ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರಂನಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ವರ್ಗದ ಆಸಕ್ತ ರೈತರಿಗಾಗಿ 'ಸಾವಯವ ಪದ್ಧತಿಯಲ್ಲಿ ಸುಸ್ಥಿರ ಸಮಗ್ರ ಕೃಷಿ ಚಟುವಟಿಕೆಗಳು' ವಿಷಯದ ಕುರಿತು 3 ದಿನಗಳ ವಸತಿಯುಕ್ತ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಬಬ್ಬೂರು ಫಾರಂನ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಆರ್ ತಿಳಿಸಿದ್ದಾರೆ.
ತರಬೇತಿಯ ವಿವರ ಹಾಗೂ ವೇಳಾಪಟ್ಟಿ:
ದಿನಾಂಕ: 12-08-2026 ರಿಂದ 14-08-2026 (3 ದಿನಗಳು)
ಸ್ಥಳ: ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರಂ, ಹಿರಿಯೂರು.
ಮೊದಲನೇ ದಿನ (ಆಗಸ್ಟ್ 12): ಬ್ಯಾಡರಹಳ್ಳಿ ಗ್ರಾಮದ ಪ್ರಗತಿಪರ ಸಾವಯವ ಕೃಷಿಕ ಇಂದೂಧರ್ ಅವರಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಸುಸ್ಥಿರ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ. ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಹನುಮಂತನಾಯ್ಕ್ ಅವರಿಂದ ಎರೆಗೊಬ್ಬರ, ಕಾಂಪೋಸ್ಟ್ ತಯಾರಿಕೆ ಮತ್ತು ಜೇನು ಕೃಷಿ ಕುರಿತು ತರಬೇತಿ.
ಎರಡನೇ ದಿನ (ಆಗಸ್ಟ್ 13): ಬಬ್ಬೂರು ಫಾರಂನ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಆರ್. ಅವರಿಂದ ನಿರಂತರ ಸುಸ್ಥಿರ ಇಳುವರಿ ಹಾಗೂ ಪರ್ಯಾಯ ಬೆಳೆಗಳ ಕುರಿತು ಮಾರ್ಗದರ್ಶನ. ನಂತರ ಹಿರಿಯೂರಿನ ಮುಖ್ಯ ಪಶುವೈದ್ಯಾಧಿಕಾರಿ ಡಾ. ನಾಗರಾಜ್ ಅವರಿಂದ ಲಾಭದಾಯಕ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ತಾಂತ್ರಿಕತೆಗಳ ವಿಷಯ ಮಂಡನೆ.
ಮೂರನೇ ದಿನ (ಆಗಸ್ಟ್ 14): ತಿಪಟೂರಿನ 'ಅಕ್ಷಯ ಕಲ್ಪ' ಸಾವಯವ ಸಮಗ್ರ ಕೃಷಿ ಪದ್ಧತಿಯ ಪ್ರಾತ್ಯಕ್ಷಿಕೆ ತಾಕಿಗೆ ರೈತರಿಗೆ ಉಚಿತ ಅಧ್ಯಯನ ಪ್ರವಾಸ.
ನೋಂದಣಿ ಹಾಗೂ ನಿಬಂಧನೆಗಳು: ಆಯ್ಕೆ ಸಂಖ್ಯೆ: ಮೊದಲು ಬಂದ 45 ಆಸಕ್ತ ರೈತರಿಗೆ ಆದ್ಯತೆ. ಕೊನೆಯ ದಿನಾಂಕ: 11-08-2026 ರ ಒಳಗೆ ನೋಂದಾಯಿಸಿಕೊಳ್ಳಬೇಕು. ಸಂಪರ್ಕ ಸಂಖ್ಯೆ: 8277931058 ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು.
ಕಡ್ಡಾಯ ದಾಖಲೆ: ತರಬೇತಿಗೆ ಆಗಮಿಸುವ ರೈತರು ಕಡ್ಡಾಯವಾಗಿ FID ಅಥವಾ ಚುನಾವಣಾ ಗುರುತಿನ ಚೀಟಿ (Voter ID) ತರಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಆರ್. ರಜನಿಕಾಂತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



