ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರ ಗ್ರಾಮದ ಸರ್ವೆ ನಂ. 34ರಲ್ಲಿ ರಾಜಕಾಲುವೆ , 37/1,2 ಮತ್ತು 39/1,2ರಲ್ಲಿ ಹಳ್ಳ ಹಾಗೂ 40ರಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ್ದ ರೈತರ ಜಮೀನನ್ನು ಪೊಲೀಸ್ ಭದ್ರತೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು.
ಕೆಆರ್ಎಸ್ ಪಕ್ಷದ ಕಾರ್ಯಕರ್ತ ಹೊಲೇರಹಳ್ಳಿ ಗ್ರಾಮದ ಜಯಣ್ಣ ಸಲ್ಲಿಸದ್ದ ದೂರು ಅರ್ಜಿಯನ್ನು ಪರಶೀಲಿಸಿದ ತಹಶೀಲ್ದಾರ್ ಡಾ. ಮಲ್ಲಪ್ಪ ಕೆ. ಯರಗೋಳರವರು ಭೂಮಾಪಕರು, ಪೊಲೀಸರು, ಕಂದಾಯ ಇಲಾಖೆ ಸಿಬ್ಬಂದಯೊಂದಿಗೆ ದೊಡ್ಡಬೆಳವಂಗಲ ಹೋಬಳಿಯ ಉಪತಹಶೀಲ್ದಾರ್, ರಾಜಸ್ವ ನಿರೀಕ್ಷಕರಿಗೆ ಸೂಚಿಸಿ ಆದೇಶ ನೀಡಿದ್ದರು. ತಹಶೀಲ್ದಾರ್ ಆದೇಶದಂತೆ ದೊಡ್ಡಬೆಳವಂಗಲ ಹೋಬಳಿ ರಾಜಸ್ವ ನಿರೀಕ್ಷಕ ರಾಜಶೇಖರ್, ಭೂ ಮಾಪಕರಾದ ಪ್ರಕಾಶ್ ರೆಡ್ಡಿ, ವಿಎ ಮಾಲಿಂಗಯ್ಯ ಸಮ್ಮುಖದಲ್ಲಿ ಸರ್ವೆ ಮಾಡಿ, ಒತ್ತುವರಿದಾರರನ್ನು ಗುರುತಿಸಿ ನೋಟಿಸ್ ಕೊಟ್ಟ ನಂತರ ತಹಶೀಲ್ದಾರ್ ಸೂಚನೆ ಮೇರೆಗೆ ಇಂದು ರಾಜಕಾಲುವೆಯನ್ನು ಅಳೆದು ತೆರವುಗೊಳಿಸಲಾಯಿತು.
ರಾಜಕಾಲುವೆ ಒತ್ತುವರಿ ವಿರುದ್ಧ ಕಳೆದ ಎರಡು ವರ್ಷದಿಂದ ಹೋರಾಟ ನಡೆಸುತ್ತಿರುವ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಮಾತನಾಡಿ ನಮ್ಮ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ.
ಕೆಆರ್ಎಸ್ ಪಕ್ಷ ನಿರಂತರ ಹೋರಾಟ ಮಾಡುತ್ತಿದ್ದು ಅಧಿಕಾರಿಗಳು ಒತ್ತುವರಿದಾರರಿಗೆ ಸಾಕಷ್ಟು ಬಾರಿ ನೋಟಿಸ್ ನೀಡಿದರೂ ಕಿಂಚಿತ್ತು ಬೆಲೆ ಕೊಡದೆ ತಮ್ಮ ಪಾಡಿಗೆ ತಾವು ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದರು.
ಇಂದು ತಹಶೀಲ್ದಾರ್ ಸೂಚನೆ ಮೇರೆಗೆ ಒತ್ತುವರಿಯನ್ನು ತೆರವುಗೊಳಿಸಿ ಯಶಸ್ವಿಯಾದರು.
ಕೆಆರ್ಎಸ್ ಸೇನಾನಿಗಳಾದ ನಾವು ಸಾರ್ವಜನಿಕರ ಆಸ್ತಿಯನ್ನು ಉಳಿಸಿದ್ದೇವೆ. ಇದು ಕೆಆರ್ಎಸ್ ಪಕ್ಷಕ್ಕೆ ತಂದ 4ನೇ ಜಯವಾಗಿದೆ. ಮೊದಲನೇಯದು ಗುಂಡುತೋಪು, ಎರಡನೇಯದು ಸ್ಮಶಾನ, ಮೂರನೇಯದು ಕುರಿ ಮಂದೆ ಜಾಗ ತೆರವುಗೊಳಿಸಿ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲಾಗಿದೆ ಎಂದರು.
ಕೆಆರ್ಎಸ್ ಪಕ್ಷಕದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಚಿಕ್ಕೆಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ರೈತ ಸಂಘ ಘಟಕದ ಕಾರ್ಯದರ್ಶಿ ಧನಂಜಯ, ಪ್ರಧಾನ ಕಾರ್ಯದರ್ಶಿಯಾದ ವಿಶ್ವನಾಥ್ ದೊಡ್ಡಬಳ್ಳಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಕಾರ್ಯದರ್ಶಿಯಾದ ಜಯರಾಮ್, ರಾಮಚಂದ್ರಯ್ಯ, ಸುಬ್ರಮಣಿ, ಶ್ರೀನಿವಾಸ್, ನೆಲಮಂಗಲ ತಾಲ್ಲೂಕಿನ ನರಹರಿ ಸೇರಿದಂತೆ ಕೆ ಆರ್ ಎಸ್ ಪಕ್ಷದ ಸೈನಿಕರು ಉಪಸ್ಥಿತರಿದ್ದರು.



