Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೀದಿ ನಾಯಿಗಳ ಸಮಸ್ಯೆ ಮತ್ತು ನಿಯಂತ್ರಣ?

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೀದಿ ನಾಯಿಗಳ ಸಮಸ್ಯೆ ಮತ್ತು ನಿಯಂತ್ರಣ........ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆ
? ಅದು ಅರ್ಜಿ ವಿಚಾರಣೆ ಮಾಡಿ ಆದೇಶ ಹೊರಡಿಸಬೇಕೆ ? ಅದರ ಅವಶ್ಯಕತೆ ಇದೆಯೇ ? ಬೀದಿ ನಾಯಿಗಳ ಸಮಸ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅಷ್ಟೊಂದು ಮಾಹಿತಿ ಇರುತ್ತದೆಯೇ ? ಅವರು ಅಷ್ಟೊಂದು ಆಳವಾಗಿ ಬೀದಿ ನಾಯಿಗಳ ಬಗ್ಗೆ ಅಧ್ಯಯನ ಮಾಡಿರುತ್ತಾರೆಯೇ ಅಥವಾ ಕಾನೂನಿನ ಪ್ರಕಾರ ಏನಾದರೂ ಪರಿಹಾರ ಸಿಗಬಹುದು ಎಂದು ಅರ್ಜಿದಾರರು ಭಾವಿಸಿರಬಹುದೇ ? ಇದು ತುಂಬಾ ಸಣ್ಣ ವಿಷಯ ಎನಿಸುವುದಿಲ್ಲವೇ ?

ಸಾಮಾನ್ಯ ಜ್ಞಾನವಿರುವ ಯಾರಿಗಾದರೂ  ಬೀದಿ ನಾಯಿಗಳ ಸಮಸ್ಯೆ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ್ದು ಎನ್ನುವ ಅರಿವಿರುವುದಿಲ್ಲವೇ ? ದೇಶದ ಅತ್ಯಂತ ಪುಟ್ಟ ಹಳ್ಳಿಯಿಂದ ರಾಷ್ಟ್ರದ ರಾಜಧಾನಿಯವರೆಗೂ ಈ ಬೀದಿ ನಾಯಿಗಳ ಬಗ್ಗೆ ಚರ್ಚಿಸುವಂತಹುದೇನಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ, ಪಿಡಿಒ ಇಂದ ಹಿಡಿದು ಕೇಂದ್ರ ಸಂಪುಟ ಕಾರ್ಯದರ್ಶಿ ವರೆಗೆ ಎಷ್ಟೊಂದು ವ್ಯವಸ್ಥೆಗಳಿವೆಯಲ್ಲವೇ ?

ಅಲ್ಲಿನ ಸ್ಥಳಿಯ ಆಡಳಿತ ಅಲ್ಲಿರುವ ಬೀದಿ ನಾಯಿಗಳು, ಅವು ಕೊಡುತ್ತಿರುವ ತೊಂದರೆ, ಅದನ್ನು ನಿಯಂತ್ರಿಸಲು ತೆಗೆದುಕೊಳ್ಳುವ ಕ್ರಮಗಳು ಇತ್ಯಾದಿ ವಿಷಯಗಳನ್ನು ಯೋಚಿಸಿ ಅಲ್ಲಲ್ಲಿಯೇ ನಿರ್ಧಾರ ಮಾಡಬಹುದಲ್ಲವೇ ? ಬಹುತೇಕ ಎಲ್ಲ ಕಡೆ ಪೊಲೀಸ್ ವ್ಯವಸ್ಥೆ ಇದೆ, ಪಶು ವೈದ್ಯಕೀಯ ವ್ಯವಸ್ಥೆ ಇದೆ, ಸ್ಥಳೀಯ ಮಟ್ಟದ ಅಧಿಕಾರಿಗಳು ಇರುತ್ತಾರೆ, ಜನಪ್ರತಿನಿಧಿಗಳು ಇರುತ್ತಾರೆ, ಊರಿನ ಹಿರಿಯರು ಇರುತ್ತಾರೆ. ಇವರೆಲ್ಲ ಸೇರಿ ಬೀದಿ ನಾಯಿಗಳ ಬಗ್ಗೆ ಸ್ವಲ್ಪ ಮುತುವರ್ಜಿ ವಹಿಸಿ ಒಂದಷ್ಟು ಕ್ರಮ ಕೈಗೊಂಡರೆ ಆ ಸಮಸ್ಯೆ ಅಲ್ಲೇ ಬಗೆಹರಿಯಬಹುದಲ್ಲವೇ ?

ಇದೊಂದು ಗಂಭೀರ ವಿಷಯ ಎನ್ನುವಂತೆ, ಪರವಾಗಿ ಮತ್ತು ವಿರೋಧವಾಗಿ ಚರ್ಚೆಗಳ ಅವಶ್ಯಕತೆ ಇದೆಯೇ ? ಇಬ್ಬರ ವಾದದಲ್ಲೂ ಒಂದಷ್ಟು ಅರ್ಥ ಇನ್ನೊಂದಿಷ್ಟು ಅನರ್ಥ ಎರಡೂ ಇದೆ. ಬೀದಿ ನಾಯಿಗಳ ಹಾವಳಿಯಿಂದ ಸಾಕಷ್ಟು ಜನಕ್ಕೆ ತೊಂದರೆಯೂ ಆಗುತ್ತಿದೆ. ಬಹಳ ಜನ ಬೇಸತ್ತಿದ್ದಾರೆ. ಮುಖ್ಯವಾಗಿ ಹಾಲು, ಪತ್ರಿಕೆ, ಪೋಸ್ಟ್, ಇತರ ಮಾರಾಟದ ವಸ್ತುಗಳನ್ನು ವಿತರಿಸುವವರು, ಹಣ್ಣು ತರಕಾರಿ ಮಾರಾಟ ಮಾಡುವವರು, ನೀರು, ಸರಬರಾಜು, ವಿದ್ಯುತ್ ಬಿಲ್ ಬರೆಯುವವರು, ಶಾಲಾ ವಿದ್ಯಾರ್ಥಿಗಳು, ರಾತ್ರಿ ಟ್ಯೂಷನ್ ಮುಗಿಸಿ ಮನೆಗೆ ಮರಳುವ ವಿಧ್ಯಾರ್ಥಿನಗಳು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು, ಬಡ ಮಕ್ಕಳು ಮುಂತಾದವರು ಬೀದಿ ನಾಯಿಗಳಿಂದ ತೊಂದರೆ ಅನುಭವಿಸುವುದನ್ನು ನಾವು ದಿನನಿತ್ಯ ನೋಡುತ್ತಲೇ ಇದ್ದೇವೆ. ಅದಕ್ಕೆ ಖಂಡಿತ ಪರಿಹಾರ ಬೇಕಿದೆ.

ಸಾಮಾನ್ಯವಾಗಿ ನಾಯಿಗಳನ್ನು ಮನುಷ್ಯರ್ಯಾರು ಕಚ್ಚುವುದಿಲ್ಲ ಅಥವಾ ಅನಾವಶ್ಯಕವಾಗಿ ಕೆಣಕುವುದಿಲ್ಲ. ಅದಕ್ಕೆ ಭಯಪಟ್ಟು ದೂರವೇ ಇರುತ್ತಾರೆ ಎಲ್ಲೋ ಕೆಲವು ಪುಂಡಪೋಕರಿ ಹುಡುಗರನ್ನು ಹೊರತುಪಡಿಸಿ. ಆದರೆ ನಾಯಿಗಳು ಮನುಷ್ಯನನ್ನು ಕಚ್ಚುವುದು ಅತ್ಯಂತ ಸಹಜವಾಗಿದೆ. ಆದ ಕಾರಣ  ಬೀದಿ ನಾಯಿಗಳ ನಿಯಂತ್ರಣ ಅತ್ಯಾವಶ್ಯಕ. ಹಾಗೆಯೇ ಬೀದಿ ನಾಯಿಗಳಿಗೂ ಬದುಕುವ ಹಕ್ಕಿದೆ. ಅವು ಸಹ ಈ ಸೃಷ್ಟಿಯ, ಈ ಪ್ರಕೃತಿಯ ಒಂದು ಭಾಗ. ಏನು ಅನಿವಾರ್ಯವೋ, ದುರಾದೃಷ್ಟವೋ, ಪರಿಸ್ಥಿತಿಯ ಒತ್ತಡವೋ ಅವು ಬೀದಿ ನಾಯಿಗಳಾಗಿರುತ್ತವೆ. ಅವುಗಳಿಗೆ ಪೋಷಕರು ಇರುವುದಿಲ್ಲ. ಅವುಗಳನ್ನು ಕ್ರೂರವಾಗಿ ಕೊಲ್ಲುವುದು ಸಹ ನಾಗರಿಕ ಸಮಾಜದ ಉತ್ತಮ ಲಕ್ಷಣವಲ್ಲ.

ಆದರೆ ಬೀದಿ ನಾಯಿಗಳಿಗೆ ಒಂದಷ್ಟು ಮಾನವೀಯ ಪ್ರಜ್ಞೆ ಮತ್ತು ನಾಗರಿಕ ಸಮಾಜದ ಲಕ್ಷಣಗಳು ಇರುವುದಿಲ್ಲ. ಅವು ತಮ್ಮಿಷ್ಟದಂತೆ ಬದುಕುತ್ತವೆ. ಆ ಸಂದರ್ಭದಲ್ಲಿ ಹಸಿವಿನಿಂದ ಅಮಾಯಕ ಜನರ ಮೇಲೆ ಹಲ್ಲೆ ಮಾಡುವ ಎಲ್ಲ ಸಾಧ್ಯತೆ ಇರುತ್ತದೆ. ಜೊತೆಗೆ ಕೆಲವೊಮ್ಮೆ ಅನಾರೋಗ್ಯದಿಂದ ಹುಚ್ಚು ಹಿಡಿದಿರಬಹುದು. ಏಕೆಂದರೆ ಪಾಪಾ ಅವಕ್ಕೆ ತಿಳುವಳಿಕೆ ಇಲ್ಲ. ಮನುಷ್ಯರಿಗಾದರೆ ಬುದ್ಧಿ ಹೇಳಬಹುದು ಅಥವಾ ಶಿಕ್ಷಿಸಬಹುದು. ಆದರೆ ನಾಯಿಗೆ ಇದು ಅರ್ಥವಾಗುವುದಿಲ್ಲ.

ಆದ್ದರಿಂದ ನಾವುಗಳೇ ಏನಾದರೂ ಕ್ರಮ ಕೈಗೊಳ್ಳಬೇಕು ಮತ್ತು ಪಶು ವೈದ್ಯಕೀಯಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಬೀದಿಬದಿಯಲ್ಲಿ ಕೈಗೊಳ್ಳಬೇಕಾದ ಉತ್ತಮ ಕ್ರಮಗಳನ್ನು ಕೈಗೊಂಡರೆ ಮುಗಿಯಿತು. ಅದಕ್ಕೆ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಏನು ಹೇಳಿ ಯಾರು ? ಪಾಪ ಅವರಿಗೆ ತಾನೇ ನಾಯಿಕಾಟ ಹೇಗೆ ಗೊತ್ತಾಗುತ್ತದೆ. ಬಹುತೇಕ ಮೇಲಿನ ಸ್ಥರದ ಜನರು ಕಾರುಗಳಲ್ಲಿ ಸೆಕ್ಯೂರಿಟಿ ಯೊಂದಿಗೆ ಓಡಾಡುವುದರಿಂದ ಅವರಿಗೆ ಬೀದಿ ನಾಯಿಗಳ ಸಮಸ್ಯೆ ಅಷ್ಟಾಗಿ ಗೊತ್ತಾಗುವುದಿಲ್ಲ.

ಅದೇನಿದ್ದರೂ ನಮ್ಮಂತ ಪ್ರತಿದಿನವೂ ಬೀದಿಗಳಲ್ಲಿ ಓಡಾಡುವ, ಹಗಲು ರಾತ್ರಿ ಎನ್ನದೆ ದುಡಿಯುವ ನಮಗೆ ನಾಯಿಗಳ ಕಾಟ ಖಂಡಿತ ಗೊತ್ತಿರುತ್ತದೆ. ಆದರೆ ಪರಿಹಾರ ಮಾಡಲು ಮಾತ್ರ ಸ್ಥಳೀಯ ಆಡಳಿತವೇ ಆಗಬೇಕು. ದಯವಿಟ್ಟು ಇನ್ನಾದರೂ ಈ ಹುಚ್ಚಾಟಗಳನ್ನು ನಿಲ್ಲಿಸಿ ಬೀದಿ ನಾಯಿಗಳ ಕಾಟವನ್ನು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿಸಿಕೊಳ್ಳಿ. ಪ್ರಾಣಿ ದಯಾ ಸಂಘ ಅಥವಾ ಇನ್ಯಾರೇ ಆಗಲಿ ಅನಾವಶ್ಯಕವಾಗಿ ಮನುಷ್ಯರಿಗಿಂತ ಪ್ರಾಣಿಗಳಿಗೆ ಹೆಚ್ಚಿನ ಮಹತ್ವ ಕೊಡುವುದು ಬೇಡ. ಅದು ನಾಯಿ ವಿಷಯ ಮಾತ್ರ ಅಲ್ಲ ಹಸು ಅಥವಾ ಇನ್ಯಾವುದೇ ಪ್ರಾಣಿಯ ವಿಷಯದಲ್ಲೂ ಸಹ  ಮೊದಲ ಆದ್ಯತೆ ಮನುಷ್ಯರಿಗೆ ಇರಬೇಕು.

ಹಾಗೆಂದು ಪ್ರಾಣಿಗಳನ್ನು ದ್ವೇಷಿಸಬೇಕೆಂದಿಲ್ಲ. ಅವಕ್ಕೂ ಬದುಕು ಹಕ್ಕು ನೀಡೋಣ. ಆದರೆ ನಮ್ಮ ಸುರಕ್ಷತೆಗೆ ಮೊದಲ ಆದ್ಯತೆ. ಹಣಕೇಂದ್ರಿತ ಭ್ರಷ್ಟ ವ್ಯವಸ್ಥೆಯಲ್ಲಿ ಎಲ್ಲವೂ ಸಮಸ್ಯೆಗಳೇ ಪರಿಹಾರಗಳು ಮಾತ್ರ ಸಿಗುತ್ತಿಲ್ಲ. ಕೊನೆಗೆ ಬೀದಿ ನಾಯಿಗಳು ಸಹ ಸಮಸ್ಯೆಯಾಗಿ ಕಾಡುತ್ತಿವೆ ಎಂದರೆ ನಮ್ಮ ವ್ಯವಸ್ಥೆ ಹೋಗುತ್ತಿರುವ ಅಭಿವೃದ್ಧಿಯ ದಿಕ್ಕು ಮತ್ತೊಮ್ಮೆ ಪರಾಮರ್ಶೆಗೆ ಒಳಪಡಬೇಕು.

ಇತ್ತೀಚೆಗೆ ಎಲ್ಲ ವಿಷಯಗಳಿಗೂ ನ್ಯಾಯಾಲಯವನ್ನು ಎಡತಾಕುವ ಕೆಟ್ಟ ಸಂಪ್ರದಾಯ ಎಲ್ಲಾ ಕ್ಷೇತ್ರಗಳಲ್ಲೂ ತಲೆ ಎತ್ತುತ್ತಿದೆ. ಸ್ಥಳೀಯ ಆಡಳಿತಗಳು ಬಗೆಹರಿಸಿಕೊಳ್ಳಬಹುದಾದ ಸರಳ, ಸಣ್ಣ ವಿವಾದಗಳು ಸಹ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿವೆ. ಹಾಗಾದರೆ ಇಲ್ಲಿನ ಹಿರಿಯ ಅಧಿಕಾರಿಗಳು ರಾಜಕಾರಣಿಗಳಿಗೆ ಬಗೆಹರಿಸುವ ಸಾಮರ್ಥ್ಯ ಇಲ್ಲವೇ ಅವರು ಅಸಮರ್ಥರೇ ಯೋಚಿಸಬೇಕಾದ ವಿಷಯ......
ಲೇಖನ:ವಿವೇಕಾನಂದ. ಎಚ್. ಕೆ. 9663750451

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ