Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಯಿ ಚಪಲಕ್ಕೆ ಮಾತನಾಡುವವರಿಗೆ ಜೆಡಿಎಸ್‌ಕಾರ್ಯಕರ್ತರೇ ಉತ್ತರ ನೀಡಲಿದ್ದಾರೆ: ಕುಮಾರಸ್ವಾಮಿ ತಿರುಗೇಟು

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಾಯಿ ಚಪಲಕ್ಕೆ ಮಾತನಾಡುವವರಿಗೆ ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರೇ ತಕ್ಕ ಉತ್ತರ ಕೊಡಲಿದ್ದಾರೆ" ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಗುಡುಗಿರುವ ಅವರು, ರಾಜಕೀಯ ಲಾಭಕ್ಕಾಗಿ ಹಾಗೂ ಅಧಿಕಾರ ಉಳಿಸಿಕೊಳ್ಳಲು ಇತರರನ್ನು ಟೀಕಿಸುವ ನಾಯಕರಿಗೆ ಜನರೇ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

​'ಬ್ಲೂ ಫಿಲ್ಮ್', 'ಪೋಸ್ಟರ್' ಅಂಟಿಸುವ ಖಯಾಲಿ ಇನ್ನೂ ಬಿಟ್ಟಿಲ್ಲ!

​ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ತೀಕ್ಷ್ಣ ಪದಗಳಲ್ಲಿ ವಾಗ್ದಾಳಿ ಮುಂದುವರಿಸಿರುವ ಕುಮಾರಸ್ವಾಮಿ ಅವರು, "ಡಿಕೆ ಶಿವಕುಮಾರ್‌ಅವರು ಸಿಎಂ ಆದಮೇಲೂ 'ಬ್ಲೂ ಫಿಲ್ಮ್‌' ಮತ್ತು 'ಪೋಸ್ಟರ್‌' ಅಂಟಿಸುವ ತಮ್ಮ ಹಳೆಯ ಖಯಾಲಿಯನ್ನು ಇನ್ನೂ ಬಿಟ್ಟಿಲ್ಲ" ಎಂದು ಲೇವಡಿ ಮಾಡಿದ್ದಾರೆ.

​"ಅಧಿಕಾರದಲ್ಲಿದ್ದರೂ ಹಳೆ ಚಾಳಿಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಅವರ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತದೆ" ಎಂದು ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​​ಕಾರ್ಯಕರ್ತರೇ ಉತ್ತರ ನೀಡುತ್ತಾರೆ: ಜೆಡಿಎಸ್ ಕಾರ್ಯಕರ್ತರು ಇಂತಹ ರಾಜಕೀಯ ಟೀಕೆಗಳಿಗೆ ತಕ್ಕ ಸಮಯದಲ್ಲಿ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

​ಕುರ್ಚಿ ಉಳಿಸಿಕೊಳ್ಳುವ ಹಪಾಹಪಿ: ಕೇವಲ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

​ಹಳೇ ಖಯಾಲಿ ವಿರುದ್ಧ ವಾಗ್ದಾಳಿ: ಉನ್ನತ ಹುದ್ದೆಯಲ್ಲಿದ್ದರೂ 'ಬ್ಲೂ ಫಿಲ್ಮ್' ಹಾಗೂ 'ಪೋಸ್ಟರ್' ರಾಜಕಾರಣದ ಹಳೆಯ ಚಾಳಿಯಿಂದ ಹೊರಬಂದಿಲ್ಲ ಎಂದು ಟೀಕಿಸಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆ ಶೀಘ್ರ ಜಾರಿಗೆ ಕೆಯುಡಬ್ಲ್ಯೂಜೆ ಆಗ್ರಹಜೂನ್ 20ರಂದು ಜಿಲ್ಲಾಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ತಪಾಸಣೆಟಿ. ಎಂ. ಸಿ. ಬ್ಯಾಂಕ್ ಸರ್ವ ಸದಸ್ಯರ ಸಭೆದೊಡ್ಡಬಳ್ಳಾಪುರ ತಿರುವಣ್ಣ ಮಲೈ ಮಾರ್ಗದ ಕೆಎಸ್ಆರ್ ಟಿಸಿ ಸೇವೆ ಮುಂದುವರೆಸಲು ಒತ್ತಾಯಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಗೌರವ ಪುರಸ್ಕಾರ"ಸಿಎಂ ಆದ ಮೇಲಾದರೂ ನೀಲಿ ಚಿತ್ರ, ಪೋಸ್ಟರ್ ಮಾಡೋದು ಬಿಡ್ತಾರೆ ಅಂದ್ಕೊಂಡಿದ್ದೆ" – ಡಿಕೆಶಿ ವಿರುದ್ಧ ಹೆಚ್‌ಡಿಕೆ ಬಾಂಬ್!ಹಿರಿಯೂರಿನಲ್ಲಿ ರೈತರ ಕುಂದುಕೊರತೆ ಸಭೆ: ವಿವಿಧ ಇಲಾಖೆಗಳಿಂದ ಸ್ಥಳದಲ್ಲೇ ಪರಿಹಾರಮಧ್ಯರಾತ್ರಿ ಸ್ನೇಹಿತನಿಗೆ ಕರೆ ಮಾಡಿ ಪಿಎಸ್‌ಐ ಬಸವರಾಜ ಹೆರೂರ್ ಆತ್ಮಹತ್ಯೆ!ವಿಧಾನ ಪರಿಷತ್ ಚುನಾವಣೆ ತಲ್ಲಣ; ಕ್ರಾಸ್ ವೋಟಿಂಗ್ ಭೀತಿಯಲ್ಲಿ ಕಾಂಗ್ರೆಸ್ ಶಾಸಕರುಪಿಎಚ್‌ಡಿ ವಿದ್ಯಾರ್ಥಿನಿ ಲೈಂಗಿಕ ಸಂಪರ್ಕ; ಪ್ರಾಧ್ಯಾಪಕ ದೇವರಾಜನ್ ಅಮಾನತು