ಸಿದ್ದರಾಮಯ್ಯಗೆ ಸರ್ಕಾರದಲ್ಲಿ ಬಿಗಿ ಹಿಡಿತ ಇಲ್ಲದ್ದು ಮತ್ತೆ ಮತ್ತೆ ಸಾಬೀತು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಣಕಾಸು ಇಲಾಖೆಯನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿರುವ ಸಿದ್ದರಾಮಯ್ಯಗೆ ಸರ್ಕಾರದಲ್ಲಿ ಬಿಗಿ ಹಿಡಿತ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.  

ಐದಾರು ತಿಂಗಳಿಂದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿಲ್ಲ. ಈ ವಿಚಾರದ ಬಗ್ಗೆ ರಾಜ್ಯದ ಮುಖ್ಯಮಂತ್ರಿಗೆ ಮಾಹಿತಿಯೇ ಇಲ್ಲ ಎನ್ನುವುದು ನಿಜಕ್ಕೂ ಬೇಜಾವ್ದಾರಿತನದ್ದು ಎಂದು ವ್ಯಂಗ್ಯವಾಡಿದೆ.  

ಈ ಹಿಂದೆ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಾದ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅಕ್ರಮ ನಡೆದಾಗಲು ಸಿದ್ದರಾಮಯ್ಯ ಎಚ್ಚೆತ್ತುಕೊಂಡಿಲ್ಲ. 

ಹಗರಣಗಳಲ್ಲೇ ಮುಳುಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಬೊಕ್ಕಸ ಬರಿದು ಮಾಡಿಕೊಂಡಿರುವ ಸ್ವಯಂಘೋಷಿತ ಹಣಕಾಸು ತಜ್ಞ ಸಿದ್ದರಾಮಯ್ಯ, ಹಣಕಾಸು ಇಲಾಖೆ ನಿರ್ವಹಣೆಯಲ್ಲಿ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

Share This Article
error: Content is protected !!
";