ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತುರ್ತು ಸಂದರ್ಭಗಳಲ್ಲಿ ಹಾಗೂ ತೊಂದರೆಯಲ್ಲಿರುವವರಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಪೊಲೀಸ್ ಇಲಾಖೆಗೆ ನನ್ನ ಅನುದಾನದಲ್ಲಿ ಹದಿನಾಲ್ಕು ಲಕ್ಷ ರೂ.ಬೆಲೆಯ ಮಹೇಂದ್ರ ಹೊಸ ಮಾಡೆಲ್ ಜೀಪನ್ನು ಜಿಲ್ಲಾ ರಕ್ಷಣಾಧಿಕಾರಿಗೆ ಹಸ್ತಾಂತರಿಸಿದ್ದೇನೆಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಪೊಲೀಸ್ ವರಿಷ್ಟಾಧಿಕಾರಿಗೆ ಜೀಪ್ ವಿತರಿಸಿ ಮಾತನಾಡಿದ ಕೆ.ಎಸ್.ನವೀನ್ ಇಲಾಖೆಗೆ ವಾಹನದ ಅವಶ್ಯಕತೆಯಿದೆ ಎಂದು ರಕ್ಷಣಾಧಿಕಾರಿ ರಂಜಿತ್ಕುಮಾರ್ ಭಂಡಾರು ಕೋರಿಕೆಯ ಮೇರೆಗೆ ಜೀಪ್ ನೀಡಿದ್ದೇನೆ. ಪೊಲೀಸರಿಗೆ ಅನೇಕ ಕರೆಗಳು ಬರುತ್ತಿರುತ್ತವೆ. ಕಾನೂನು ಸಹಾಯ ಬೇಡುವವರು, ಕಷ್ಟದಲ್ಲಿರುವವರಿಗೆ ಹೊಸ ಮಾಡಲ್ ಜೀಪ್ ನೆರವಾಗಲಿ. ಕೆಲವು ಸಂದರ್ಭಗಳಲ್ಲಿ ಗಣ್ಯರಿಗೆ ಎಸ್ಕಾರ್ಟ್ ನೀಡುವುದಕ್ಕಾಗಿಯೆ ವಾಹನಗಳ ಬಳಕೆಯಾಗುತ್ತಿರುತ್ತದೆ. ಇವೆಲ್ಲವನ್ನು ಮನಗಂಡು ಇಲಾಖೆಗೆ ಹೊಸ ವಾಹನ ಕೊಟ್ಟಿದ್ದೇನೆಂದು ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ಬೇದ್ರೆ, ಎಸ್ಸಿ. ಮೋರ್ಚಾ ಅಧ್ಯಕ್ಷ ಪರಶುರಾಮ್, ಉಪಾಧ್ಯಕ್ಷ ಧನಂಜಯ್, ಪ್ರಧಾನ ಕಾರ್ಯದರ್ಶಿ ಚೇತನ್, ಯಶವಂತ್, ಕಿರಣ್, ಓಬಳೇಶ್ ಹಾಗೂ ಮಹೇಂದ್ರ ಕಂಪನಿ ಟೀಮ್ನ ಮಧು ಈ ಸಂದರ್ಭದಲ್ಲಿದ್ದರು.



