Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

'ಜೀನ್' ಹೇಳಿಕೆ ವಿವಾದ: ಶಾಸಕ ರಂಗನಾಥ್‌ಗೆ ತಿರುಗೇಟು ನೀಡಿದ ನಿಖಿಲ್

Advertisement
Advertisement

ಚಂದ್ರವಳ್ಳಿ ನ್ಯೂಸ್, ​ರಾಮನಗರ/ಕುಣಿಗಲ್:
"ಯಾರ ವಿರುದ್ಧವೂ ವೈಯಕ್ತಿಕ ವಾಗ್ದಾಳಿ ನಡೆಸುವುದು ನನ್ನ ರಾಜಕೀಯ ಸಂಸ್ಕಾರವಲ್ಲ. 'ಜೀನ್' ಎಂಬ ಪದವನ್ನು ರಾಜಕೀಯ ವಿದ್ಯಮಾನಗಳ ಸಾಮಾನ್ಯ ಅರ್ಥದಲ್ಲಿ ಬಳಸಿದ್ದೇನೆಯೇ ಹೊರತು ವೈಯಕ್ತಿಕ ನಿಂದನೆಯ ಉದ್ದೇಶ ನನಗಿರಲಿಲ್ಲ," ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರಿಗೆ ಸ್ಪಷ್ಟನೆ ನೀಡಿದ್ದಾರೆ.

​ರಾಮನಗರದಲ್ಲಿ ನಡೆದ ಸಾಮೂಹಿಕ SIR ಅರ್ಜಿ ವಿತರಣೆ ಹಾಗೂ ಕುಣಿಗಲ್‌ನ ಬೂತ್ ಸಂಖ್ಯೆ 19 ರ ವಿದ್ಯಮಾನಗಳಿಗೆ ಹೋಲಿಸಿ ತಾನು ಆ ಮಾತುಗಳನ್ನಾಡಿದ್ದಾಗಿ ಹೇಳಿರುವ ನಿಖಿಲ್, ಇದೇ ವೇಳೆ ಕಾಂಗ್ರೆಸ್ ನಾಯಕರ ಇಬ್ಬಂದಿ ನಿಲುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

​ಕಾಂಗ್ರೆಸ್‌ನ ಇಬ್ಬಂದಿ ರಾಜಕಾರಣಕ್ಕೆ ಪ್ರಶ್ನೆ:
​ಶಾಸಕ ರಂಗನಾಥ್ ಅವರ ಆಕ್ರೋಶವನ್ನು ಪ್ರಶ್ನಿಸಿರುವ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ನಡೆಗೆ ಪ್ರತಿಯಾಗಿ ಕೆಲವು ನೇರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

​ಕೀಳು ಮಟ್ಟದ ವೈಯಕ್ತಿಕ ದಾಳಿ: "ಹಿಂದೆ ಜೆಡಿಎಸ್‌ನಲ್ಲಿದ್ದು, ಇಂದು ಕಾಂಗ್ರೆಸ್ ಶಾಸಕರಾಗಿರುವವರು ನನ್ನ ತಂದೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ದಿನನಿತ್ಯ ಅತ್ಯಂತ ಕೀಳು ಮಟ್ಟದ ವೈಯಕ್ತಿಕ ದಾಳಿ ಮಾಡುತ್ತಿರುವಾಗ ನಿಮ್ಮ ಈ ಆಕ್ರೋಶ, ಕಳಕಳಿ ಎಲ್ಲಿ ಹೋಗಿತ್ತು?" ಎಂದು ಪ್ರಶ್ನಿಸಿದ್ದಾರೆ.

​'ಖಬರ್ದಾರ್' ಧಮಕಿಗೆ ಮೌನವೇಕೆ?: ಕುಮಾರಣ್ಣನವರ ಒಟ್ಟು ರಾಜಕೀಯ ಅನುಭವಕ್ಕಿಂತಲೂ ಕಡಿಮೆ ವಯಸ್ಸಿನ ಕಾಂಗ್ರೆಸ್ ಶಾಸಕರೊಬ್ಬರು ಬಹಿರಂಗವಾಗಿ ಖಬರ್ದಾರ್ ಕುಮಾರಣ್ಣಎಂದು ಧಮಕಿ ಹಾಕಿದಾಗ ರಂಗನಾಥ್ ಅವರು ಏಕೆ ಧ್ವನಿ ಎತ್ತಲಿಲ್ಲ ಎಂದು ನಿಖಿಲ್ ಆಕ್ಷೇಪಿಸಿದ್ದಾರೆ. ಅಂದು ಧ್ವನಿ ಎತ್ತಿದ್ದರೆ ಇಂದಿನ ನಿಮ್ಮ ನಿಲುವನ್ನು ಗೌರವಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.

​"ಹೆಚ್.ಡಿ. ದೇವೇಗೌಡರ ರಾಜಕಾರಣ ಹಾಗೂ ಆದರ್ಶಗಳನ್ನು ಹತ್ತಿರದಿಂದ ಕಂಡು ಬೆಳೆದವನು ನಾನು. ಅಧಿಕಾರಕ್ಕಾಗಿ ಇಂತಹ ಇಬ್ಬಂದಿ ರಾಜಕಾರಣ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಇನ್ಮುಂದೆಯಾದರೂ ವೈಯಕ್ತಿಕ ಕೆಸರೆರಚಾಟ, ದ್ವೇಷದ ರಾಜಕಾರಣವನ್ನು ಬದಿಗಿಟ್ಟು, ಜನರ ನೈಜ ಸಮಸ್ಯೆಗಳ ಪರವಾಗಿ ಒಟ್ಟಾಗಿ ಹೋರಾಡೋಣ."
ನಿಖಿಲ್ ಕುಮಾರಸ್ವಾಮಿ.

ವೈಯಕ್ತಿಕ ಕೆಸರೆರಚಾಟಕ್ಕೆ ಆಸ್ಪದ ನೀಡದೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ರಾಜಕಾರಣ ಮಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ಶಾಸಕ ರಂಗನಾಥ್ ಅವರಿಗೆ ಹಿತವಚನ ಹೇಳುವ ಮೂಲಕ ವಿವಾದಕ್ಕೆ ರಾಜತಾಂತ್ರಿಕ ತಿರುವು ನೀಡಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.