ಭಯೋತ್ಪಾದನೆಗೆ ದೃಢ, ನಿಖರ ಪ್ರತ್ಯುತ್ತರ ನೀಡುವ ಬಾಲಕೋಟ್ ವಾಯುದಾಳಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಲಕೋಟ್ ವಾಯುದಾಳಿಯ ವಾರ್ಷಿಕೋತ್ಸವದ ಈ ಮಹಾನ್ ದಿನದಂದು ನಾವೆಲ್ಲರೂ ಭಾರತೀಯ ವಾಯುಪಡೆಯ ಅಪ್ರತಿಮ ಧೈರ್ಯ
, ಸಾಹಸ ಮತ್ತು ದೃಢಸಂಕಲ್ಪಕ್ಕೆ ಅತ್ಯಂತ ಶ್ರದ್ಧಾಪೂರ್ವಕವಾಗಿ ವಂದಿಸೋಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕರೆ ನೀಡಿದರು.

ಫೆಬ್ರವರಿ 26, 2019ರ ಈ ಐತಿಹಾಸಿಕ ಕಾರ್ಯಾಚರಣೆಯು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಮತ್ತು ಭಯೋತ್ಪಾದನೆಗೆ ದೃಢವಾದ, ನಿಖರ ಪ್ರತ್ಯುತ್ತರ ನೀಡುವ ಭಾರತದ ಅಚಲ ಬದ್ಧತೆಯನ್ನು ಪುನರುಚ್ಚರಿಸಿತು ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಗತ್ತಿಗೆ ಭಾರತದ ಶಕ್ತಿ ಏನು ಎಂಬುದು ಅರಿವಾಯಿತು.

- Advertisement - 

ನಮ್ಮ ಕೆಚ್ಚೆದೆಯ ವಾಯುಪಡೆ ಯೋಧರ ಶೌರ್ಯವನ್ನು ನಾವು ಗೌರವಿಸುತ್ತಾ ರಾಷ್ಟ್ರದ ಸಾರ್ವಭೌಮತ್ವ, ಘನತೆ ಮತ್ತು ಭದ್ರತೆಯನ್ನು ಎತ್ತಿಹಿಡಿಯುವ ನಮ್ಮ ಸಾಮೂಹಿಕ ಸಂಕಲ್ಪದಲ್ಲಿ ನಾವು ಭಾಗವಾಗೋಣ ಎಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ.

 

- Advertisement - 

 

 

Share This Article
error: Content is protected !!
";