ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಸಾರ್ವಜನಿಕ ವಿತರಣಾ ಪದ್ಧತಿಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ೨೦೨೫ರ ಮೇ ಮಾಹೆಗೆ ಈ ಕೆಳಗಿನಂತೆ ಅಕ್ಕಿ ವಿತರಿಸಲಾಗುತ್ತಿದೆ.
ಅಂತ್ಯೋದಯ (ಎಎವೈ) ಪಡಿತರ ಚೀಟಿದಾರರಿಗೆ ಒಂದರಿಂದ ಮೂವರು ಸದಸ್ಯರಿರುವ ಕುಟುಂಬಕ್ಕೆ ೩೫ ಕೆ.ಜಿ., ನಾಲ್ವರು ಸದಸ್ಯರಿರುವ ಕುಟುಂಬಕ್ಕೆ ೪೦ ಕೆ.ಜಿ., ಐವರು ಸದಸ್ಯರಿರುವ ಕುಟುಂಬಕ್ಕೆ ೫೦ ಕೆ.ಜಿ., ಆರು ಸದಸ್ಯರಿರುವ ಕುಟುಂಬಕ್ಕೆ ೬೦ ಕೆ.ಜಿ., ಏಳು ಸದಸ್ಯರಿರುವ ಕುಟುಂಬಕ್ಕೆ ೭೦ ಕೆ.ಜಿ., ಎಂಟು ಸದಸ್ಯರಿರುವ ಕುಟುಂಬಕ್ಕೆ ೮೦ ಕೆ.ಜಿ., ಒಂಭತ್ತು ಸದಸ್ಯರಿರುವ ಕುಟುಂಬಕ್ಕೆ ೯೦ ಕೆ.ಜಿ., ೧೦ ಸದಸ್ಯರಿರುವ ಕುಟುಂಬಕ್ಕೆ ೧೦೦ ಕೆ.ಜಿ., ೧೧ ಸದಸ್ಯರಿರುವ ಕುಟುಂಬಕ್ಕೆ ೧೧೦ ಕೆ.ಜಿ. ಹಾಗೂ ೧೨ ಸದಸ್ಯರಿರುವ ಕುಟುಂಬಕ್ಕೆ ೧೨೦ ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ.
ಆದ್ಯತಾ (ಬಿಪಿಎಲ್) ಪಡಿತರ ಚೀಟಿಗೆ ಒಬ್ಬರು ಸದಸ್ಯರಿಗೆ ೧೦ ಕೆ.ಜಿ., ಇಬ್ಬರಿಗೆ ೨೦ ಕೆ.ಜಿ., ಮೂವರಿಗೆ ೩೦ ಕೆ.ಜಿ., ನಾಲ್ವರಿಗೆ ೪೦ ಕೆ.ಜಿ., ಐವರಿಗೆ ೫೦ ಕೆ.ಜಿ., ಆರು ಸದಸ್ಯರಿಗೆ ೬೦ ಕೆ.ಜಿ., ಏಳು ಸದಸ್ಯರಿಗೆ ೭೦ ಕೆ.ಜಿ., ಎಂಟು ಸದಸ್ಯರಿಗೆ ೮೦ ಕೆ.ಜಿ., ಒಂಭತ್ತು ಸದಸ್ಯರಿಗೆ ೯೦ ಕೆ.ಜಿ., ಹತ್ತು ಸದಸ್ಯರಿಗೆ ೧೦೦ ಕೆ.ಜಿ., ೧೧ ಸದಸ್ಯರಿಗೆ ೧೧೦ ಕೆ.ಜಿ. ಹಾಗೂ ೧೨ ಸದಸ್ಯರಿಗೆ ೧೨೦ ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.