Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರಳ ಸಜ್ಜನಿಕೆ ಪ್ರಾಮಾಣಿಕತೆಯ ಗೌಡರು

Advertisement
ಚಂದ್ರವಳ್ಳಿ ನ್ಯೂಸ್, ತುಮಕೂರು:
 ಒಕ್ಕಲಿಗರ ಬದುಕಾದ್ದ ಕೃಷಿಯನ್ನು ನಿಷ್ಟೆಯಿಂದ ಮಾಡಿ ಗೌರವದ ಕೀರ್ತಿ ಗಳಿಸಿದ್ದವರು ಮಾನ್ಯ ಸಿದ್ದೆಗೌಡರು ಹಾಗೂ ರಂಗೇಗೌಡರು.

 ದಿವಂಗತ ಶ್ರೀ ಕೆ ಎಸ್ ಸಿದ್ದೇಗೌಡರು ಹಾಗೂ ದಿವಂಗತ ಶ್ರೀ ರಂಗೇಗೌಡರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೆ ಟಿ ಹಳ್ಳಿ ಗ್ರಾಮದ ಜೋಡಿ ಜಮೀನ್ದಾರರು. ಸಾಮಾಜಿಕ ನೀತಿಯಲ್ಲಿ ಕೆ ಟಿ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರ ವಿಶ್ವಾಸದಲ್ಲಿ ಗೌರವ ಸಂಪಾದಿಸಿದ್ದರು.

 ಗೌಡರ ಮನೆತನಕ್ಕೆ ತಕ್ಕಂತೆ ಕೆ ಟಿ ಹಳ್ಳಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದರು. ಕೃಷಿ ಬದುಕಿನಲ್ಲಿ ಸಾಕಷ್ಟು ಹಿರಿಮೆ ಹೊಂದಿದ್ದ ಗೌಡರ ಬದುಕು 30 ವರ್ಷಗಳ ಹಿಂದಿನ ದಿನಗಳಲ್ಲಿ ತಾಲ್ಲೂಕಿನ ರೈತರಿಗೆ ಆದರ್ಶವಾಗಿತ್ತು.

ಸರ್ವಜನಾಂಗದ ವಿಶ್ವಾಸದ ಅಡಿಯಲ್ಲಿ ಊರಿನ ಮಹತ್ವದ ಕಾರ್ಯಗಳಿಗೆ ಮಾನ್ಯತೆ ನೀಡುತ್ತಿದ್ದರು . ಕೆ ಟಿ ಹಳ್ಳಿ ಸುತ್ತಮುತ್ತಲಿನ ಹತ್ತೂರಿನ  ಜನತೆಯ ಅನೇಕ ವ್ಯಾಜ್ಯಗಳ ವಿಚಾರದಲ್ಲಿ  ನ್ಯಾಯ ಸಮ್ಮತವಾಗಿ ಚರ್ಚಿಸಿ ನ್ಯಾಯದ ಪಾಲನೆಯಲ್ಲಿ ತಿರ್ಮಾನ ಮಾಡಿದ್ದಾರೆ ಇದಕ್ಕೆ ಸಾಕ್ಷಿ ಗುಡ್ಡೆಯಾಗಿ ನನ್ನ ಚಿಕ್ಕ ವಯಸ್ಸಿನಲ್ಲಿ ನಮ್ಮ ಗ್ರಾಮದ ಜನತೆಯ ಮೆಚ್ಚಿಗೆ ಮಾತುಗಳಲ್ಲಿ ಕೇಳಿದ್ದೇನೆ.

ಹಾಗೂ ಕೆಲವು ಸನ್ನಿವೇಶಗಳನ್ನು ಗಮನಿಸಿದ್ದೆನೆ. ಸಿದ್ದೇಗೌಡರ ಕಿರಿಯ ಸಹೋದರರಾದ ಕೆ ಎಸ್ ರಂಗೇಗೌಡರು ಸುಮಾರು 15 ವರ್ಷಗಳ ಕಾಲ ಮಂಗಳವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕಾರ್ಯದಲ್ಲಿ ಜನಪರವಾಗಿ ಗೌರವಾನ್ವಿತವಾದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನರೊಂದಿಗಿನ ವಿಶ್ವಾಸದ ಮೆಚ್ಚಿಗೆ ಗಳಿಸಿದ್ದರು. 

ಈ ಇಬ್ಬರು ಸಹೋದರರು ರಾಮ ಲಕ್ಷ್ಮಣರಂತೆ ಬಾಳಿ ಬದುಕಿದ ನೀತಿ ನಾಗರಿಕತೆಯ ಸಮಾಜಕ್ಕೆ ಆದರ್ಶಪ್ರಾಯ. ಈ ಇಬ್ಬರ ಸಹೋದರರ ವಿಚಾರಗಳು ಈಗಲು ಜನರ ಭಾವನೆಗಳ ಮಾತುಗಳಲ್ಲಿ ಆದರ್ಶದ ಸಂಕೇತವಾಗಿದೆ. ನನಗೂ ನಮ್ಮ ಮನೆತನದ ಹಿರಿಯರು ಬಾಳಿ ಬದುಕಿದ  ಹಲವಾರು  ವಿಚಾರಗಳು ನನ್ನ ನೆನಪಲ್ಲಿ ಅಚ್ಚಳಿಯದೆ ಇದೆ.

ಕೆ ಟಿ ಹಳ್ಳಿಯ ಸಿದ್ದೇಗೌಡರ ಹಾಗೂ ರಂಗೇಗೌಡರ ಮನೆತನದ ಸದಸ್ಯ ನಾನು ಎಂಬುದು ನನ್ನನ್ನೂ ಸೇರಿದಂತೆ ನನ್ನ ಕುಟುಂಬದ ಹಾಗೂ ನಮ್ಮ ರಕ್ತ ಸಂಬಂಧಿಗಳ ಎಲ್ಲಾ ಸದಸ್ಯರೆಲ್ಲರಿಗೂ ಹೆಮ್ಮೆ. ನಮ್ಮ ಮನೆತನದ ಹಿರಿಯರ ಬದುಕಿನ ಇತಿಹಾಸ ಸದಾ ನನ್ನ ಮನದಲ್ಲಿ ಗೌರವದ ಸಂಕೇತವಾಗಿದೆ.
ಲೇಖನ-ರಘು ಗೌಡ
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ