ಪಾಲಿಟೆಕ್ನಿಕ್ ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಜಿಲ್ಲೆಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಹಾನಗಲ್ ಶ್ರೀಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
, ಕೈಗಾರಿಕೆಗಳಲ್ಲಿ ರೋಬೋಟಿಕ್ಸ್ ಕುರಿತು ಕಾರ್ಯಗಾರ ಮತ್ತು ಡಿಪ್ಲೋಮಾ ಅ-25 ಪಠ್ಯಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಳ್ಳಾರಿ ಸಂಸದ ಈ.ತುಕಾರಾಂ ರವರು  ಶುದ್ಧ ಕುಡಿಯುವ ನೀರಿನ ಘಟಕ, ಕೈಗಾರಿಕೆಗಳಲ್ಲಿ ರೋಬೋಟಿಕ್ಸ್ ಕುರಿತು ಕಾರ್ಯಗಾರ, ನವೀಕೃತ ಇ ಅಂಡ್ ಸಿ ವಿಭಾಗದ ಪ್ರಯೋಗಾಲಯ ಉದ್ಘಾಟನೆ ನೆರವೇರಿಸಿದರು. ಕಾಲೇಜಿನ ಉಪನ್ಯಾಸಕರುಗಳಾದ ಶ್ರೀಮತಿ ನಳಿನಿ ಮತ್ತು ಟಿ.ಹೇಮಂತ್ ಕುಮಾರ್ ಬರೆದಿರುವ ಡಿಪ್ಲೋಮಾ ಅ-25 ಪಠ್ಯಪುಸ್ತಕ ಬಿಡುಗಡೆ ಮಾಡಿದರು. 

- Advertisement - 

ನಂತರ ಮಾತನಾಡಿ ಜೀವನಕ್ಕೆ ಅವಶ್ಯವಿರುವ ವಸ್ತುಗಳೆಂದರೆ ಅನ್ನ, ನೀರು, ಹಣ ಸಾರ್ವಜನಿಕ ಸೇವೆಗೆ ಬರುವುದಕ್ಕಿಂತ ಮೊದಲು ಕನಸನ್ನು ಕಂಡು ಅದನ್ನು ನನಸು ಮಾಡಲು ಸಾಧನೆ ಬಹಳ ಮುಖ್ಯ ವಿದ್ಯೆ ಯಾರ ಆಸ್ತಿಯು ಅಲ್ಲ  ಸಮಾಜಕ್ಕೆ ನೀವು ಆಸ್ತಿಯಾಗಿ ಎಂದು ನೆರೆದಿದ್ದ ವಿದ್ಯಾರ್ಥಿವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಎಜಿಎಂ ಆನಂದ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಿವಿ ಸಂಘದ ಅಧ್ಯಕ್ಷ ಡಾ.ಕಣೇಕಲ್ ಮಹಾಂತೇಶ್ ವಹಿಸಿದ್ದರು. ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ಖಜಾಂಚಿ ಬೈಲುವದ್ದಿಗೇರಿ ಏರ್ರಿಸ್ವಾಮಿ, ಹಾಲಿ ಕಾರ್ಯಕಾರಿ ಸಮಿತಿಯ ಸದಸ್ಯರು, ಅಜೀವ ಸದಸ್ಯರು.

- Advertisement - 

ಕೈಗಾರಿಕೆಗಳಲ್ಲಿ ರೋಬೋಟಿಕ್ಸ್ ಕುರಿತು ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಕಿರಣ್ ಕಶ್ಯಪ್.ಎಂ, ಸುದೀಪ್ ಮತ್ತು ಕಾಲೇಜಿನ  ಅಡಳಿತ ಮಂಡಳಿಯ ಅಧ್ಯಕ್ಷರಾದ ಪಲ್ಲೇದ ಪ್ರಭುಲಿಂಗ, ಅಡಳಿತ ಮಂಡಳಿಯ ಸದಸ್ಯರಾದ ಬಾಣಾಪುರ  ಜಡಿ ಸಿದ್ದನಗೌಡ, ಚಂದ್ರಶೇಖರ ಪಾಶ್ಚಾಪುರ್ ಪ್ರಾಚಾರ್ಯರಾದ ಬಿ.ಶ್ರೀಶೈಲಗೌಡ, ಎಲ್ಲಾ ವಿಭಾಗ ಮುಖ್ಯಸ್ಥರು ಸಿಬ್ಬಂದಿಗಳು ಮತ್ತು  ವಿದ್ಯಾರ್ಥಿ ವಿದ್ಯಾರ್ಥಿನಿಯರು  ಭಾಗವಹಿಸಿದ್ದರು.

ನಿರೂಪಣೆಯನ್ನು ಸಿವಿಲ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಉಮ್ಮೆ ಸಲ್ಮಾ, ಪ್ರಾರ್ಥನಾ ಗೀತೆಯನ್ನು  ಉಪನ್ಯಾಸಕಿ ಕುಮಾರಿ. ಹಿಮಬಿಂದು ನಿರ್ವಹಿಸಿದರು ಮತ್ತು ವಂದನಾರ್ಪಣೆಯನ್ನು ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಎಸ್.ನಾಗರಾಜ್ ಮಾಡಿದರು.

 

Share This Article
error: Content is protected !!
";