ್ಳಿ ಚಂದ್ರಪ್ಪ, ಗುಡ್ಡದ ರಂಗವ್ವನಹಳ್ಳಿ ದುರ್ಗೇಶ್, ಶಾಂತಮ್ಮ, ತಿಪ್ಪಮ್ಮ, ದ್ರಾಕ್ಷಾಯಿಣಿ, ಬೆಸ್ಕಾಂ ತಿಪ್ಪೇಸ್ವಾಮಿ, ಬನ್ನಿಕೋಡ್ ರಮೇಶ್ ಇತರರಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ