Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಷ್ಟ್ರೀಯ ಟೂರ್ನಿಗೆ ದಾವಣಗೆರೆ, ಬೆಂಗಳೂರು ವಿವಿ ತಂಡಗಳು

Advertisement
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಆತಿಥೇಯ ದಾವಣಗೆರೆ ವಿಶ್ವವಿದ್ಯಾನಿಲಯ ಸೇರಿದಂತೆ ಮಂಗಳೂರು, ಬೆಂಗಳೂರು ಉತ್ತರ ಮತ್ತು ಕ್ಯಾಲಿಕತ್ ವಿಶ್ವವಿದ್ಯಾಲಯಗಳು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಖೋಖೋ ಟೂರ್ನಿಗೆ ಅರ್ಹತೆ ಪಡೆದಿವೆ.

ದಾವಣಗೆರೆ ವಿಶ್ವವಿದ್ಯಾನಿಲಯ ಆವರಣದಲ್ಲಿ ಶನಿವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ತಂಡವು ಮದ್ರಾಸ್ ವಿಶ್ವವಿದ್ಯಾಲಯವನ್ನು ೧೩-೧೧ರಿಂದ ಮಣಿಸಿತು. ವಿಜೇತ ತಂಡದ ಟಿ. ಹುಲಗಪ್ಪ (೩.೧೦ ನಿಮಿಷ ಡಾಜಿಂಗ್ ಮತ್ತು ೨ ಅಂಕಗಳು) ಮತ್ತು ಜೆ.ಜಿ.ಶರತ್ (೨.೪೦ ನಿಮಿಷ ಡಾಜಿಂಗ್) ಅವರ ಉತ್ತಮ ಆಟ ಗೆಲುವಿಗೆ ನೆರವಾಯಿತು. ಮದ್ರಾಸ್ ತಂಡದ ತರುಣ್ ವಿಘ್ನೇಶ್ವರನ್ (೨.೧೦ ನಿಮಿಷ ಡಾಜಿಂಗ್ ಮತ್ತು ೩ ಅಂಕಗಳು) ಉತ್ತಮ ಪ್ರದರ್ಶನ ನೀಡಿದರು.

ಇನ್ನೊಂದು ತೀವ್ರ ಸೆಣಸಾಟದ ಪಂದ್ಯದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ೧೬-೧೫ರಿಂದ ಭಾರತೀದಾಸನ್ ವಿಶ್ವವಿದ್ಯಾಲಯವನ್ನು ಸೋಲಿಸಿತು. ಬೆಂಗಳೂರು ತಂಡದ ಐವಾನ್ ಪಾಷಾ ೭ ನಿಮಿಷ ಡಾಜಿಂಗ್ ಮಾಡಿ, ೬ ಅಂಕ ಗಳಿಸಿ ಗೆಲುವಿನ ರೂವಾರಿಯಾದರು. ಎದುರಾಳಿ ತಂಡದ ಹರಿಪ್ರಶಾಂತ್ (೩.೪೦ ನಿ. ಡಾಜಿಂಗ್ ಮತ್ತು ೩ ಅಂಕಗಳು) ಉತ್ತಮ ಆಟವಾಡಿದರು.

ಮಂಗಳೂರು ವಿಶ್ವವಿದ್ಯಾಲಯವು ಮತ್ತೊಂದು ಪಂದ್ಯದಲ್ಲಿ ೧೪-೪ ರಿಂದ ಏಕಪಕ್ಷೀಯವಾಗಿ ಮೈಸೂರು ವಿಶ್ವವಿದ್ಯಾಲಯ ತಂಡವನ್ನು ಸುಲಭವಾಗಿ ಸೋಲಿಸಿ ರಾಷ್ಟ್ರೀಯ ಟೂರ್ನಿಗೆ ಅರ್ಹತೆ ಪಡೆಯಿತು. ವಿಜಯೀ ತಂಡದ ಅಭಿಜಿತ್ (೬ ನಿಮಿಷ ಡಾಜಿಂಗ್) ಮತ್ತು ನಿಖಿಲ್ (೪ ನಿಮಿಷ ಡಾಜಿಂಗ್ ಮತ್ತು ೨ ಅಂಕಗಳು) ಉತ್ತಮ ಆಟ ಪ್ರದರ್ಶಿಸಿದರು.

ಕ್ಯಾಲಿಕತ್ ವಿಶ್ವವಿದ್ಯಾಲಯವು ೧೮-೧೬ರಿಂದ ಕೇರಳ ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿ ಲೀಗ್ ಹಂತಕ್ಕೆ ಪ್ರವೇಶಿಸಿತು. ಕ್ಯಾಲಿಕತ್ ತಂಡದ ಅತುಲ್ ವೇಣು ಅತ್ಯುತ್ತಮ ಆಟವಾಡಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು-ಭೋವಿಶ್ರೀಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳಿ- ನ್ಯಾ.ರೋಣ ವಾಸುದೇವ್ ಕರೆ ಆಸಿಡ್ ದಾಳಿಗೆ ಒಳಗಾದ ನೊಂದ ವ್ಯಕ್ತಿಗಳಿಗೆ ಒಂದು ತಿಂಗಳಲ್ಲೇ ಮಧ್ಯಂತರ ಪರಿಹಾರ ವಿತರಣೆಯಾದವ ಗೊಲ್ಲರ ಸಂಘದ ಆಡಳಿತಾಧಿಕಾರಿ ಅವಧಿ ವಿಸ್ತರಣೆಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಶಾಖಾಧಿಕಾರಿ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನಸಂಸದರ ಕಚೇರಿ ಎದುರು ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು- ಮಾಜಿ ಸಚಿವ ಆಂಜನೇಯ ವಿದ್ಯಾರ್ಥಿವೇತನ ಬಿಡುಗಡೆಗೆ ಸಿಎಂಗೆ ಮನವಿಕುಂಚಿಟಿಗ ಕುಲ ದೇವತೆಗಳ ವಿಶಿಷ್ಟ ಆಚರಣೆ: ಏನಿದು ಶ್ರೀಕಣಿವೆ ಮಾರಮ್ಮನ 'ಸೆಳೆ' ವೈಭವಸಡಗರದ ಹಿರಿಯೂರು ಮಾರಿಕಾಂಬಾ ಜಾತ್ರೆ: ಏಪ್ರಿಲ್ 24ರಂದು ದೇವಿಯ ಬ್ರಹ್ಮರಥೋತ್ಸವ