ಸಜ್ಜನ್ ವ್ಯಕ್ತಿ ಕೋಡಿಹಳ್ಳಿ ಶಿವಣ್ಣ ಇನ್ನಿಲ್ಲ
ಚಂದ್ರವಳ್ಳಿ ನ್ಯೂಸ್, ಹಿರಿಯೂರು: ತಾಲೂಕಿನ ಕೋಡಿಹಳ್ಳಿ ನಿವಾಸಿ ಸಜ್ಜನ ಹಾಗೂ ಮೃದು ಸ್ವಭಾವದ ವ್ಯಕ್ತಿ ಎಂದೇ ಹೆಸರಾಗಿದ್ದ ಶ್ರೀಯುತ ಶಿವಣ್ಣ(58)ನವರು ಸೋಮವಾರ (ಏಪ್ರಿಲ್ 13,) ಮಧ್ಯಾಹ್ನ ಸುಮಾರು 1 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಜ್ಜನಿಕೆಯ ಸಾಕಾರಮೂರ್ತಿ ಶಿವಣ್ಣನವರು ತಮ್ಮ ಸರಳ ಜೀವನ, ಸಜ್ಜನಿಕೆ ಮತ್ತು ಸಂಸ್ಕಾರಯುತ ನಡವಳಿಕೆಯಿಂದ ಸುತ್ತಮುತ್ತಲಿನ ಜನರಿಗೆ ಆಪ್ತರಾಗಿದ್ದರು. ಮೃದು ಸ್ವಭಾವದವರಾಗಿದ್ದ ಅವರು ಯಾರ ಮನಸ್ಸನ್ನೂ ನೋಯಿಸದೆ, ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಬೆರೆಯುವ ಗುಣ ಹೊಂದಿದ್ದರು.
ಇಂತಹ ಒಬ್ಬ ಹಿರಿಯ ಚೇತನದ ಅಗಲಿಕೆ ಇಡೀ ಭಾಗದ ಜನರಲ್ಲಿ ಹಾಗೂ ಅವರ ಹಿತೈಷಿಗಳಲ್ಲಿ ತೀವ್ರ ಶೋಕವನ್ನು ತಂದಿದೆ.
ದುಃಖದಲ್ಲಿ ಕುಟುಂಬ ಮತ್ತು ಹಿತೈಷಿಗಳು
ಒಳ್ಳೆಯ ವ್ಯಕ್ತಿಯೊಬ್ಬರು ನಮ್ಮನ್ನಗಲಿರುವುದು ಬಹಳ ಶೋಚನೀಯ ಸಂಗತಿ. ಅವರ ನಿಧನದಿಂದ ಕುಟುಂಬಸ್ಥರು, ಬಂಧು-ಬಳಗದವರು ಹಾಗೂ ಸ್ನೇಹಿತರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ.
ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ ಈ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

