ನಕಲಿ ಗಾಂಧಿ ಪರಿವಾರದವರು, ಪದಾಧಿಕಾರಿಗಳು ಇರುವಷ್ಟೂ ಮತಗಳು ಕಾಂಗ್ರೆಸ್‌ ಪಕ್ಷಕ್ಕೆ ಬೀಳುತ್ತಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂಡಿಯಾ ಎಂಬ ಹೆಸರಿನಲ್ಲಿ ಒಕ್ಕೂಟ ರಚಿಸಿದ್ದ ಕಾಂಗ್ರೆಸ್‌ಈಗ ಈಸ್ಟ್‌ಇಂಡಿಯಾ ಕಂಪನಿಯಂತೆ ನಾಮಾವಶೇಷದ ಹಾದಿಯಲ್ಲಿದೆ. ದೇಶವನ್ನು ಬಹುಕಾಲ ಆಳಿದ ಭಾರತೀಯ ಕಾಂಗ್ರೆಸ್ ಪಕ್ಷ ಇಂದು ಅಕ್ಷರಶಃ ನೆಲಕಚ್ಚಿದೆ. ಕಾಂಗ್ರೆಸ್‌ಎಂಬ ಹೆಸರಿನಲ್ಲಿ ನಕಲಿ ಗಾಂಧಿ ಪರಿವಾರದವರು
, ಪದಾಧಿಕಾರಿಗಳು ಇರುವಷ್ಟೂ ಮತಗಳು ಕಾಂಗ್ರೆಸ್‌ಪಕ್ಷಕ್ಕೆ ಬೀಳುತ್ತಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ದೇಶದ ಜನರು ಕಾಂಗ್ರೆಸ್‌ಪಕ್ಷವನ್ನು ಎಡಗಾಲಿನಲ್ಲಿ ಒದ್ದು ತಿರಸ್ಕರಿಸುತ್ತಿರುವುದಕ್ಕೆ ದೆಹಲಿ ಫಲಿತಾಂಶವೇ ಸಾಕ್ಷಿಯಾಗಿದೆ. 70 ಕ್ಷೇತ್ರಗಳ ಪೈಕಿ ಕೇವಲ 3 ಕ್ಷೇತ್ರಗಳಲ್ಲಷ್ಟೇ ಕಾಂಗ್ರೆಸ್‌ಪಕ್ಷ ಠೇವಣಿ ಉಳಿಸಿಕೊಳ್ಳಲು ಶಕ್ತವಾಗಿದೆ. ದೇಶವನ್ನು ಆವರಿಸಿದ್ದ ಕಾಂಗ್ರೆಸ್‌ಎಂಬ ಮಾಯೆ, ದೆಹಲಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ಎಂಬ ದೈತ್ಯ ಪಕ್ಷ 67 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಳ್ಳುತ್ತಿದೆ ಎಂದರೆ ಕಾಂಗ್ರೆಸ್‌ಪಕ್ಷದ ಬಾಗಿಲು ಬಂದ್‌ಮಾಡುವುದೇ ಸೂಕ್ತವಾಗಿದೆ ಎಂದು ಬಿಜೆಪಿ ಸಲಹೆ ನೀಡಿದೆ.

- Advertisement - 

ದಿನ ಬೆಳಗಾದರೆ ಜಾತಿ, ದಕ್ಷಿಣ – ಉತ್ತರ, ಸಂವಿಧಾನ, ತೆರಿಗೆ ಎಂದು ಬೊಬ್ಬೆ ಹಾಕುವ ರಾಹುಲ್ ಗಾಂಧಿ ಅವರಿಗೆ ಇದಕ್ಕಿಂತ ಮುಖಭಂಗ ಬೇರಾವುದೂ ಇಲ್ಲ, ಸಕ್ರಿಯ ರಾಜಕಾರಣಕ್ಕೆ ರಾಜೀನಾಮೆ ನೀಡುವುದೇ ಒಳಿತು ಎಂದು ಬಿಜೆಪಿ ತಾಕೀತು ಮಾಡಿದೆ.

- Advertisement - 
Share This Article
error: Content is protected !!
";