ದೊಡ್ಡ ತಿಮ್ಮನಹಳ್ಳಿಯಲ್ಲಿ ಎನ್ಎಸ್ಎಸ್ ಶಿಬಿರ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ
, ನಾಯಕತ್ವ ಗುಣ ಮತ್ತು ಸಾಮಾಜಿಕ ಜವಾಬ್ದಾರಿ ಯಿಂದ ಯಾವುದೇ ಹಣದ ಪ್ರತಿಫಲ ಅಪೇಕ್ಷಿಸದೆ, ಸ್ವಯಂ ಪ್ರೇರಣೆಯಿಂದ ತಮ್ಮ ಸಮಯ, ಶ್ರಮ ಮತ್ತು ಕೌಶಲ್ಯಗಳನ್ನು ಸಮಾಜದ ಸೇವೆಗಾಗಿ ಗ್ರಾಮದಲ್ಲಿ  ಮೀಸಲಿಡುವ ವ್ಯಕ್ತಿಗಳು, ಶಿಕ್ಷಣ, ಆರೋಗ್ಯ, ವಿಪತ್ತು ನಿರ್ವಹಣೆ, ಮತ್ತು ಪರಿಸರ ಸಂರಕ್ಷಣೆ ಯಂತಹ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವುದಲ್ಲದೆ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವುದರ ಮೂಲಕ ವ್ಯಕ್ತಿ ವಿಕಾಸ ವಾಗಲು ಸಾದ್ಯ ಎಂದು ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ  ಹೆಚ್. ಎ.  ನಾಗರಾಜ್ ಹೇಳಿದರು.

ತೂಬಗೆರೆ ಹೋಬಳಿ ದೊಡ್ಡ ತಿಮ್ಮನಹಳ್ಳಿ ಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ  ಎನ್ಎಸ್ಎಸ್ ಏಳು ದಿನದ   ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು  ಯುವಜನತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜವನ್ನು ಕಟ್ಟಬೇಕೆಂದು ಎಂದರು.

- Advertisement - 

 ಕೊಂಗಾಡಿಯಪ್ಪ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ವೆಂಕಟೇಶ್ ಟಿ.ಎನ್. ಮಾತನಾಡಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಾಲ್ಕನೇ ದಿನದ ಎನ್.ಎಸ್.ಎಸ್. ವಿಶೇಷ ಶಿಬಿರ ಬಹಳಷ್ಟು ಶ್ರಮದಾನದಲ್ಲಿ  ಅರಿವು ಮೂಡಿಸುವ ಮೂಲಕ ವ್ಯಕ್ತಿತ್ವ ವಿಕಸನದಲ್ಲಿ ಎನ್ ಎಸ್ ಎಸ್ ಪಾತ್ರ ಬಹುಮುಖ್ಯವಾಗಿದೆ ಎಂದರು.

 ಕಾರ್ಯಕ್ರಮದಲ್ಲಿ ಡಾ. ಸುಷ್ಮಾ,ಘಾಟಿ ಗ್ರಾ ಪಂ ಮಾಜಿ   ಅಧ್ಯಕ್ಷ ಟಿ. ಎಂ. ಕೃಷ್ಣಮೂರ್ತಿ  ತೂಬಗೆರೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅಶ್ವತ್ಥಪ್ಪ ಏನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ  ಡಾ. ನಾಗರಾಜ ಎಲ್ ಹಾಗೂ ವಿಶೇಷ ಶಿಬಿರದ ಸಹ ಶಿಬಿರ ಅಧಿಕಾರಿ ನಿತಿನ್ ಕುಮಾರ್ ಕೆ ಎನ್. ಗಗನ. ಉಪಸ್ಥಿತರಿದ್ದರು.

- Advertisement - 

Share This Article
error: Content is protected !!
";