Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿತ್ರದುರ್ಗ ನಿವಾಸಿಗಳ ಸಂಕಷ್ಟ ಪರಿಹರಿಸಿ: ಸಂಸದ ಗೋವಿಂದ ಎಂ.ಕಾರಜೋಳ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
  ಚಿತ್ರದುರ್ಗ ನಗರದ ೧೮ ಮತ್ತು ೧೯ ವಾರ್ಡಿಗೆ ಹೊಂದಿಕೊಂಡಿರುವ ಮೇದೆಹಳ್ಳಿ ರಸ್ತೆಯ ವಿಜಯನಗರ ಬಡವಾಣೆಯ ಸುಮಾರು ೮೦ ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರಾಗುವ ಸಂಭವವಿದ್ದು ಇವರ ಸಂಕಷ್ಟವನ್ನು ಕೂಡಲೇ ಪರಿಹರಿಸಿ ಎಂದು  ವಿಜಯನಗರ ಬಡಾವಣೆ ನಿವಾಸಿಗಳ ಕೋರಿಕೆಯ ಮೇರೆಗೆ ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿಯವರೊಂದಿಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಚಿತ್ರದುರ್ಗ ನಗರಸಭೆ ಆಯುಕ್ತರಾದ ರೇಣುಕಾ ಅವರಿಗೆ ಸಂಸದ ಗೋವಿಂದ ಎಂ.ಕಾರಜೋಳ ಸೂಚನೆ ನೀಡಿದರು.

    ವಿಜಯನಗರ ಬಡಾವಣೆಯಲ್ಲಿರುವ ಸುಮಾರು ೮೦ ಕ್ಕೂ ಹೆಚ್ಚು ಮನಗೆಳನ್ನು ರಸ್ತೆಯ ನೆಪವೊಡ್ಡಿ ನಗರಸಭೆಯವರು ಸುಮಾರು ೧೦ ರಿಂದ ೧೨ ಅಡಿಗಳಷ್ಟನ್ನು ಏಕಾ ಏಕೀ ಒಡೆದುಹಾಕಿದ್ದಾರೆ. ಇದರಿಂದ ೮೦ ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗಿವೆ, ಕೆಲವರ ಮನೆಗಳಲ್ಲಿ ಅಡುಗೆ ಮನೆ ಕೆಲವರ ಮನೆಯಲ್ಲಿ ಶೌಚಾಲಯ ಈ ರೀತಿ ನಗರಸಭೆಯವರು ಒಡೆದುಹಾಕಿದ್ದಾರೆ. ಈ ಬಗ್ಗೆ ಸಂಸದರನ್ನು ಭೇಟಿ ಮಾಡಿದ ನಿರಾಶ್ರಿತರು ಸಂಸದರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಈ ಕುಟುಂಬಗಳಿಗೆ ಈ ಹಿಂದೆ ಎಂ.ಕೆ.ಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾದಾರ ಚನ್ನಯ್ಯ ಮಠದ ಹಿಂಭಾಗ ಸುಮಾರು ೨ ಎಕರೆ ಜಾಗದಲ್ಲಿ ಈ ಎಲ್ಲಾ ಕುಟುಂಬಗಳಿಗೆ ಪರ್ಯಾಯವಾಗಿ ನಿವೇಶನಗಳನ್ನು ಹಂಚಲಾಗಿತ್ತು, ಆದರೆ ಅವರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲೇ ಇಲ್ಲ, ಎಂ.ಕೆ.ಹಟ್ಟಿ ಗ್ರಾಮ ಪಂಚಾಯತಿಯವರು ಹಂಚಿಕೆ ಮಾಡಲಾದ ಜಾಗ ನಮಗೆ ಸೇರಿದ್ದು ಎಂದು ಖ್ಯಾತೆ ತಗೆದು, ವಿಜಯನಗರ ಬಡಾವಣೆಯ ಜನರಿಗೆ ಹಕ್ಕುಪತ್ರ ಸಿಗದಂತೆ ನೋಡಿಕೊಂಡಿದ್ದಾರೆ ಎನ್ನುವುದು ವಿಜಯ ನಗರ ಬಡಾವಣೆ ನಿವಾಸಿಗಳು ಸಂಸದರ ಎದುರು ಅಳಲು ತೋಡಿಕೊಂಡರು. ಒಟ್ಟಾರೆಯಾಗಿ ವಿಜಯನಗರ ಬಡಾವಣೆ ನಿವಾಸಿಗಳಿಗೆ ವಿಜಯನಗರದಲ್ಲೂ ನೆಮ್ಮದಿಯ ಜೀವನವಿಲ್ಲ, ಅತ್ತ ಎಂ.ಕೆ.ಹಟ್ಟಿ ಗ್ರಾಮ ಪಂಚಾಯತಿಯಿಂದ ಹಂಚಿಕೆ ಮಾಡಿದ ನಿವೇಶನಕ್ಕೂ ಹಕ್ಕುಪತ್ರವಿಲ್ಲದಂತಾಗಿ ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ.

    ಒಟ್ಟಾರೆಯಾಗಿ ಇಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಈ ರೀತಿ ಏಕಾಏಕೀ ಮನೆಗಳನ್ನು ಒಡೆದುಹಾಕುವುದು ಖಂಡನೀಯ, ಕೂಡಲೇ ಈ ನಿವಾಸಿಗಳ ಮನೆಗಳನ್ನು ಕೂಡಲೇ ಸರಿಪಡಿಸಿಕೊಡಿ ಅಥವಾ ಈ ಮೊದಲು ಇವರುಗಳಿಗೆ ಹಂಚಿಕೆ ಮಾಡಲಾಗಿದ್ದ ನಿವೇಶನಗಳ ಹಕ್ಕುಪತ್ರಗಳನ್ನಾದರೂ ನೀಡಿ ಎಂದು ತಾಕೀತು ಮಾಡಿದರು.  ಇದನ್ನು ಯಾವ ರೀತಿ ಸರಿಪಡಿಸಿಕೊಡುತ್ತೀರಿ ಎಂದು ನಗರಸಭೆ ಆಯುಕ್ತರನ್ನು ಪ್ರಶ್ನಿಸಿದರು, ಇದಕ್ಕೆ ಉತ್ತರಿಸಿದ ಆಯುಕ್ತರು ೨೦ ದಿನಗಳ ಒಳಗಾಗಿ ಆಗಿರುವ ಲೋಪವನ್ನು ಸರಿಪಡಿಸಿ ಅನಾನುಕೂಲತೆಯನ್ನು ಸರಿಪಡಿಸಿಕೊಡುವುದಾಗಿ ಸಂಸದರಿಗೆ ಭರವಸೆ ನೀಡಿದರು.        

 ಸಂಸದರ ಜೊತೆ ಸ್ಥಳ ಪರಿಶೀಲನೆ ವೇಳೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಮುರುಳಿ, ಮುಖಂಡರಾದ ಮಾಧುರಿ ಗಿರೀಶ್, ಇನ್ನು ಅನೇಕರು ಜೊತೆಗಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ