Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಡತೆ ಮತ್ತು ಅಕ್ಷರದಿಂದ ಗೌರವ ಉಳಿಸಿಕೊಂಡಿದ್ದ ಸಾಹಿತಿ ಉಜ್ಜಿನಪ್ಪ: ಎನ್.ಎಲ್. ಬಸವರಾಜ್ ಶ್ಲಾಘನೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಸ್ವಾರ್ಥರಹಿತವಾಗಿ ಸುಮಾರು ಐದು ದಶಕಗಳ ಕಾಲ ಜನಪರ ಮತ್ತು ನೀರಾವರಿ ವಿಚಾರಗಳ ಬರಹಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದ ಜಿ.ಎಸ್. ಉಜ್ಜಿನಪ್ಪನವರ ಸೇವೆ ಅಮರವಾಗಿದೆ. ಅವರು ಬರಹಗಾರರಾಗಿ
, ಸಾಹಿತಿಯಾಗಿ ಹಾಗೂ ಆಂಗ್ಲ ಭಾಷೆಯ ಸಮರ್ಥ ವರದಿಗಾರರಾಗಿ ಸಲ್ಲಿಸಿರುವ ಸೇವೆ ಎಂದಿಗೂ ಸ್ಮರಣೀಯ" ಎಂದು ಹಿರಿಯ ಪತ್ರಕರ್ತ ಎನ್.ಎಲ್. ಬಸವರಾಜ್ ಹೇಳಿದರು. 

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪನವರ ಸ್ಮರಣಾರ್ಥ ಆಯೋಜಿಸಿದ್ದ 'ನುಡಿನಮನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೈಜ ವರದಿಗಾರಿಕೆಗೆ ಮಾರ್ಗದರ್ಶಕರಾಗಿದ್ದರು
ಚಿತ್ರದುರ್ಗ ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದ ಜಿ.ಎಸ್. ಉಜ್ಜಿನಪ್ಪನವರ ಕಾರ್ಯವೈಖರಿಯನ್ನು ಸ್ಮರಿಸಿದ ಬಸವರಾಜ್ ಅವರು
, "ಉಜ್ಜಿನಪ್ಪನವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾಗಲೂ ಅತ್ಯಂತ ಲವಲವಿಕೆಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸುದ್ದಿ ಸಂಗ್ರಹಿಸುತ್ತಿದ್ದರು.

 ನಾಡಿನ ಪ್ರಸಿದ್ಧ ಕವಿಗಳು ಬರೆದ ಕವಿತೆ ಮತ್ತು ಹಾಡುಗಳನ್ನು ಹಾಡುತ್ತಾ, ಅವುಗಳ ಆಳವಾದ ಅರ್ಥವನ್ನು ವಿಶ್ಲೇಷಿಸುತ್ತಿದ್ದ ಅವರ ಮಾತುಗಳು ಇಂದಿಗೂ ನಮ್ಮ ಕಿವಿಗಳಲ್ಲಿ ಗುನುಗುತ್ತಿವೆ. ಅವರ ನೈಜ ವರದಿಗಳು, ಶಿಸ್ತು ಮತ್ತು ಸ್ನೇಹಪರ ಚಿಂತನೆಗಳು ಇಂದಿನ ಯುವ ಬರಹಗಾರರಿಗೆ ಹಾಗೂ ಪತ್ರಕರ್ತರಿಗೆ ಸದಾ ಮಾರ್ಗದರ್ಶನ ನೀಡುತ್ತವೆ" ಎಂದು ಗುಣಗಾನ ಮಾಡಿದರು.

ಈ ಭಾವಪೂರ್ಣ ನುಡಿನಮನ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಲ್. ಗಿರಿಧರ್, ಪ್ರಧಾನ ಕಾರ್ಯದರ್ಶಿ ಚಿದಾನಂದ್ ಎಂ. ಮಸ್ಕಲ್, ಪತ್ರಕರ್ತರಾದ ಖಂಡೇನಹಳ್ಳಿ ಬಸವರಾಜ್, ರಮೇಶ್ ಬಿದರಿಕೆರೆ, ರಾಜಣ್ಣ, ಶಿವಶಂಕರ್ ಮಠದ್, ಪ್ರಸನ್ನ, ಹನುಮಂತರಾಯ, ಸಾಮಾಜಿಕ ಕಾರ್ಯಕರ್ತ ಚಮನ್ ಷರಿಪ್, ಡಾ. ತ್ರಿವೇಣಿ ಸೇರಿದಂತೆ ಹಲವು ಗಣ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದು ಮೃತರಿಗೆ ಆದರದ ನಮನ ಸಲ್ಲಿಸಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಕರ್ತರ ಬೇಡಿಕೆ ಬಗ್ಗೆ ಚರ್ಚೆ, ಸಿಎಂ ಡಿಕೆಶಿ ಭೇಟಿ ಮಾಡಿದ ಕೆಯುಡಬ್ಲೂಜೆ ಅಧ್ಯಕ್ಷ ತಗಡೂರುಮಕ್ಕಳ ಅಪರಾಧಗಳು; ಕಳೆದುಹೋಗುತ್ತಿರುವ ಮುಗ್ಧತೆಎಲ್ಲಾ ಶಕ್ತಿಯೂ ನಮ್ಮೊಳಗೆ ಇದೆ ಅದರಲ್ಲಿ ವಿಶ್ವಾಸವಿರಬೇಕು:ಮಾತಾಜೀ ತ್ಯಾಗಮಯೀಗ್ಯಾರಂಟಿ ನೆಪದಲ್ಲಿ ಬೊಕ್ಕಸಕ್ಕೆ ಕನ್ನ, ತಕ್ಷಣ ಶ್ವೇತಪತ್ರ ಹೊರಡಿಸಿ: ಗೃಹಲಕ್ಷ್ಮಿ ಹಗರಣದ ವಿರುದ್ಧ ಜೆಡಿಎಸ್ ಆಕ್ರೋಶಬಿಡದಿ ಟೌನ್‌ಶಿಪ್ ಸಭೆ: ಸ್ಥಳ ಮತ್ತು ದಿನಾಂಕ ಬದಲಾಯಿಸಲು ಡಿ.ಕೆ. ಶಿವಕುಮಾರ್‌ಗೆ ಹೆಚ್.ಡಿ. ಕುಮಾರಸ್ವಾಮಿ ಪತ್ರಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಕ್ರೀಡಾ ಸಂಸ್ಥೆಗಳಿಗೆ 11.65 ಕೋಟಿ ವಿಶೇಷ ಅನುದಾನ, ಒಲಿಂಪಿಕ್ ಪದಕ ವಿಜೇತರಿಗೆ ಕೋಟ್ಯಂತರ ರೂ. ಬಹುಮಾನ ಘೋಷಿಸಿದ ಸಿಎಂ ಡಿ.ಕೆ. ಶಿವಕುಮಾರ್"ಕ್ಯಾಮೆರಾ ಹಿಂದೆ ಲೂಟಿ, ಮುಂದೆ ನಾಟಕದ ಚಾಟಿ": ಡಿಕೆಶಿ-ಕೃಷ್ಣ ಬೈರೇಗೌಡ ಶೀತಲ ಸಮರ ಬಯಲಿಗೆಳೆದ ಆರ್. ಅಶೋಕ್ಗೃಹಲಕ್ಷ್ಮಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿ.ಟಿ. ರವಿ ಗಂಭೀರ ಆರೋಪ6ನೇ ತರಗತಿ ಪ್ರವೇಶಕ್ಕೆ ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ನೇರ ದಾಖಲಾತಿ